Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ

ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು ವಾರಕ್ಕೊಮ್ಮೆ ಬರೋ ಅಲ್ಪಸ್ವಲ್ಪ ನೀರನ್ನೇ ಕಾಯುವ ಇಲ್ಲಿನ ಜನರು, ದುಪ್ಪಟ್ಟು ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸಿದ್ರೂ ನೀರಿನ ಬವಣೆ ಮುಗಿಯುತ್ತಿಲ್ಲ. ಜೊತೆಗೆ ನೀರಿನ ಮಾಫಿಯಾದಿಂದ ಬೇಸತ್ತಿದ್ದಾರೆ.

ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ
ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ
Follow us
TV9 Web
| Updated By: ಆಯೇಷಾ ಬಾನು

Updated on: Mar 04, 2024 | 3:19 PM

ಬೆಂಗಳೂರು, ಮಾರ್ಚ್​.04: ರಾಜಧಾನಿಯ ಜನರು ನೀರಿಲ್ಲ ನೀರಿಲ್ಲ ಅಂತಾ ಪರದಾಡುತ್ತಿದ್ರೆ, ಅತ್ತ ಭೂಮಿಯ ಒಡಲಲ್ಲಿರೋ ಅಲ್ಪಸ್ವಲ್ಪ ನೀರು ಕೂಡ ಟ್ಯಾಂಕರ್ ಮಾಫಿಯಾದಿಂದ (Tanker Mafia) ಜನರಿಗೆ ಸಿಗದಂತಾಗಿದೆ. ಸಿಲಿಕಾನ್ ಸಿಟಿ (Bengaluru) ಜನರ ನೀರಿನ ಸಮಸ್ಯೆಯನ್ನ (Water Crisis) ಅನಾವರಣ ಮಾಡ್ತಿರೋ ಟಿವಿ9 , ಮಹದೇವಪುರ ವಲಯದ ರಾಮಗೊಂಡನಹಳ್ಳಿಯಲ್ಲಿ ನಡೆಯುತ್ತಿರುವ ಟ್ಯಾಂಕರ್ ಮಾಫಿಯಾ ಬಿಚ್ಚಿಟ್ಟಿದೆ. ಊರಿನ ಜನರು ನೀರಿಲ್ಲದೇ ಪರದಾಡುತ್ತಿದ್ರೆ ಇರೋ ಬೋರ್ ವೆಲ್ ನೀರೆಲ್ಲ ಕಂಡವರ ಪಾಲಾಗ್ತಿದ್ದು, ರಾಮಗೊಂಡನಹಳ್ಳಿಯ ಜನರು ಕಂಗಾಲಾಗಿಬಿಟ್ಟಿದ್ದಾರೆ.

ಸದ್ಯ ರಾಜ್ಯ ರಾಜಧಾನಿಯ ಬಹುತೇಕ ಏರಿಯಾಗಳಲ್ಲಿ ನೀರಿಲ್ಲದೇ ಜನ ನರಳುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಟಿವಿ9 ಕೂಡ ಬೆಂಗಳೂರಿನ ಜಲದಾಹವನ್ನ ನಿರಂತರವಾಗಿ ತೆರೆದಿಡುತ್ತಿದೆ. ಅತ್ತ ಅತಿ ಹೆಚ್ಚು ಕೆರೆಗಳನ್ನ ಹೊಂದಿರೋ ಮಹದೇವಪುರ ವಲಯದ ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿಬಿಟ್ಟಿದೆ. ವಾರಕ್ಕೊಮ್ಮೆ ಬರೋ ಅಲ್ಪಸ್ವಲ್ಪ ನೀರನ್ನೇ ಕಾಯುವ ಇಲ್ಲಿನ ಜನರು, ದುಪ್ಪಟ್ಟು ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸಿದ್ರೂ ನೀರಿನ ಬವಣೆ ಮುಗಿಯುತ್ತಿಲ್ಲ.

