AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಯರ ಲವ್ ಸ್ಟೋರಿ, ಬಾಸ್​ಗೆ ಬಿತ್ತು ಪಂಗನಾಮ! ಕಂಪನಿ ಫೋನ್ ಪೇಯಿಂದ ಲವರ್​ ಅಕೌಂಟ್​ಗೆ ಹಣ ಟ್ರಾನ್ಸ್​ಫರ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ

ಕೆಲಸ ಕೊಟ್ಟ ಬಾಸ್ ಅಕೌಂಟ್​ನಿಂದ ತನ್ನ ಬಾಯ್ ಫ್ರೆಂಡ್​ಗೆ ಹಣ ಟ್ರಾನ್ಸಫರ್ ಮಾಡುವ ಮೂಲಕ ಕಂಪನಿ ಮಾಲೀಕನಿಗೆ ಪಂಗನಾಮ ಹಾಕಿದ ಘಟನೆ ಕೇಳಿಬಂದಿದೆ. ಈ ಕುರಿತು ಮಾಲೀಕ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾನೆ. ಲವರ್​ಗೋಸ್ಕರ ಫೋನ್​ ಪೇ ಯೂಸ್ ಮಾಡಿದ ಕ್ರೇಜಿ ಸ್ಟೋರಿ ಇಲ್ಲಿದೆ ನೋಡಿ.

ಯುವತಿಯರ ಲವ್ ಸ್ಟೋರಿ, ಬಾಸ್​ಗೆ ಬಿತ್ತು ಪಂಗನಾಮ! ಕಂಪನಿ ಫೋನ್ ಪೇಯಿಂದ ಲವರ್​ ಅಕೌಂಟ್​ಗೆ ಹಣ ಟ್ರಾನ್ಸ್​ಫರ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ
ಪ್ರಾತಿನಿಧಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: May 18, 2023 | 8:09 AM

Share

ಬೆಂಗಳೂರು: ಕೆಲಸ ಕೊಟ್ಟ ಬಾಸ್ ಅಕೌಂಟ್​ನಿಂದ ತನ್ನ ಬಾಯ್ ಫ್ರೆಂಡ್​ಗೆ ಹಣ ಟ್ರಾನ್ಸಫರ್ ಮಾಡುವ ಮೂಲಕ ಕಂಪನಿ ಮಾಲೀಕನಿಗೆ ಪಂಗನಾಮ ಹಾಕಿದ ಘಟನೆ ಕೇಳಿಬಂದಿದೆ. ಈ ಕುರಿತು ಮಾಲೀಕ ವಿದ್ಯಾರಣ್ಯಪುರ(Vidyaranyapura) ಠಾಣೆಗೆ ದೂರು ನೀಡಿದ್ದಾನೆ. ಹೌದು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಕಂಪನಿ ನಡೆಸುತ್ತಿರುವ ವೆಂಕಟೇಶ ರೆಡ್ಡಿ ಎಂಬುವವರು ರೀತು ಎಂಬಾಕೆಯನ್ನ ರಿಸಪ್ಷನಿಸ್ಟ್(receptionist)ಆಗಿ ಸೇರಿಸಿಕೊಂಡಿದ್ದರು. ಆದರೆ, ಈ ಯುವತಿ ಇದೀಗ ಅದೇ ಕಂಪನಿ ಓನರ್​ನನ್ನು ಠಾಣೆ ಮೆಟ್ಟಿಲೇರುವಂತೆ ಮಾಡಿದ್ದಾಳೆ. ಹೌದು ಮಾಲೀಕನ ಮೊಬೈಲ್​ನಿಂದಲೇ ತನ್ನ ತಂಗಿ, ಲವರ್​ ಖರ್ಚಿಗೆಂದು ಹಣ ಕಳಿಸಿದ್ದಾಳೆ. ಇವಳಷ್ಟೇ ಅಲ್ಲ, ಇವಳು ಸೇರಿ ಒಟ್ಟು ಮೂವರು ಯುವತಿಯರು ತಮ್ಮ ತಮ್ಮ ಬಾಯ್ ಫ್ರೆಂಡ್​ಗಳ ಅಕೌಂಟ್​ಗೆ ಹಣ ಕಳಿಸಿದ್ದಾರೆ.

