AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಯರ ಲವ್ ಸ್ಟೋರಿ, ಬಾಸ್​ಗೆ ಬಿತ್ತು ಪಂಗನಾಮ! ಕಂಪನಿ ಫೋನ್ ಪೇಯಿಂದ ಲವರ್​ ಅಕೌಂಟ್​ಗೆ ಹಣ ಟ್ರಾನ್ಸ್​ಫರ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ

ಕೆಲಸ ಕೊಟ್ಟ ಬಾಸ್ ಅಕೌಂಟ್​ನಿಂದ ತನ್ನ ಬಾಯ್ ಫ್ರೆಂಡ್​ಗೆ ಹಣ ಟ್ರಾನ್ಸಫರ್ ಮಾಡುವ ಮೂಲಕ ಕಂಪನಿ ಮಾಲೀಕನಿಗೆ ಪಂಗನಾಮ ಹಾಕಿದ ಘಟನೆ ಕೇಳಿಬಂದಿದೆ. ಈ ಕುರಿತು ಮಾಲೀಕ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾನೆ. ಲವರ್​ಗೋಸ್ಕರ ಫೋನ್​ ಪೇ ಯೂಸ್ ಮಾಡಿದ ಕ್ರೇಜಿ ಸ್ಟೋರಿ ಇಲ್ಲಿದೆ ನೋಡಿ.

ಯುವತಿಯರ ಲವ್ ಸ್ಟೋರಿ, ಬಾಸ್​ಗೆ ಬಿತ್ತು ಪಂಗನಾಮ! ಕಂಪನಿ ಫೋನ್ ಪೇಯಿಂದ ಲವರ್​ ಅಕೌಂಟ್​ಗೆ ಹಣ ಟ್ರಾನ್ಸ್​ಫರ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ
ಪ್ರಾತಿನಿಧಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on: May 18, 2023 | 8:09 AM

Share

ಬೆಂಗಳೂರು: ಕೆಲಸ ಕೊಟ್ಟ ಬಾಸ್ ಅಕೌಂಟ್​ನಿಂದ ತನ್ನ ಬಾಯ್ ಫ್ರೆಂಡ್​ಗೆ ಹಣ ಟ್ರಾನ್ಸಫರ್ ಮಾಡುವ ಮೂಲಕ ಕಂಪನಿ ಮಾಲೀಕನಿಗೆ ಪಂಗನಾಮ ಹಾಕಿದ ಘಟನೆ ಕೇಳಿಬಂದಿದೆ. ಈ ಕುರಿತು ಮಾಲೀಕ ವಿದ್ಯಾರಣ್ಯಪುರ(Vidyaranyapura) ಠಾಣೆಗೆ ದೂರು ನೀಡಿದ್ದಾನೆ. ಹೌದು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಕಂಪನಿ ನಡೆಸುತ್ತಿರುವ ವೆಂಕಟೇಶ ರೆಡ್ಡಿ ಎಂಬುವವರು ರೀತು ಎಂಬಾಕೆಯನ್ನ ರಿಸಪ್ಷನಿಸ್ಟ್(receptionist)ಆಗಿ ಸೇರಿಸಿಕೊಂಡಿದ್ದರು. ಆದರೆ, ಈ ಯುವತಿ ಇದೀಗ ಅದೇ ಕಂಪನಿ ಓನರ್​ನನ್ನು ಠಾಣೆ ಮೆಟ್ಟಿಲೇರುವಂತೆ ಮಾಡಿದ್ದಾಳೆ. ಹೌದು ಮಾಲೀಕನ ಮೊಬೈಲ್​ನಿಂದಲೇ ತನ್ನ ತಂಗಿ, ಲವರ್​ ಖರ್ಚಿಗೆಂದು ಹಣ ಕಳಿಸಿದ್ದಾಳೆ. ಇವಳಷ್ಟೇ ಅಲ್ಲ, ಇವಳು ಸೇರಿ ಒಟ್ಟು ಮೂವರು ಯುವತಿಯರು ತಮ್ಮ ತಮ್ಮ ಬಾಯ್ ಫ್ರೆಂಡ್​ಗಳ ಅಕೌಂಟ್​ಗೆ ಹಣ ಕಳಿಸಿದ್ದಾರೆ.

