AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ ವಿಶ್ವನಾಥ್‌ಗೆ ಅರ್ಚಕರಿಂದ ನಿಂಬೆಹಣ್ಣಿನ ಅಭಯ!

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಎ ಎಚ್​ ವಿಶ್ವನಾಥ್‌ ಅವರಿಂದು ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಡಗಣ್ಣ ಸ್ವಾಮಿ ಗದ್ದುಗೆ ತೆರಳಿ ಪೂಜೆ ಸಲ್ಲಿಸಿದರು. ಅರ್ಚಕರಿಂದ ನಿಂಬೆಹಣ್ಣಿನ ಅಭಯ: ಪೂಜೆ ನೆರವೇರಿಸಿದ ವಿಶ್ವನಾಥ್‌ಗೆ ಅರ್ಚಕರು ನಿಂಬೆಹಣ್ಣು ನೀಡಿ, ಅಭಯ ಸೂಚಿಸಿದರು. ಆ ವೇಳೆ, ಮಂಗಳಾರತಿ ತಟ್ಟೆಗೆ ವಿಶ್ವನಾಥ್ ಹಣ ಹಾಕಿದರು. ನಂತರ ಮಂಗಳಾರತಿ ತಟ್ಟೆ ಕೆಳಗೂ ವಿಶ್ವನಾಥ್ ಹಣ ಕೊಟ್ಟರು. ತದನಂತರ, ಅಲ್ಲಿದ್ದ ಎಲ್ಲಾ ಅರ್ಚಕರಿಗೂ ತಲಾ 200 ರೂಪಾಯಿಯನ್ನು […]

ಎಚ್ ವಿಶ್ವನಾಥ್‌ಗೆ ಅರ್ಚಕರಿಂದ ನಿಂಬೆಹಣ್ಣಿನ ಅಭಯ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 18, 2019 | 11:16 AM

Share

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಎ ಎಚ್​ ವಿಶ್ವನಾಥ್‌ ಅವರಿಂದು ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಡಗಣ್ಣ ಸ್ವಾಮಿ ಗದ್ದುಗೆ ತೆರಳಿ ಪೂಜೆ ಸಲ್ಲಿಸಿದರು.

ಅರ್ಚಕರಿಂದ ನಿಂಬೆಹಣ್ಣಿನ ಅಭಯ: ಪೂಜೆ ನೆರವೇರಿಸಿದ ವಿಶ್ವನಾಥ್‌ಗೆ ಅರ್ಚಕರು ನಿಂಬೆಹಣ್ಣು ನೀಡಿ, ಅಭಯ ಸೂಚಿಸಿದರು. ಆ ವೇಳೆ, ಮಂಗಳಾರತಿ ತಟ್ಟೆಗೆ ವಿಶ್ವನಾಥ್ ಹಣ ಹಾಕಿದರು. ನಂತರ ಮಂಗಳಾರತಿ ತಟ್ಟೆ ಕೆಳಗೂ ವಿಶ್ವನಾಥ್ ಹಣ ಕೊಟ್ಟರು. ತದನಂತರ, ಅಲ್ಲಿದ್ದ ಎಲ್ಲಾ ಅರ್ಚಕರಿಗೂ ತಲಾ 200 ರೂಪಾಯಿಯನ್ನು ವಿಶ್ವನಾಥ್ ನೀಡಿದರು.

ಹಳ್ಳಿಹಕ್ಕಿ ಟೆಂಪಲ್​ ರನ್​! ಅದಾದ ನಂತರ, ಹುಣಸೂರು ತಾಲ್ಲೂಕಿನ ಹೊಸರಾಮೇನಹಳ್ಳಿಯಲ್ಲಿ ವೀರಾಂಜನೇಯನಿಗೆ ಹಳ್ಳಿಹಕ್ಕಿ ವಿಶ್ವನಾಥ್ ಪೂಜೆ ಸಲ್ಲಿಸಿದರು. ವೀರಾಂಜನೇಯನಿಗೆ ಪೂಜೆ ಸಲ್ಲಿಸಿಸುವ ವೇಳೆ ವಿಶ್ವನಾಥ್ ಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದರು.

Published On - 11:01 am, Mon, 18 November 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು