AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘HDKಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ’ ಸಚಿವ ರಾಮುಲು ಹೀಗೆ ಗುಡುಗಿದ್ಯಾಕೆ?

ಬಾಗಲಕೋಟೆ: ಒಂದಡಿ ನೀರಿನ ಟ್ಯಾಂಕ್​ನಲ್ಲಿ ಕಾಲು ಜಾರಿ ಬಿದ್ದು ಸಾಯಲು ಸಾಧ್ಯವೇ? ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಪ್ರಶ್ನೆ ಎತ್ತಿದ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಸಚಿವ ಶ್ರೀರಾಮುಲು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ವ್ಯಯಕ್ತಿಕ ವಿಚಾರ ಎತ್ತಿದ ಕುಮಾರಸ್ವಾಮಿ ವಿರುದ್ಧ ಬಾಗಲಕೋಟೆಯಲ್ಲಿ ರಾಮುಲು ತೀವ್ರ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ. ಅದು ಅವ್ರ ಸಂಸ್ಕಾರವನ್ನು ತಿಳಿಸುತ್ತದೆ. ಅವ್ರೊಬ್ಬ ಮಾಜಿ ಪ್ರಧಾನ ಮಂತ್ರಿ ಮಗ ಅನ್ನೋದನ್ನ ಮರೆಯಬಾರದು. […]

‘HDKಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ' ಸಚಿವ ರಾಮುಲು ಹೀಗೆ ಗುಡುಗಿದ್ಯಾಕೆ?
ಸಾಧು ಶ್ರೀನಾಥ್​
|

Updated on:Sep 21, 2019 | 3:50 PM

Share

ಬಾಗಲಕೋಟೆ: ಒಂದಡಿ ನೀರಿನ ಟ್ಯಾಂಕ್​ನಲ್ಲಿ ಕಾಲು ಜಾರಿ ಬಿದ್ದು ಸಾಯಲು ಸಾಧ್ಯವೇ? ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಪ್ರಶ್ನೆ ಎತ್ತಿದ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಸಚಿವ ಶ್ರೀರಾಮುಲು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಡಿಯೂರಪ್ಪ ವ್ಯಯಕ್ತಿಕ ವಿಚಾರ ಎತ್ತಿದ ಕುಮಾರಸ್ವಾಮಿ ವಿರುದ್ಧ ಬಾಗಲಕೋಟೆಯಲ್ಲಿ ರಾಮುಲು ತೀವ್ರ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ. ಅದು ಅವ್ರ ಸಂಸ್ಕಾರವನ್ನು ತಿಳಿಸುತ್ತದೆ. ಅವ್ರೊಬ್ಬ ಮಾಜಿ ಪ್ರಧಾನ ಮಂತ್ರಿ ಮಗ ಅನ್ನೋದನ್ನ ಮರೆಯಬಾರದು. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಬಾರದು. ಯಡಿಯೂರಪ್ಪ ಬಗ್ಗೆ ಮಾತನಾಡಲು ಹೆಚ್​ಡಿಕೆಗೆ ಯಾವ ನೈತಿಕತೆಯೂ ಇಲ್ಲ ಎಂದು ಎಚ್ಚರಿಸಿದ್ದಾರೆ.

