ಕೊಡಿಗೆಹಳ್ಳಿಯಲ್ಲಿ ಯುವಕನ ಮೇಲೆ ಹಲ್ಲೆ; ಪ್ರಭಾತ್ ಶಾಖೆ ಮುಚ್ಚುವಂತೆ ದುಷ್ಕರ್ಮಿಗಳಿಂದ ಧಮ್ಕಿ

ರಾಜೇಶ್ ತನ್ನ ಫ್ರೀ ಟೈಮ್ ನಲ್ಲಿ ಜಿಮ್ ಎಕ್ವಿಪ್ಮಂಟ್ ಇನ್ಸ್ಟಾಲೇಶನ್ ಕೆಲಸ ಮಾಡುತ್ತಿದ್ದ. ನವೆಂಬರ್ 17ರಂದು ಸಂಜೆ 4:30ರ ಸುಮಾರಿಗೆ ಕೆಲಸ ಮುಗಿಸಿ ಬರುವಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ಸಂಜೀವಿನಿ ಪ್ರಭಾತ್ ಶಾಖೆ ಮುಚ್ಚುವಂತೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಡಿಗೆಹಳ್ಳಿಯಲ್ಲಿ ಯುವಕನ ಮೇಲೆ ಹಲ್ಲೆ; ಪ್ರಭಾತ್ ಶಾಖೆ ಮುಚ್ಚುವಂತೆ ದುಷ್ಕರ್ಮಿಗಳಿಂದ ಧಮ್ಕಿ
ಬ್ಯಾಟರಾಯನಪುರದಲ್ಲಿ ಯುವಕನ ಮೇಲೆ ಹಲ್ಲೆ; ಪ್ರಭಾತ್ ಶಾಖೆ ಮುಚ್ಚುವಂತೆ ದುಷ್ಕರ್ಮಿಗಳಿಂದ ಧಮ್ಕಿ
Edited By: ಸಾಧು ಶ್ರೀನಾಥ್​

Updated on: Nov 19, 2021 | 11:31 AM

ಬೆಂಗಳೂರು: ಅನಾವಶ್ಯಕ ಕಿರಿಕ್ ತೆಗೆದು ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಿಗೆಹಳ್ಳಿಯ ಸ್ಟರ್ಲಿಂಗ್ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಟಾಟಾ ಏಸ್ ಅಡ್ಡಗಟ್ಟಿದ ಮೂವರು ಅಪರಿಚಿತರು ಮುಖಕ್ಕೆ ಪಂಚ್ ಮಾಡಿದ್ದಾರೆ. ರಾಜೇಶ್ (20) ಹಲ್ಲೆಗೊಳಗಾದ ಯುವಕ. ಈತ ಬ್ಯಾಟರಾಯನಪುರದಲ್ಲಿ ಆರ್​ಎಸ್​ಎಸ್ ನ ಸಂಜೀವಿನಿ ಪ್ರಭಾತ್ ಶಾಖೆ ನಡೆಸುತ್ತಿದ್ದರು.

