
ಚಿಕ್ಕಬಳ್ಳಾಪುರ, ಫೆಬ್ರವರಿ 28: ಮಹಾರಾಷ್ಟ್ರ ಆಂಧ್ರದಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರ (Bird Flu), ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಚಿಕನ್ ಪ್ರಿಯರು ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನೂ ನಿನ್ನೆ ಚಿಕ್ಕಬಳ್ಳಾಪುರ ದಲ್ಲಿ ಹಕ್ಕಿ ಜ್ವರ ದೃಢವಾದ ಕಾರಣ ಇಂದು ಗ್ರಾಮವೊಂದರಲ್ಲಿದ್ದ ಕೋಳಿಗಳನ್ನು ಹಿಡಿದು ಸಾಮೂಹಿಕವಾಗಿ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕು ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಗ್ರಾಮದಲ್ಲಿ ಎಲ್ಲಂದರಲ್ಲಿ ದಿನೇ ದಿನೇ ಕೋಳಿಗಳು ಸಾವನ್ನಪ್ಪುತ್ತಿವೆ. ಇಂದು ಸಹ ಗ್ರಾಮದ ಮುನಿಕುಮಾರ್ ಎಂಬುವವರ ಮನೆಯಲ್ಲಿ 8 ಕೋಳಿಗಳು ಸಾವನ್ನಪ್ಪಿವೆ. ಉಳಿದ ಕೋಳಿಗಳು ತೂಕಡಿಸಿ ಸಾಯುವ ಸ್ಥಿತಿಯಲ್ಲಿವೆ. ಇದ್ರಿಂದ ಗ್ರಾಮದಲ್ಲಿ ಹಕ್ಕಿ ಜ್ವರ ಕಡಿವಾಣ ಹಾಕಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂದಾಗಿದ್ದು, ಇಂದು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದಲ್ಲಿರುವ ಸಾಕು ಕೋಳಿಗಳನ್ನು ಹಿಡಿದು ಸಾಮೂಹಿಕ ಹತ್ಯೆ ಮಾಡುವುದರ ಮೂಲಕ ಹಕ್ಕಿ ಜ್ವರ ಕಡಿವಾಣಕ್ಕೆ ಮುಂದಾದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಪತ್ತೆ: ಕೋಳಿಗಳ ಸಾವು, ಚಿಕನ್ ತಿನ್ನದಂತೆ ಡಿಸಿ ಮನವಿ
ಗ್ರಾಮದಲ್ಲಿ 90 ಮನೆಗಳಿದ್ದು 400 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅದರಲ್ಲೂ 400 ಕ್ಕೂ ಹೆಚ್ಚು ಕೋಳಿಗಳಿದ್ದವು. ಬಹುತೇಕ ಕೋಳಿಗಳು ರೋಗಗ್ರಸ್ಥವಾಗಿದ್ದು, ಸಿಕ್ಕ ಸಿಕ್ಕ ಕೋಳಿಗಳನ್ನ ಹಿಡಿದು ಕೊಲ್ಲಲಾಗಿದೆ. ಸಾಮೂಹಿಕವಾಗಿ ಕೋಳಿಗಳನ್ನ ಹಿಡಿದು ಭೂಮಿಯಲ್ಲಿ ಹೂಳಲಾಗ್ತಿದೆ.
ಗುಂಡಿಯಲ್ಲಿ ಸುಣ್ಣದಕಲ್ಲು, ಬ್ಲೀಚಿಂಗ್ ಪೌಡರ್ ಹಾಕಿ ಗುಂಡಿಯ ಮೇಲೆ ಡೇಂಜರ್ ಝೋನ್ ಬೋರ್ಡ್ ಹಾಕಲಾಗುತ್ತಿದೆ. ಮತ್ತೊಂದೆಡೆ ಗ್ರಾಮಸ್ಥರು ಕೋಳಿಗಳನ್ನು ಸುಲಭವಾಗಿ ಕೊಡದೆ ಸಾಕಿರುವ ಕೋಳಿಗಳಿಗೆ ಏನಾದ್ರು ಪರಿಹಾರ ಕೊಡುವಂತೆ ಮನವಿಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bird Flu Death: ಹಕ್ಕಿಜ್ವರದಿಂದ ವಿಶ್ವದಲ್ಲೇ ಮೊದಲ ಸಾವು, ಭಾರತದ 4 ರಾಜ್ಯಗಳಿಗೆ ಎಚ್ಚರಿಕೆ
ಇನ್ನೂ ಗ್ರಾಮದಲ್ಲಿ ಕೆಲ ಗ್ರಾಮಸ್ಥರು ಕೋಳಿಗಳನ್ನ ಕೊಡದೆ ಹಿಂದೇಟು ಹಾಕಿದ್ದು ನಾಳೆಯೂ ಸಹ ಗ್ರಾಮಸ್ಥರ ಮನವೊಲಿಸಿ ಅಳಿದುಳಿದ ಕೋಳಿಗಳನ್ನ ಸಹ ಕೊಲ್ಲುವುದಾಗಿ ತಿಳಿಸಿದ್ದಾರೆ. ವರದಹಳ್ಳಿ ಗ್ರಾಮದ ಮುಂಭಾಗ ನಾಕಾಬಂಧಿ ಹಾಗೆ ಮುಂದುವರೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:47 pm, Fri, 28 February 25