‘ನೀವೊಬ್ಬ ಸಣ್ಣ ರಾಜಕಾರಣಿ, ನೀನೊಬ್ಬ ಹುಡುಗ’ ಯಡಿಯೂರಪ್ಪ ಆಗಲಿ, ಅವ್ರ ಕುಟುಂಬದವ್ರ ತಂಟೆಗೆ ಹೋಗೊ ಕೆಲಸ ಮಾಡಬೇಡಿ. ಇದನ್ನು ನಾನು ತುಂಬಾ ಸೀರಿಯಸ್ಸಾಗಿ ಹೇಳ್ತಿದೀನಿ ಎನ್ನುತ್ತಾ, ಹೆಚ್​ಡಿಕೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಶ್ರೀರಾಮುಲು… 40 ವರ್ಷ ರಾಜಕಾರಣದಲ್ಲಿ ದುಡಿದ ಯಡಿಯೂರಪ್ಪ ಬಗ್ಗೆ ಮಾತಾಡ್ತೀರಾ? ನೀವೊಬ್ಬ ಸಣ್ಣ ರಾಜಕಾರಣಿ, ನೀನೊಬ್ಬ ಹುಡುಗ. ಲಾಸ್ಟ್ ಬೆಂಚ್​ನಲ್ಲಿ ಕುಂತ ನೀವು ಪ್ರಧಾನಮಂತ್ರಿ ಮಗ ಅನ್ನೋ ಕಾರಣಕ್ಕೆ ಸಿಎಂ ಆಗಿದ್ರಿ. ಯಡಿಯೂರಪ್ಪ ಆಗಲ್ಲ, ಹೋರಾಟ ಮಾಡಿ ಸಿಎಂ ಆದವ್ರು. ನಿಮ್ಮ ತಂದೆಗೆ ಎಷ್ಟು ಅನುಭವ ಇದೆಯೋ, ಅಷ್ಟೇ ಅನುಭವ ಯಡಿಯೂರಪ್ಪಗೆ ಇದೆ. ಅವ್ರ ತಂದೆ ರಾಜಕಾರಣದಲ್ಲಿ ಎಷ್ಟು ಚತುರತೆ ಹೊಂದಿದ್ದಾರೋ, ಅಷ್ಟೇ ಚತುರತೆ ಯಡಿಯೂರಪ್ಪ ಹೊಂದಿದ್ದಾರೆ. 40 ವರ್ಷಗಳ ಕಾಲ ಹೋರಾಟ ಮಾಡಿ ಮೂರು ಬಾರಿ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಬಗ್ಗೆ ರಾಜಕೀಯವಾಗಿ ಟೀಕೆ ಮಾಡಿ, ಆದ್ರೆ ಅವ್ರ ಕುಟುಂಬದ ಬಗ್ಗೆ ಮಾತನಾಡಬೇಡಿ ಎಂದರು.

‘ಸಿರಿಯಸ್ ಆಗಿ ಹೇಳ್ತೀದೀನಿ..’ ನಿಮಗೆ ಸಿರಿಯಸ್ ಆಗಿ ಹೇಳ್ತೀದಿನಿ. ನೀವು ಇದೇ ತರ ಮುಂದುವರೆಸಿದ್ರೆ, ಮುಂದಿನ ಪೀಳಿಗೆಗೆ ಕೆಟ್ಟ ಸಂಪ್ರದಾಯ ಹಾಕಿದಂತಾಗುತ್ತದೆ. ನೀವು ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡ್ತೀರಿ. ಹಂಗಾಗೋದಿಲ್ಲ, ಹಂಗಾಗೋಕೆ ನಾವು ಬಿಡೋ ಪ್ರಶ್ನೆಯೂ ಇಲ್ಲ. ರಾಜಕಾರಣ ಇರಬಹುದು, ಹೋಗಬಹುದು. ಯಾವುದೂ ಶಾಶ್ವತ ಅಲ್ಲ. ಕುಟುಂಬವನ್ನು ರಾಜಕಾರಣಕ್ಕೆ ಎಳೆದು ತರಬೇಡಿ. ನಿಮ್ಮ ಉದ್ದೇಶ ಏನೇ ಇರಲಿ, ರಾಜಕಾರಣಕ್ಕೆ ಕುಟುಂಬವನ್ನು ಎಳೆದು ತರಬಾರದು ಎಂದು ಮಗದೊಮ್ಮೆ ಆರೋಗ್ಯ ಸಚಿವ ಶ್ರೀರಾಮುಲು ಖಂಡತುಂಡವಾಗಿ ಹೇಳಿದರು. ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ? ಅವ್ರ ಶಕ್ತಿ ಇದ್ರೆ ಆಗಲಿ. ನಾವು ಬೇಡ ಅನ್ನಲ್ಲ. ಆದ್ರೆ ಯಡಿಯೂರಪ್ಪ ಕುಟುಂಬದ ಮಾತನಾಡೋದು ಸರಿಯಲ್ಲ, ನಿಮಗೆ ಪದೇ ಪದೇ ಹೇಳ್ತೀನಿ ಎಂದು ಎಚ್ಚರಿಕೆ ಮಿಶ್ರಿತ ದನಿಯಲ್ಲಿ ರಾಮುಲು ಕುಮಾರಸ್ವಾಮಿಗೆ ವಾರ್ನ್​ ಮಾಡಿದರು.

Published On - 6:41 pm, Fri, 20 September 19

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್