AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಶಾ ಕಾರ್ಯಕರ್ತೆಯರಿಗೆ​ ಹಂಚಿದ ಸೌಧಿಯ 500 ರಿಯಲ್ ಭಾರತದಲ್ಲಿ ಎಷ್ಟು? ಸ್ಪಷ್ಟನೆ ಕೊಟ್ಟ ಜಮೀರ್

ಆಶಾ ಕಾರ್ಯಕರ್ತೆಯರಿಗೆ​ ಸೌಧಿಯ 500 ರಿಯಲ್ ಹಂಚಿರುವುದಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ​ ಹಂಚಿದ ಸೌಧಿಯ 500 ರಿಯಲ್ ಭಾರತದಲ್ಲಿ ಎಷ್ಟು? ಸ್ಪಷ್ಟನೆ ಕೊಟ್ಟ ಜಮೀರ್
ರಮೇಶ್ ಬಿ. ಜವಳಗೇರಾ
|

Updated on: Feb 27, 2023 | 1:59 PM

Share

ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್​ ಖಾನ್(zameer ahmed khan) ಅವರು ಆಶಾ ಕಾರ್ಯಕರ್ತೆಯರಿಗೆ​ ವಿದೇಶಿ ಕರೆನ್ಸಿ ಹಂಚಿದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಚುನಾವಣೆ ಸಂದರ್ಭದಲ್ಲಿ ವಿದೇಶಿ ಕರೆನ್ಸಿ ಹಂಚಿಕೆ ಮಾಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಫೆಬ್ರುವರಿ 27) ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಸೌದಿಗೆ ಹೋಗುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಹಣ ನೀಡಿದ್ದೇನೆ. ಸೌದಿಯಲ್ಲಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ. ವಿದೇಶಿ ಕರೆನ್ಸಿ ಹಂಚಿದ್ದಕ್ಕೆ ಕಾನೂನು ತೊಡಕು ಏನೂ ಆಗುವುದಿಲ್ಲ, ಅವರಿಗೆ ತಲಾ 12 ಸಾವಿರ ಹಂಚಿದ್ದೇನೆ. ಸೌಧಿಯಲ್ಲಿ 500 ರಿಯಲ್ ಆಗುತ್ತೆ. ಅಲ್ಲಿ ಹೋಗಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ. ನೋಟು ಹಂಚಿದ್ದು ಕಾನೂನು ತೊಡಕು ಏನು ಆಗಲ್ಲ. ನಾನು ಅದರ ವಿವರಣೆ ಕೊಟ್ಟು ಕಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ಸೌದಿ ಅರೇಬಿಯಾದ 500 ಮುಖಬೆಲೆಯ ನೋಟು ಹಂಚಿದ ಜಮೀರ್, ಭಾರತದಲ್ಲಿ ಅದರ ಮೌಲ್ಯ ಎಷ್ಟು ಗೊತ್ತಾ?

ಜೆಡಿಎಸ್ 123 ಮಿಷನ್​ ಬಗ್ಗೆ ಮಾತನಾಡಿದ ಜಮೀರ್, ಜೆಡಿಎಸ್​ನವರು ತಪ್ಪಾಗಿ ಒಂದು ಸೇರಿಸಿ ಬಿಟ್ಟಿದ್ದಾರೆ. ಅವರು ಗೆಲ್ಲುವುದು 23 ಕ್ಷೇತ್ರ ಮಾತ್ರ. ಯಾರೇ ಆದ್ರೂ ದೇವೇಗೌಡರ ಮನೆಗೆ ಹೋಗುವುದಾದರೆ ಅವರಿಗೆ ಬಹುಮತ ಬರಲ್ಲ ಅಂತ ಅಲ್ವಾ. ಮತ್ತೆ 123 ಮಿಷನ್ ಹೇಗೆ ಆಗುತ್ತೆ ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದರು.

ಮುಖಬೆಲೆಯ ನೋಟು ನೀಡುವುದರ ಜೊತೆಗೆ ನ್ಯಾಷನಲ್ ಟ್ರಾವೆಲ್ಸ್​​ ಕಿಟ್ ವಿತರಣೆ ಮಾಡಿದ್ದರು. ಬೆಂಗಳೂರಿನ ಗೋರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ಸೌದಿ ಅರೇಬಿಯಾದ 500 ಮುಖಬೆಲೆಯ ನೋಟು ನೀಡಿ ಬಿಬಿಎಂಪಿಯ 46 ಆಶಾ ಕಾರ್ಯಕರ್ತೆಯರನ್ನು ಮೆಕ್ಕಾಗೆ ಕಳಿಸಿಕೊಟ್ಟರು. ಪಾದರಾಯನಪುರ ವಾರ್ಡ್​​​, ಜೆಜೆಆರ್ ನಗರದ ವಾರ್ಡ್ ಹಾಗೂ ರಾಯಪುರಂ ವಾರ್ಡ್ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ನೋಟು ನೀಡಿದ್ದಾರೆ. ಜಮೀರ್ ಹಂಚಿದ ಸೌದಿ ಅರೇಬಿಯಾದ 5೦೦ ರೂ.ಗೆ ಭಾರತದಲ್ಲಿ 11ಸಾವಿರದ 34 ರೂಪಾಯಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