ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಬೆಂಗಳೂರಿನಿಂದ ಘಂಟೆ, ಪೂಜಾ ಸಾಮಾಗ್ರಿ ರವಾನೆ

Ayodhya Ram Mandir: ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿ 22ಕ್ಕೆ ನೂತನ ರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಘಂಟೆ ಮತ್ತು ಪೂಜಾ ಸಾಮಾಗ್ರಿಗಳ ರವಾನೆ ಮಾಡಲಾಗಿದೆ. ಉದ್ಯಮಿ ರಾಜೇಂದ್ರ ನಾಯ್ಡು ಎಂಬುವವರು ಒಟ್ಟು 30 ಘಂಟೆಗಳನ್ನು ಅರ್ಪಣೆ ಮಾಡುತ್ತಿದ್ದಾರೆ.

ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಬೆಂಗಳೂರಿನಿಂದ ಘಂಟೆ, ಪೂಜಾ ಸಾಮಾಗ್ರಿ ರವಾನೆ
ಘಂಟೆಗಳು
Follow us
| Updated By: Digi Tech Desk

Updated on:Dec 28, 2023 | 11:12 AM

ಬೆಂಗಳೂರು, ಡಿಸೆಂಬರ್​​ 15: ಇಡೀ ದೇಶದ ಜನತೆ ಕಾತುರದಿಂದ ಕಾಯುತ್ತಿರುವ ಅಯೋಧ್ಯೆ ರಾಮಮಂದಿರ (Ayodhya Ram Mandir) ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜನವರಿ 22ಕ್ಕೆ ನೂತನ ರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನ ಕಾರ್ಯಕ್ರಮ ಜರುಗಲಿದೆ. ಅಯೋಧ್ಯೆ ರಾಮಮಂದಿರಕ್ಕೆ ರಾಜಧಾನಿ ಬೆಂಗಳೂರಿನಿಂದ ಘಂಟೆ ಮತ್ತು ಪೂಜಾ ಸಾಮಾಗ್ರಿಗಳ ರವಾನೆ ಮಾಡಲಾಗಿದೆ. ಬೆಂಗಳೂರಿನ ಉದ್ಯಮಿ ರಾಜೇಂದ್ರ ನಾಯ್ಡು ಎಂಬುವವರು ಘಂಟೆ ಮತ್ತು ಪೂಜಾ ಸಾಮಾಗ್ರಿಗಳನ್ನು ಅರ್ಪಣೆ ಮಾಡಿದ್ದಾರೆ. ಇಂದು ನಗರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿದ್ದು, ನಾಳೆ ಆಯೋಧ್ಯೆಗೆ ಕಳುಹಿಸಿಕೊಡಲಾಗುತ್ತಿದೆ.

ಉದ್ಯಮಿ ರಾಜೇಂದ್ರ ನಾಯ್ಡು ಅವರು 5 ತಿಂಗಳ ಹಿಂದೆ ಘಂಟೆಗಳ ಸ್ಯಾಂಪಲ್ ನೀಡಿದ್ದರು. ರಾಮಮಂದಿರಕ್ಕೆ ಎಲ್ಲಾ ಘಂಟೆಗಳು ಬೆಂಗಳೂರಿನಿಂದ ರವಾನೆಯಾಗಲಿವೆ. ಸದ್ಯ 20 ಚಿಕ್ಕ ಮತ್ತು 10 ದೊಡ್ಡದು ಸೇರಿದಂತೆ ಒಟ್ಟು 30 ಘಂಟೆಗಳು ರವಾನೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದ ಅರ್ಚಕ ಹುದ್ದೆಗೆ ಬಂತು ಬರೋಬ್ಬರಿ 3000 ಅರ್ಜಿ!

ಆಗಮ ಶಾಸ್ತ್ರದ ಪ್ರಕಾರ ಘಂಟೆಗಳ ರಚನೆ‌ ಮಾಡಿದ್ದು, ಒಂದು ಸಲ ಘಂಟೆ ಬಾರಿಸಿದರೆ ಓಂ ನಾದ ಹೊರಹೊಮ್ಮುತ್ತದೆ. 45 ದಿನಗಳಿಂದ ಘಂಟೆಗಳ ತಯಾರಿ ಮಾಡಲಾಗಿದೆ. ಸದ್ಯ ಘಂಟೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪಾರ್ಯಾಟನೆ ಮಾಡಿ ನಂತರ ರಾಮಮಂದಿರಕ್ಕೆ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಅರ್ಚಕರಿಗಾಗಿ ಪರೀಕ್ಷೆ, ಸಂದರ್ಶನ, ದಿನಕ್ಕೆ ಐದು ಬಾರಿ ನಡೆಯಲಿದೆ ಆರತಿ

ಘಂಟೆಗಳು ಅಷ್ಟೇ ಅಲ್ಲದೇ ಬೆಳ್ಳಿಯ ದೀಪದ ಕಂಬಗಳು, ಮಂಗಳಾರತಿ ದೀಪಗಳನ್ನು ಸಹ ನೀಡಲಾಗಿದೆ. ಈ ಘಂಟೆಗಳನ್ನ ರಾಮ ಮಂದಿರದ ಗರ್ಭಗುಡಿಯ ಮುಂಭಾಗದಲ್ಲಿ ಬಳಕೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ರಾಮಮಂದಿರಕ್ಕೆ ಬೆಂಗಳೂರಿನಿಂದಲೇ ಹೋಗಲಿವೆಯಂತೆ.

ಉದ್ಘಾಟನೆ ಯಾವಾಗ?

ಅಯ್ಯೋಧೆ ರಾಮಮಂದಿರ ನಿರ್ಮಾಣ ಅಂತಿಮ ಹಂತದಲ್ಲಿದ್ದು, 2024 ಜನವರಿಯಲ್ಲಿ ಮಂದಿರವನ್ನು ಲೋಕಾರ್ಪಣೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಇತ್ತೀಚೆಗೆ ರಾಮಮಂದಿರ ಬಗ್ಗೆ ಮಾಹಿತಿ ನೀಡಿದ್ದ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು, ಈ ವರ್ಷದ ಡಿಸೆಂಬರ್‌ನಲ್ಲಿ ದೇವಾಲಯದ ನೆಲ ಅಂತಸ್ತು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ ರಾಮಲಲ್ಲಾನ್ನು ಪ್ರತಿಷ್ಠಾಪಿಸುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಮುಂದಿನ ವರ್ಷ ಜನವರಿ ಕೊನೆಯ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:44 pm, Fri, 15 December 23