AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಕ್ರಿಕೆಟ್​ನಲ್ಲೂ ಮೀಸಲಾತಿ ಜಾರಿ ಮಾಡುವಂತೆ ನಟ ಚೇತನ್ ಒತ್ತಾಯ

ಭಾರತೀಯ ಕ್ರಿಕೆಟ್ ತಂಡದಲ್ಲಿ ‌ಶೇ 70 ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಕ್ರಿಕೆಟ್​ನಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್​ನಲ್ಲೂ ಮೀಸಲಾತಿ ಜಾರಿ ಮಾಡುವಂತೆ ನಟ ಚೇತನ್ ಒತ್ತಾಯ
ಭಾರತೀಯ ಕ್ರಿಕೆಟ್​ನಲ್ಲೂ ಮೀಸಲಾತಿ ಜಾರಿ ಮಾಡುವಂತೆ ನಟ ಚೇತನ್ ಒತ್ತಾಯ
TV9 Web
| Updated By: Rakesh Nayak Manchi|

Updated on: Dec 04, 2022 | 4:12 PM

Share

ಚಾಮರಾಜನಗರ: ಸದಾ ಒಂದಲ್ಲಾ ಒಂದು ವಿಚಾರ ಹಾಗೂ ವಿವಾದದಲ್ಲಿ ಸುದ್ದಿಯಾಗುತ್ತಿರುವ ನಟ ಚೇತನ್ ಅಹಿಂಸಾ (Actor Chetan Ahimsa) ಇದೀಗ ಕ್ರಿಕೆಟ್ ಟೀಂನಲ್ಲಿನ ಜಾತಿಯನ್ನು ಕೆದಕಿ ಮೀಸಲಾತಿ ಜಾರಿಗೆ ಒತ್ತಾಯಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡ (Indian Cricket Team)ದಲ್ಲಿ ಶೇಕಡಾ ‌70 ರಷ್ಟು ಆಟಗಾರರು ಮೇಲ್ಜಾತಿಯವರೇ ಇದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಜಾರಿಯಾಗಬೇಕು. ಎಸ್​ಸಿ ಮತ್ತು ಎಸ್​ಟಿ ಸಮುದಾಯಕ್ಕೆ ಮೀಸಲಾತಿ (SC ST Reservation) ಕೊಟ್ಟರೆ ಭಾರತದ ಕ್ರಿಕೆಟ್ ತಂಡ ಇನ್ನೂ ಉತ್ತಮವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೀದರ್: ಸ್ವಂತ ಕಟ್ಟಡವಿಲ್ಲದೆ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ ಹಾಸ್ಟೆಲ್; ಇಲ್ಲೂ ಸೌಲಭ್ಯಗಳ ಕೊರತೆ

ಡಾ. ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬಹುಜನ ವಾಲೆಂಟಿಯರ್ ಫೋರ್ಸ್ ವತಿಯಿಂದ ಆಯೋಹಿಸಿದ ಮೀಸಲಾತಿ ಪ್ರಾತಿನಿಧ್ಯವೋ-ಆರ್ಥಿಕ ಸಬಲೀಕರಣವೋ- ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಚೇತನ್ ಅಹಿಂಸಾ, ಭೋದಿದತ್ತ ಬಂತೇಜಿ ಸ್ವಾಮೀಜಿ, ಅ.ರಾ.ಮಹೇಶ್ ಮತ್ತಿತರು ಭಾಗಿಯಾದರು.

ಇದನ್ನೂ ಓದಿ: ಯಡಿಯೂರಪ್ಪರಿಂದ 10 ಕೋಟಿ ರೂ ವಸೂಲಿ: ಅಧಿವೇಶನದಲ್ಲಿ ವಚನಾನಂದ ಸ್ವಾಮಿ ಬಣ್ಣ ಬಯಲು ಮಾಡುತ್ತೇನೆ ಎಂದ ಯತ್ನಾಳ್

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿಚಾರಧಾರೆ ಕುರಿತು ಮಾತನಾಡಿದ ನಟ ಚೇತನ್, ದಕ್ಷಿಣ ಆಫ್ರಿಕಾ ಟೀಂನಲ್ಲಿ 2016 ರಿಂದ 6 ಮಂದಿ ಕರಿಯರಿಗೆ ಮೀಸಲಾತಿ ನೀಡಲಾಗುತ್ತಿದೆ. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ. ದಕ್ಷಿಣ ಆಫ್ರಿಕಾದ ಮಾದರಿಯಲ್ಲಿ ಭಾರತೀಯ ಕ್ರಿಕೆಟ್​ ತಂಡದಲ್ಲೂ ಮೀಸಲಾತಿ ನೀಡಬೇಕು. ಎಸ್​ಸಿ ಎಸ್​ಟಿಗೆ ಮೀಸಲಾತಿ ಕೊಟ್ಟಲ್ಲಿ ಇನ್ನೂ ಉತ್ತಮ ಕ್ರಿಕೆಟ್ ಟೀಂ ಆಗುತ್ತದೆ ಎಂದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