AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂತನ ಸಚಿವರ ಒತ್ತಡಕ್ಕೆ ಮಣಿದ BSY ಖಾತೆ ಬದಲಾವಣೆ ಮಾಡಿ ಆದೇಶ: ಅಬಕಾರಿ ಕಹಿ ಮರೆತು, ಸಕ್ಕರೆ ಸವಿದ MTB

ಜೆ.ಸಿ.ಮಾಧುಸ್ವಾಮಿ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ  ಹಜ್ ಮತ್ತು ವಕ್ಫ್​ ಖಾತೆ ನೀಡಲಾಗಿದೆ.  ಅಬಕಾರಿ ಖಾತೆ ನಿರಕಾರಿಸಿದ್ದ ಎಂಟಿಬಿ ನಾಗರಾಜ್​ಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಂಚಿಕೆ ಮಾಡಲಾಗಿದೆ.

ನೂತನ ಸಚಿವರ ಒತ್ತಡಕ್ಕೆ ಮಣಿದ BSY ಖಾತೆ ಬದಲಾವಣೆ ಮಾಡಿ ಆದೇಶ: ಅಬಕಾರಿ ಕಹಿ ಮರೆತು, ಸಕ್ಕರೆ ಸವಿದ MTB
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ರಾಜೇಶ್ ದುಗ್ಗುಮನೆ
| Edited By: |

Updated on:Jan 22, 2021 | 2:39 PM

Share

ಬೆಂಗಳೂರು: ನೂತನ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿತ್ತು. ಈಗ ಸಚಿವರ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಮಣಿದಿದ್ದಾರೆ. ನೂತನ ಸಚಿವರಾದ ಎಂಟಿಬಿ ನಾಗರಾಜ್​ ಸೇರಿ ಅನೇಕರ ಖಾತೆ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಜೆ.ಸಿ.ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ  ಹಜ್ ಮತ್ತು ವಕ್ಫ್​ ಖಾತೆ ನೀಡಲಾಗಿದೆ.  ಅಬಕಾರಿ ಖಾತೆ ನಿರಕಾರಿಸಿದ್ದ ಎಂಟಿಬಿ ನಾಗರಾಜ್​ಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಂಚಿಕೆ ಮಾಡಲಾಗಿದೆ.   ಅಸಮಾಧಾನಿತ ಕೆ. ಗೋಪಾಲಯ್ಯಗೆ ಅಬಕಾರಿ ಖಾತೆ ನೀಡಲಾಗಿದೆ.

ಆರ್.ಶಂಕರ್​​ಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಕೆ.ಸಿ.ನಾರಾಯಣಗೌಡಗೆ ಯುವ ಸಬಲೀಕರಣ & ಕ್ರೀಡೆ, KCN​-ಯೋಜನೆ, ಸಾಂಖ್ಯಿಕ & ಕಾರ್ಯಕ್ರಮ ಅನುಷ್ಠಾನ ಜವಾಬ್ದಾರಿ ನೀಡಲಾಗಿದೆ. ಅರವಿಂದ ಲಿಂಬಾವಳಿಗೆ ಅರಣ್ಯ, ಕನ್ನಡ & ಸಂಸ್ಕೃತಿ ಖಾತೆ ಹಂಚಿಕೆ ಮಾಡಲಾಗಿದೆ.

ಪಟ್ಟಿಯಲ್ಲಿ ಸಚಿವರ ಖಾತೆಗಳು ಹೀಗಿವೆ:

1. ಜೆ.ಸಿ.ಮಾಧುಸ್ವಾಮಿ -ವೈದ್ಯಕೀಯ ಶಿಕ್ಷಣ ಇಲಾಖೆ 2. ಜೆ.ಸಿ.ಮಾಧುಸ್ವಾಮಿ -ಹಜ್ ಮತ್ತು ವಕ್ಫ್​ ಖಾತೆ 3. ಎಂಟಿಬಿ ನಾಗರಾಜ್ -ಪೌರಾಡಳಿತ ಮತ್ತು ಸಕ್ಕರೆ ಖಾತೆ 4. ಕೆ.ಗೋಪಾಲಯ್ಯ -ಅಬಕಾರಿ ಖಾತೆ 5. ಆರ್.ಶಂಕರ್ -ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 6. ಕೆ.ಸಿ. ನಾರಾಯಣಗೌಡ -ಯುವ ಸಬಲೀಕರಣ & ಕ್ರೀಡೆ ಯೋಜನೆ, ಸಾಂಖ್ಯಿಕ & ಕಾರ್ಯಕ್ರಮ ಅನುಷ್ಠಾನ 7. ಅರವಿಂದ ಲಿಂಬಾವಳಿ -ಅರಣ್ಯ, ಕನ್ನಡ & ಸಂಸ್ಕೃತಿ ಖಾತೆ

ಅಬಕಾರಿಯಲ್ಲಿ ಮಾಡೋಕೆ ಏನಿದೆ?: ಚಿಯರ್ಸ್​ ಹೇಳದೆ.. ಅಸಮಾಧಾನದ ಬುಗ್ಗೆ ಚಿಮ್ಮಿಸಿದ MTB ನಾಗರಾಜ್​

Published On - 2:13 pm, Fri, 22 January 21