ಈ ಊರಿನ ಜನ ನೀರಿಲ್ಲ ಅಂತಾ ಪರದಾಡುತ್ತಿದ್ರೆ, ಇದೇ ಊರಿನ ಮುಖ್ಯ ರಸ್ತೆಯಲ್ಲೇ ಸ್ಥಳೀಯರಿಂದಲೇ ಟ್ಯಾಂಕರ್ ಮಾಫಿಯಾ ಎಗ್ಗಿಲ್ಲದೇ ನಡೀತಿದೆ. ಎಲ್ಲೆಲ್ಲಿ ಚೆನ್ನಾಗಿ ನೀರು ಸಿಗುತ್ತೋ ಅಲ್ಲಿ ಬೋರ್ ವೆಲ್ ಕೊರೆಸಿ ರಸ್ತೆಬದಿ ಟ್ಯಾಂಕರ್ ಗಳಿಗೆ ಫಿಲ್ಲಿಂಗ್ ಪಾಯಿಂಟ್ ಮಾಡಿ ಪ್ರತಿನಿತ್ಯ ನೂರಾರು ಟ್ಯಾಂಕರ್ ನೀರನ್ನ ಮಾರಾಟ ಮಾಡಲಾಗ್ತಿದೆ. ಈಗಾಗಲೇ ನೀರಿಲ್ಲದೇ ಬಸವಳಿದ ಜನರಿಗೆ ಇದೀಗ ಟ್ಯಾಂಕರ್ ಮಾಫಿಯಾದಿಂದ ಇತರೆ ಬೋರ್ ವೆಲ್ ನೀರು ಕೂಡ ಬಂದ್ ಆಗಿರೋದು ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ನೀವು ಮುಸ್ಲಿಮರ ಕೈ ಕಡೆದರೂ ಅವರು ನಿಮಗೇ ಮತ ಹಾಕುತ್ತಾರೆ: ಪ್ರತಾಪ್​ ಸಿಂಹ

ಇನ್ನು ಊರಿನಲ್ಲಿ ನಡೀತಿರೋ ಅಕ್ರಮ ಟ್ಯಾಂಕರ್ ದಂಧೆಗೆ ಕಡಿವಾಣ ಹಾಕಿ ಅಂತಾ ಕಳೆದ 5 ವರ್ಷಗಳಿಂದ ಬಿಬಿಎಂಪಿಗೆ ಪತ್ರ ಬರೆದ್ರೂ ಯಾರೊಬ್ಬರೂ ಕ್ರಮ ತೆಗೆದುಕೊಂಡಿಲ್ಲ. ಅತ್ತ ಯಾರಾದ್ರೂ ಟ್ಯಾಂಕರ್ ಮಾಫಿಯಾ ಬಗ್ಗೆ ಮಾತಾಡಿದ್ರೆ ಧಮ್ಕಿ ಹಾಕೋದು ಕೂಡ ನಡೀತಿರೋ ಆರೋಪ ಕೇಳಿ ಬರ್ತಿದ್ದು, ಟ್ಯಾಂಕರ್ ದಂಧೆ ಬಗ್ಗೆ ತುಟಿಬಿಚ್ಚೋಕು ಕೂಡ ಜನ ಹೆದರುವಂತಾಗಿದೆ. ಸಮಸ್ಯೆ ಅರಿವಿದ್ರೂ ಸೈಲೆಂಟ್ ಆಗಿರೋ ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ನೀರಿನ ಅಭಾವದಿಂದ ರಾಮಗೊಂಡನಹಳ್ಳಿಯ ಜನರು ತತ್ತರಿಸಿದ್ರೆ, ಮತ್ತೊಂದೆಡೆ ಟ್ಯಾಂಕರ್ ಮಾಫಿಯ ಜನರ ನಿದ್ದೆಗೆಡಿಸಿದೆ. ಇಷ್ಟೆಲ್ಲ ಸಮಸ್ಯೆಯಿದ್ರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮೌನ ಮುರಿಯದೇ ಇರೋದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಸದ್ಯ ಸಂಬಂಧಪಟ್ಟವರು ಇನ್ನಾದ್ರೂ ಎಚ್ಚೆತ್ತುಕೊಂಡು ಜನರ ಸಮಸ್ಯೆಗೆ ಪರಿಹಾರ ನೀಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು