AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ಗೆ ಎದುರಾಗಲಿದ್ಯ ಭೀಕರ ಕ್ಷಾಮ? 450 ಕೆರೆಗಳ ಪೈಕಿ 150 ಕೆರೆಗಳಲ್ಲಿ ನೀರು ಭಾಗಶಃ ಖಾಲಿ ಖಾಲಿ!

ಪ್ರಾಣಿ-ಪಕ್ಷಿಗಳು, ವನ್ಯ ಮೃಗಗಳು ಎಲ್ಲವು ಕುಡಿಯುವ ನೀರಿಗಾಗಿ ಈ 450 ಕೆರೆಗಳನ್ನೇ ಆಶ್ರಯಿಸಿಕೊಂಡಿದೆ. ಈ ಪೈಕಿ ಭಾಗಶಃ 150 ಕೆರೆಗಳ ನೀರು ಖಾಲಿಯಾಗಿರುವುದು, ಇದೀಗ ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಈಗ ಕೇವಲ ಸೋಲಾರ್ ಪಂಪ್ ಸೆಟ್​ಗಳಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದ್ರೆ, ಇದು ಕೇವಲ 2 ತಿಂಗಳಿಗಷ್ಟೇ ಸಾದ್ಯವೆಂದು ಬಲ್ಲ ಮೂಲಗಳು ಹೇಳುತ್ತಿದೆ.

ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ಗೆ ಎದುರಾಗಲಿದ್ಯ ಭೀಕರ ಕ್ಷಾಮ? 450 ಕೆರೆಗಳ ಪೈಕಿ 150 ಕೆರೆಗಳಲ್ಲಿ ನೀರು ಭಾಗಶಃ ಖಾಲಿ ಖಾಲಿ!
ಬಂಡೀಪುರ
ಸೂರಜ್ ಪ್ರಸಾದ್ ಎಸ್.ಎನ್
| Edited By: ಕಿರಣ್ ಹನುಮಂತ್​ ಮಾದಾರ್|

Updated on: Oct 07, 2023 | 5:37 PM

Share

ಚಾಮರಾಜನಗರ, ಅ.07: ಬರಗಾಲದ ಎಫೆಕ್ಟ್ ಕೇವಲ ಊರು ಕೇರಿಗಳಿಗಷ್ಟೇ ಸೀಮಿತವಾಗಿಲ್ಲ, ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೂ ಈಗ ಬರದ ಎಫೆಕ್ಟ್ ತಟ್ಟಿದೆ. ಮಳೆ ಆಗದೆ ಹೋದರೆ, ಇನ್ನೆರೆಡು ತಿಂಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಸಿಗುವುದಿಲ್ಲವೆಂಬ ಸ್ಪೋಟಕ ಸತ್ಯ ಈಗ ಆಚೆ ಬಂದಿದೆ. ಹೌದು, ಚಾಮರಾಜನಗರ(Chamarajanagar)ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್(Bandipur Tiger Reserve Forest)​, ಭೀಕರ ಜಲಕ್ಷಾಮಕ್ಕೆ ಸಿಲುಕುತ್ತಾ ಎಂಬ ಆತಂಕವೀಗ ಎಲ್ಲರಲ್ಲಿ ಎದುರಾಗಿದೆ. ಅದಕ್ಕೆ ಕಾರಣ ಕಾಡಿನಲ್ಲಿರುವ 450 ಕೆರೆಗಳ ಪೈಕಿ 150 ಕ್ಕೂ ಹೆಚ್ಚು ಕೆರೆಗಳ ನೀರು ಭಾಗಶಃ ಖಾಲಿಯಾಗಿದೆ.

ಮೂಲಗಳ ಪ್ರಕಾರ ಕೇವಲ 2 ತಿಂಗಳಿಗಷ್ಟೇ ಪ್ರಾಣಿಗಳಿಗೆ ನೀರು

ಇಲ್ಲಿನ ಪ್ರಾಣಿ-ಪಕ್ಷಿಗಳು, ವನ್ಯ ಮೃಗಗಳು ಎಲ್ಲವು ಕುಡಿಯುವ ನೀರಿಗಾಗಿ ಈ 450 ಕೆರೆಗಳನ್ನೇ ಆಶ್ರಯಿಸಿಕೊಂಡಿದೆ. ಈ ಪೈಕಿ ಭಾಗಶಃ 150 ಕೆರೆಗಳ ನೀರು ಖಾಲಿಯಾಗಿರುವುದು, ಇದೀಗ ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಈಗ ಕೇವಲ ಸೋಲಾರ್ ಪಂಪ್ ಸೆಟ್​ಗಳಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದ್ರೆ, ಇದು ಕೇವಲ 2 ತಿಂಗಳಿಗಷ್ಟೇ ಸಾದ್ಯವೆಂದು ಬಲ್ಲ ಮೂಲಗಳು ಹೇಳುತ್ತಿದೆ. ಒಂದು ವೇಳೆ ಈ ಎರಡು ತಿಂಗಳಲ್ಲಿ ಮಳೆ ಆಗದೆ ಹೋದ್ರೆ, ವನ್ಯ ಮೃಗಗಳೆಲ್ಲ ಆಹಾರ ನೀರು ಅರಸಿ ನಾಡಿಗೆ ಲಗ್ಗೆ ಇಡುವ ಸಾಧ್ಯತೆಯನ್ನು ತಳ್ಳುಹಾಕುವಂತಿಲ್ಲ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ಭೀಕರ ಬರಗಾಲ: ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಸೈಲೆಂಟ್ ಆದ ಸರ್ಕಾರ, ಆಕ್ರೋಶಗೊಂಡ ರೈತರು

ಮೊದಲೇ ಅತಿ ಹೆಚ್ಚು ಮಾನವ ಹಾಗೂ ಕಾಡುಪ್ರಾಣಿಗಳ ಸಂಘರ್ಷಕ್ಕೆ ಕಾರಣವಾದ ಜಿಲ್ಲೆ ಎಂಬ ಅಪಖ್ಯಾತಿ ಬೇರೆ ಚಾಮರಾಜನಗರಕ್ಕೆ ಇದ್ದು, ಒಂದು ವೇಳೆ ಮಳೆ ಆಗದೆ ಹೋದರೆ, ಈ ಸಂಘರ್ಷ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ಬೋರ್​ವೆಲ್​​ಗಳ ನೀರನ್ನೇ ಹೆಚ್ಚು ಬಿಡುವ ಯೋಚನೆಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಸಹ ಯೋಚಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು