ಆನಂದ್ ಸಿಂಗ್ ಪುತ್ರನ ಅದ್ಧೂರಿ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ!?

ಬಳ್ಳಾರಿ: ಡಿಸೆಂಬರ್ 1ರಂದು ಅಂದ್ರೆ ನಾಳೆ ಭಾನುವಾರ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್​ ಅವರ ಮದುವೆ ಸಂಜನಾ ಸಿಂಗ್  ಜೊತೆ ವೈಭವೋಪೇತವಾಗಿ ನಡೆಯಲಿದೆ. ಅದಕ್ಕೂ ಮುನ್ನ ಅವರ ವೆಡ್ಡಿಂಗ್ ಕಾರ್ಡ್​ ಅದ್ದೂರಿಯಾಗಿದ್ದು, ಭಾರೀ ಗಮನ ಸೆಳೆದಿದೆ. ವಿಐಪಿಗಳಿಗಾಗಿ ಆನಂದ್ ಸಿಂಗ್ ಅದ್ಧೂರಿಯಾಗಿ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆಗೆ ಸೆಟ್ ಹಾಕಲಾಗಿದೆ. ಇನ್ನು ವಿವಾಹಕ್ಕೆ ವಿಐಪಿಗಳನ್ನ ಆಮಂತ್ರಿಸಲು ಮಾಡಿಸಿರೋ ಕಾರ್ಡ್​ನ ತೂಕವೇ ಬರೋಬ್ಬರಿ […]

ಆನಂದ್ ಸಿಂಗ್ ಪುತ್ರನ ಅದ್ಧೂರಿ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ!?
ಸಾಧು ಶ್ರೀನಾಥ್​

Updated on: Nov 30, 2019 | 11:10 AM

ಬಳ್ಳಾರಿ: ಡಿಸೆಂಬರ್ 1ರಂದು ಅಂದ್ರೆ ನಾಳೆ ಭಾನುವಾರ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್​ ಅವರ ಮದುವೆ ಸಂಜನಾ ಸಿಂಗ್  ಜೊತೆ ವೈಭವೋಪೇತವಾಗಿ ನಡೆಯಲಿದೆ. ಅದಕ್ಕೂ ಮುನ್ನ ಅವರ ವೆಡ್ಡಿಂಗ್ ಕಾರ್ಡ್​ ಅದ್ದೂರಿಯಾಗಿದ್ದು, ಭಾರೀ ಗಮನ ಸೆಳೆದಿದೆ. ವಿಐಪಿಗಳಿಗಾಗಿ ಆನಂದ್ ಸಿಂಗ್ ಅದ್ಧೂರಿಯಾಗಿ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ.

ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆಗೆ ಸೆಟ್ ಹಾಕಲಾಗಿದೆ. ಇನ್ನು ವಿವಾಹಕ್ಕೆ ವಿಐಪಿಗಳನ್ನ ಆಮಂತ್ರಿಸಲು ಮಾಡಿಸಿರೋ ಕಾರ್ಡ್​ನ ತೂಕವೇ ಬರೋಬ್ಬರಿ 2 ಕೆ.ಜಿ ಇದೆ. ಕಾರ್ಡ್​ನಲ್ಲಿ 5 ರೀತಿಯ ವಿಶೇಷ ವಿನ್ಯಾಸದ ಪುಟಗಳನ್ನ ಮಾಡಲಾಗಿದ್ದು, ತಿರುಪತಿ ವೆಂಕಟೇಶ್ವರ ಸ್ವಾಮಿಯ ಫೋಟೋ ಆರಂಭದಲ್ಲಿ ಹಾಕಲಾಗಿದೆ. ಪ್ರತಿಯೊಂದು ಪುಟದಲ್ಲೂ ಕೃಷ್ಣ-ರುಕ್ಮಿಣಿಯ ಫೋಟೋ ಕಣ್ಮನ ಸೆಳೆಯುವಂತೆ ಡಿಸೈನ್ ಮಾಡಿಸಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us