ರಾಜೇಶ್ ತನ್ನ ಫ್ರೀ ಟೈಮ್ ನಲ್ಲಿ ಜಿಮ್ ಎಕ್ವಿಪ್ಮಂಟ್ ಇನ್ಸ್ಟಾಲೇಶನ್ ಕೆಲಸ ಮಾಡುತ್ತಿದ್ದ. ನವೆಂಬರ್ 17ರಂದು ಸಂಜೆ 4:30ರ ಸುಮಾರಿಗೆ ಕೆಲಸ ಮುಗಿಸಿ ಬರುವಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ಸಂಜೀವಿನಿ ಪ್ರಭಾತ್ ಶಾಖೆ ಮುಚ್ಚುವಂತೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣೂರಿನಲ್ಲಿ ರಸ್ತೆಯ ಮಧ್ಯೆಯೇ ಕೆಟ್ಟು ನಿಂತ ಬೈಕ್:
ಹೆಣ್ಣೂರಿನಲ್ಲಿ ರಸ್ತೆಯ ಮಧ್ಯೆಯೇ ಬೈಕ್ ಕೆಟ್ಟು ನಿಂತಿದ್ದು, ಏನೇ ಸರ್ಕಸ್ ಮಾಡಿದ್ರೂ ಸ್ಟಾರ್ಟ್ ಆಗ್ತಿಲ್ಲ. ವೆಹಿಕಲ್ ನ ಮುಂದೆ ತಳ್ಳೋಕೆ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಚಕ್ರ ರಸ್ತೆ ಗುಂಡಿಯಲ್ಲೇ ಸಿಲುಕಿಕೊಂಡಿದೆ. ಯಾಕಪ್ಪ ಈ ರಸ್ತೆಯಲ್ಲಿ ಬಂದೆ ಅಂತ ಯುವಕ ಹಿಡಿಶಾಪ ಹಾಕಿದ್ದಾನೆ. ಕೊನೆಗೆ 5 ಮಂದಿ ಯುವಕರು ಬೈಕ್ ಹಿಡಿದು ಮೇಲೆತ್ತಿದ್ದಾರೆ. ಟ್ರಾಫಿಕ್ ಹೆಚ್ಚಾಗುತ್ತೆ ಅಂತ ಜನ ವಾಹನವನ್ನು ಪಕ್ಕಕ್ಕೆ ಹೊತ್ತೊಯ್ದಿದ್ದಾರೆ.

ವಿಲಾಸಿ ಜೀವನಕ್ಕಾಗಿ ಬೈಕ್ ಕಳ್ಳತನ ಮಾಡುತಿದ್ದ ಆರೋಪಿಗಳ ಬಂಧನ:
ವಿಲಾಸಿ ಜೀವನಕ್ಕಾಗಿ ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತಿದ್ದ ರೋಹಿತ್ ಮತ್ತು ರೆವಂತ್ ಎಂಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಡರಾತ್ರಿ ನಿರ್ಜನ ಪ್ರದೇಶದ ಏರಿಯಾಗಳಿಗೆ ಎಂಟ್ರಿ ಕೊಟ್ಟು ಇವರು ತಮ್ಮ ಕೈಚಳಕ ತೋರುತ್ತೊದ್ದರು. ಕಾಮಾಕ್ಷಿಪಾಳ್ಯ, ಕೆಂಗೇರಿ, ಕೆಆರ್ ಪುರಂ, ಮಾದನಾಯಕನಹಳ್ಳಿ ಸೇರಿದಂತೆ ಹಲವು ಕಡೆ ಮನೆಯ ಮುಂದೆ ನಿಲ್ಲಿಸಿದ್ದ ಬೈ್​ಗಳನ್ನು ಆರೋಪಿಗಳು ಕಳ್ಳತನ ಮಾಡುತಿದ್ದರು. ಬಂಧಿತರಿಂದ 5.42 ಲಕ್ಷ ರೂಪಾಯಿ ಮೌಲ್ಯದ ವಿವಿಧ 11 ಬೈಕ್ ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:
ಭಾರಿ ಮಳೆಗೆ ಬೆಂಗಳೂರಿನಲ್ಲಿ ಕೆರೆಯಂತಾದ ರಸ್ತೆಗಳು; ವಾಹನ ಸವಾರರ ಪರದಾಟ, ಜನಜೀವನ ಅಸ್ತವ್ಯಸ್ತ

ಇದನ್ನೂ ಓದಿ:
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳು ಭೀಕರ ಮಳೆಗೆ ತತ್ತರ, ಜಲ ದಿಗ್ಬಂಧನ: ಇಂದೂ ಮಳೆ ಮುಂದುವರಿದ್ರೆ ಕಷ್ಟ ಕಷ್ಟ

Published On - 8:51 am, Fri, 19 November 21

Web contact

TV9 Kannada

Read More
Follow Us