AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರದಲ್ಲಿ ಟೊಮೆಟೊ ಬೆಳೆ ನಾಶ ಪ್ರಕರಣ: ಸ್ಥಳಕ್ಕೆ ಆಗಮಿಸಿದ ಶ್ವಾನದಳ

ರೈತ ಕಷ್ಟಪಟ್ಟು ಬೆಳೆದ ಟೊಮೆಟೊ ಬೆಳೆ ಹಳೇ ದ್ವೇಷಕ್ಕೆ ನಾಶಗೊಂಡ ಘಟನೆ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿತ್ತು. ಈ ಘಟನಾ ಸ್ಥಳಕ್ಕೆ ಆಗಿಮಿಸಿದ ಶ್ವಾನದಳ, ತಪಾಸಣೆ ನಡೆಸುತ್ತಿದೆ.

ಚಾಮರಾಜನಗರದಲ್ಲಿ ಟೊಮೆಟೊ ಬೆಳೆ ನಾಶ ಪ್ರಕರಣ: ಸ್ಥಳಕ್ಕೆ ಆಗಮಿಸಿದ ಶ್ವಾನದಳ
ಗಿಡಗಳಿಂದ ಟೊಮೆಟೊಗಳನ್ನು ಕಿತ್ತೆಸೆದಿರುವುದು
ಸೂರಜ್ ಪ್ರಸಾದ್ ಎಸ್.ಎನ್
| Updated By: Rakesh Nayak Manchi|

Updated on: Aug 03, 2023 | 3:07 PM

Share

ಚಾಮರಾಜನಗರ, ಆಗಸ್ಟ್ 3: ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಟೊಮೆಟೊ (Tomato) ಬೆಳೆ ನಾಶ ಮಾಡಿದ ಪ್ರಕರಣ ಸಂಬಂಧ ಸ್ಥಳಕ್ಕೆ ಶ್ವಾನದಳ ಆಗಮಿಸಿದ್ದು, ಜಮೀನಿನ ಸುತ್ತಲೂ ಪತ್ತೆ ಕಾರ್ಯ ನಡೆಸುತ್ತಿದೆ. ಆರೋಪಿಗಳ ವಾಸನೆ ಹಿಡಿದು ಪೊಲೀಸ್ ಶ್ವಾನಗಳು ಸಾಗುತ್ತಿವೆ.

ರೈತ ಮಂಜುನಾಥ್ ಚಿನ್ನಾಭರಣಗಳನ್ನು ಅಡವಿಟ್ಟು ಬ್ಯಾಂಕ್​ನಿಂದ ಸಾಲ ಪಡೆದು ಒಂದೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆ ಬೆಳೆದಿದ್ದರು. ಇನ್ನೇನು ಒಂದು ವಾರದಲ್ಲಿ ಬೆಳೆ ಕಟಾವು ಕಾರ್ಯ ನಡೆಸಬೇಕಿತ್ತು. ಭರ್ಜರಿ ಲಾಭಗಳಿಸುವ ಕನಸನ್ನೂ ಮಂಜುನಾಥ್ ಕಾಯುತ್ತಿದ್ದರು. ಆದರೆ ಈ ಟೊಮೆಟೊ ಬಳೆ ಹಳೇ ದ್ವೇಷಕ್ಕೆ ನಾಶಗೊಂಡಿದೆ.

ಇದನ್ನೂ ಓದಿ: Gadag News: ಗದಗ ಜಿಲ್ಲೆಯಲ್ಲಿ ಟೊಮೆಟೊ ಬೆಳೆದ ಏಕೈಕ ರೈತ, ಲಕ್ಷ ಲಕ್ಷ ಹಣ ಗಳಿಸಿದ ಅದೃಷ್ಟವಂತ

ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ವ್ಯಕ್ತಿಗಳು, ಗಿಡಗಳಿಂದ ಟೊಮೆಟೊಗಳನ್ನು ಕೀಳಿ ಎಸೆದಿದ್ದಾರೆ. ಇತ್ತ ಬೆಳೆಗೆ ಮಾಡಿದ ಸಾಲ ತೀರಿಸಲಾಗದೆ ಅತ್ತ ಹಣವು ಸಿಗದೆ ತ್ರಿಶಂಕು ಸ್ಥಿತಿಯಲ್ಲಿ ರೈತ ಮಂಜುನಾಥ್ ಸಿಲುಕಿದ್ದಾರೆ ಜಮೀನು ಮಾರಾಟ ಮಾಡಬೇಕು, ಇಲ್ಲವೇ ನೇಣು ಹಾಕಿಕೊಳ್ಳಬೇಕಷ್ಟೆ ಎಂದು ಮಂಜುನಾತ್ ಕಣ್ಣೀರು ಹಾಕುತ್ತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿಯ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