ಕಂಪನಿಗೆ ಸಂಬಂಧಿಸಿದ ಅಕೌಂಟ್​ಗಳ ಪೋನ್ ಪೇ, ಗೂಗಲ್ ಪೇ ಆ್ಯಡ್ ಮಾಡಿಸಿದ್ದ ಮಾಲೀಕ

ಮಾಲೀಕ ತನ್ನ ಕಂಪನಿಗೆ ಸಂಬಂಧಿಸಿದ ಅಕೌಂಟ್​ಗಳ ಪೋನ್ ಪೇ, ಗೂಗಲ್ ಪೇ ಆ್ಯಡ್ ಮಾಡಿಸಿದ್ದ. ಜೊತೆಗೆ ರೀತು ಎಂಬಾಕೆಯ ಮೂಲಕ ಪಾಸ್​ವರ್ಡ್ ಕೂಡ ಸೆಟ್ ಮಾಡಿಸಿದ್ದ ಮಾಲೀಕ ವೆಂಕಟೇಶ ರೆಡ್ಡಿ. ನಂತರ ಹಣದ ವ್ಯವಹಾರದಲ್ಲೂ ರೀತು ವರ್ಗಾವಣೆ ಮಾಡುತ್ತಿದ್ದಳು. ಇದೇ ವೇಳೆ ತನ್ನ ಹಾಗೂ ತನ್ನ ಸಹೋದರಿಯರ ಅಕೌಂಟ್ ಗೂ ಹಣ ವರ್ಗಾವಣೆ ಮಾಡಿದ್ದ ರಿಯಾ. ಬಳಿಕ ತನ್ನ ಬಾಯ್ ಫ್ರೆಂಡ್ ಸೇರಿ ಮೂವರಿಗೆ ಹಣ ಕಳಿಸಿದ್ದಾಳೆ. ಇದುವರೆಗೂ 2 ಲಕ್ಷ 70ಸಾವಿರ ಹಣ ವರ್ಗಾಯಿಸಿದ್ದಾಳೆ.

ಇದನ್ನೂ ಓದಿ:Banana Diet: ತೂಕ ನಷ್ಟಕ್ಕೆ ಬಾಳೆಹಣ್ಣು ಮಾತ್ರ ತಿನ್ನುವುದು ಸುರಕ್ಷಿತವೇ?

ಕೆಲ ದಿನದ ನಂತರ ವೆಂಕಟೇಶ್ ರೆಡ್ಡಿಗೆ ಡ್ಯೂ ಅಲರ್ಟ್ ಮೆಸೇಜ್

ಕೆಲ ದಿನದ ನಂತರ ವೆಂಕಟೇಶ್ ರೆಡ್ಡಿಗೆ ಡ್ಯೂ ಅಲರ್ಟ್ ಮೆಸೇಜ್ ಬಂದಿದೆ. ಅಕೌಂಟ್​ನಲ್ಲಿ ಹಣ ಇದ್ರೂ, ಡ್ಯೂ ಮೆಸೆಜ್ ಬಂದಿರೋದ್ರ ಬಗ್ಗೆ ವೆಂಕಟೇಶ್ ರೆಡ್ಡಿ ಪರಿಶೀಲಿಸಿದ್ದ. ಈ ವೇಳೆ ರೀತು ತನ್ನ ಲವರ್​ ಸೇರಿ ನಕ್ಷು, ಕುಶಾಲಪ್ಪ, ಮಾಲ್ತೇಶ್, ರಾಹುಲ್ ಎಂಬುವರಿಗೆ ಹಣ ವರ್ಗಾಯಿಸಿರೋದು ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಫೀಸ್ ಉದ್ಯೋಗಿಯೊಬ್ಬಳ ಕೈಚಳಕದಿಂದ ಇದೀಗ ಕಂಪನಿ ಮಾಲೀಕ ಠಾಣೆ ಮೆಟ್ಟಿಲೇರಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?