ಹೆಗ್ಗೋಠಾರದಲ್ಲಿ ಆಚರಿಸಲಾಯ್ತು ವಿಶೇಷ ಶಿವರಾತ್ರಿ ಉತ್ಸವ; 40 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಕಪಿಲಾ ತೀರ್ಥ ತಂದ ಭಕ್ತಗಣ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 08, 2024 | 9:45 PM

ಇಂದು ಶಿವರಾತ್ರಿ, ಎಲ್ಲೆಡೆ ಶಿವನಿಗೆ ನಾನಾ ರೀತಿಯ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಹಲವೆಡೆ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸಕಾಗುತ್ತದೆ. ಅದೇ ರೀತಿ ಗಡಿ ನಾಡು ಚಾಮರಾಜನಗರದಲ್ಲೂ ವಿಶೇಷವಾಗಿ ಶಿವರಾತ್ರಿ ಆಚರಿಸಲಾಯ್ತು. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ.

ಹೆಗ್ಗೋಠಾರದಲ್ಲಿ ಆಚರಿಸಲಾಯ್ತು ವಿಶೇಷ ಶಿವರಾತ್ರಿ ಉತ್ಸವ; 40 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಕಪಿಲಾ ತೀರ್ಥ ತಂದ ಭಕ್ತಗಣ
ಚಾಮರಾಜನಗರ ಶಿವರಾತ್ರಿ
Follow us on

ಚಾಮರಾಜನಗರ, ಮಾ.08: ಇಂದು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಮಹಾ ಶಿವರಾತ್ರಿ(Maha Shivratri) ಹಬ್ಬವನ್ನ ಆಚರಿಸಲಾಗುತ್ತಿದೆ. ಅದೇ ರೀತಿ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಜನರು 40 ಕಿಲೋ ಮೀಟರ್ ನಡೆದುಕೊಂಡು ಹೋಗಿ ಕಪಿಲೆಯ ನೀರನ್ನ ಕಳಸದಲ್ಲಿ ತಂದು, ಬಳಿಕ ಅದನ್ನ ಗ್ರಾಮದ ಸಿದ್ದರಾಮೇಶ್ವರನ ದೆವಾಲಯದ ಶಿವಲಿಂಗಕ್ಕೆಅಭಿಷೇಕ ಮಾಡಿ ನಂತರ ಗ್ರಾಮದ ಜನತೆಗೆ ಆ ಅಭಿಷೇಕದ ನೀರನ್ನ ನೀಡಿ ವಿಶೇಷವಾಗಿ ಶಿವರಾತ್ರಿ ಹಬ್ಬವನ್ನ ಆಚರಿಸಿದ್ದಾರೆ.

ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮೇಶ್ವರ ದೇವಾಲಯಕ್ಕೆ ಹೆಗ್ಗೋಠಾರ ಗ್ರಾಮದ ಐದು ಕುಟುಂಬಗಳು ತಲ-ತಲಾಂತರಗಳಿಂದ ಬರಿಗಾಲಲ್ಲಿ ಕಾಲ್ನಡಿಗೆ ಮೂಲಕ ಕಪಿಲಾಜಲ ಹೊತ್ತು ತರುವ ಕಾಯಕ ಮಾಡಿಕೊಂಡು ಬರುತ್ತಿವೆ. ಹೀಗೆ ತಂದ ಜಲದಿಂದಲೇ ಸಿದ್ದರಾಮೇಶ್ವರನಿಗೆ ವಿಶೇಷ ಜಲಾಭಿಷೇಕ ಮಾಡಿದ ಬಳಿಕವಷ್ಟೇ ಮಹಾ ಶಿವರಾತ್ರಿ ಹಬ್ಬ ಸಂಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ:Maha Shivaratri 2024: ಮಹಾ ಶಿವರಾತ್ರಿ ಉಪವಾಸದ ನಿಯಮಗಳೇನು? ಏನು ಸೇವಿಸಬಹುದು, ಏನು ತಿನ್ನಬಾರದು?

ಒಟ್ಟಾರೆ ಒಂದೊಂದು ಊರಿನಲ್ಲಿ ಒಂದೊಂದು ರೀತಿ ಮಹಾಶಿವರಾತ್ರಿ ಹಬ್ಬವನ್ನ ಆಚರಿಸಲಾಗುತ್ತದೆ. ಅದೇ ರೀತಿ ಪೂರ್ವಿಕರು ನಡೆದು ಬಂದ ಹಾದಿ ಹಾಗೂ ಸಂಪ್ರದಾಯವನ್ನ ಬಿಡದೆ ಈಗಿನ ಪೀಳಿಗೆ ಆ ಸಂಸ್ಕೃತಿಯನ್ನ ಪಾಲನೆ ಮಾಡಿಕೊಂಡು ಹೋಗುತ್ತಿರುವುದು ನಿಜಕ್ಕೂ ಸಂತಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