ಕಂಪನಿಗೆ ಸಂಬಂಧಿಸಿದ ಅಕೌಂಟ್​ಗಳ ಪೋನ್ ಪೇ, ಗೂಗಲ್ ಪೇ ಆ್ಯಡ್ ಮಾಡಿಸಿದ್ದ ಮಾಲೀಕ

ಮಾಲೀಕ ತನ್ನ ಕಂಪನಿಗೆ ಸಂಬಂಧಿಸಿದ ಅಕೌಂಟ್​ಗಳ ಪೋನ್ ಪೇ, ಗೂಗಲ್ ಪೇ ಆ್ಯಡ್ ಮಾಡಿಸಿದ್ದ. ಜೊತೆಗೆ ರೀತು ಎಂಬಾಕೆಯ ಮೂಲಕ ಪಾಸ್​ವರ್ಡ್ ಕೂಡ ಸೆಟ್ ಮಾಡಿಸಿದ್ದ ಮಾಲೀಕ ವೆಂಕಟೇಶ ರೆಡ್ಡಿ. ನಂತರ ಹಣದ ವ್ಯವಹಾರದಲ್ಲೂ ರೀತು ವರ್ಗಾವಣೆ ಮಾಡುತ್ತಿದ್ದಳು. ಇದೇ ವೇಳೆ ತನ್ನ ಹಾಗೂ ತನ್ನ ಸಹೋದರಿಯರ ಅಕೌಂಟ್ ಗೂ ಹಣ ವರ್ಗಾವಣೆ ಮಾಡಿದ್ದ ರಿಯಾ. ಬಳಿಕ ತನ್ನ ಬಾಯ್ ಫ್ರೆಂಡ್ ಸೇರಿ ಮೂವರಿಗೆ ಹಣ ಕಳಿಸಿದ್ದಾಳೆ. ಇದುವರೆಗೂ 2 ಲಕ್ಷ 70ಸಾವಿರ ಹಣ ವರ್ಗಾಯಿಸಿದ್ದಾಳೆ.

ಇದನ್ನೂ ಓದಿ:Banana Diet: ತೂಕ ನಷ್ಟಕ್ಕೆ ಬಾಳೆಹಣ್ಣು ಮಾತ್ರ ತಿನ್ನುವುದು ಸುರಕ್ಷಿತವೇ?

ಕೆಲ ದಿನದ ನಂತರ ವೆಂಕಟೇಶ್ ರೆಡ್ಡಿಗೆ ಡ್ಯೂ ಅಲರ್ಟ್ ಮೆಸೇಜ್

ಕೆಲ ದಿನದ ನಂತರ ವೆಂಕಟೇಶ್ ರೆಡ್ಡಿಗೆ ಡ್ಯೂ ಅಲರ್ಟ್ ಮೆಸೇಜ್ ಬಂದಿದೆ. ಅಕೌಂಟ್​ನಲ್ಲಿ ಹಣ ಇದ್ರೂ, ಡ್ಯೂ ಮೆಸೆಜ್ ಬಂದಿರೋದ್ರ ಬಗ್ಗೆ ವೆಂಕಟೇಶ್ ರೆಡ್ಡಿ ಪರಿಶೀಲಿಸಿದ್ದ. ಈ ವೇಳೆ ರೀತು ತನ್ನ ಲವರ್​ ಸೇರಿ ನಕ್ಷು, ಕುಶಾಲಪ್ಪ, ಮಾಲ್ತೇಶ್, ರಾಹುಲ್ ಎಂಬುವರಿಗೆ ಹಣ ವರ್ಗಾಯಿಸಿರೋದು ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಫೀಸ್ ಉದ್ಯೋಗಿಯೊಬ್ಬಳ ಕೈಚಳಕದಿಂದ ಇದೀಗ ಕಂಪನಿ ಮಾಲೀಕ ಠಾಣೆ ಮೆಟ್ಟಿಲೇರಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