AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಕೊರೊನಾ ವಾರಿಯರ್ಸ್, ಇಂದು ಬೀದಿ ವಾರಿಯರ್ಸ್: ಸುಡುಬಿಸಿಲಿನಲ್ಲಿ ಪಿಪಿಇ ಕಿಟ್ ಧರಿಸಿ ಪ್ರತಿಭಟನೆ

ನಾವು ಅಂದು ಕೊರೊನಾ ವಾರಿಯರ್ಸ್ ಆಗಿದ್ದೆವು. ಆದರೆ ಇಂದು ಬೀದಿ ವಾರಿಯರ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹ ಕೇಳಿಬಂದಿದೆ.

ಅಂದು ಕೊರೊನಾ ವಾರಿಯರ್ಸ್, ಇಂದು ಬೀದಿ ವಾರಿಯರ್ಸ್: ಸುಡುಬಿಸಿಲಿನಲ್ಲಿ ಪಿಪಿಇ ಕಿಟ್ ಧರಿಸಿ ಪ್ರತಿಭಟನೆ
ಸುಡುಬಿಸಿಲಿನಲ್ಲಿ ಪಿಪಿಇ ಕಿಟ್ ಧರಿಸಿ ಪ್ರತಿಭಟನೆ
TV9 Web
| Edited By: |

Updated on:Apr 07, 2022 | 2:53 PM

Share

ಚಿಕ್ಕಮಗಳೂರು: ನಗರದಲ್ಲಿ ಕೊರೊನಾ ವಾರಿಯರ್ಸ್ ಮರುನೇಮಕ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಸುಡುವ ಬಿಸಿಲಿನಲ್ಲಿಯೇ ಪಿಪಿಇ ಕಿಟ್ ಧರಿಸಿ ಪ್ರತಿಭಟನೆ ಮಾಡಿದ್ದಾರೆ. ಕೊರೊನಾ ವೇಳೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಕ ಮಾಡಲಾಗಿತ್ತು. ಆದರೆ, ಕೊರೊನಾ ನಿಯಂತ್ರಣ ಹಿನ್ನೆಲೆ ಕೆಲಸದಿಂದ ತೆಗೆಯಲಾಗಿದೆ. ಆರೋಗ್ಯ ಇಲಾಖೆಯ ಈ ಕ್ರಮ ಖಂಡಿಸಿ ಗುತ್ತಿಗೆ ನೌಕರರು ಧರಣಿ ನಡೆಸಿದ್ದಾರೆ. ನಾವು ಅಂದು ಕೊರೊನಾ ವಾರಿಯರ್ಸ್ ಆಗಿದ್ದೆವು. ಆದರೆ ಇಂದು ಬೀದಿ ವಾರಿಯರ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಚಿಕ್ಕಮಗಳೂರು ಮಾತ್ರವಲ್ಲದೆ, ರಾಜ್ಯದ ವಿವಿಧ ಕಡೆಗಳಲ್ಲಿ ಈ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹಾಸನ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಹಾಸನ ಡಿಸಿ ಕಛೇರಿ ಎದುರು ನೂರಾರು ರೈತರು ಹೋರಾಟ ನಡೆಸಿದ್ದಾರೆ. ಎಂಟು ದಶಕದಿಂದ ಸಾಗುವಳಿ ಮಾಡುತ್ತಿರೋ ನೂರಾರು ಕುಟುಂಬಕ್ಕೆ ಹಕ್ಕು ಪತ್ರ ನೀಡಲು ಒತ್ತಾಯ ಮಾಡಿದೆ. ಕೆಲವರಿಗೆ ಸಾಗುವಳಿ ಚೀಟಿ ನೀಡಿ ಮತ್ತೆ ಕೆಲವರಿಗೆ ವಿನಾಕಾರಣ ತಿರಸ್ಕಾರ ಆರೋಪ ಕೇಳಿಬಂದಿದೆ. 1991 ಬಗರ್ ಹುಕುಂ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದರೂ ಹಕ್ಕು ಪತ್ರ ನೀಡದ ಆರೋಪ ಕೇಳಿಬಂದಿದೆ. ಕೂಡಲೆ ಎಲ್ಲಾ ಬಡ ಕುಟುಂಬಗಳಿಗೂ ಭೂಮಿ ಹಕ್ಕು ಪತ್ರ ನೀಡಲು ಒತ್ತಾಯಿಸಿ ಡಿಸಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.

ಇತರ ಸುದ್ದಿಗಳು

ಬೆಂಗಳೂರು: ಇಲ್ಲಿನ ದಾಸನಪುರದ ಎಪಿಎಂಸಿ ಬಳಿ ಮುಂಜಾನೆ 5.20 ರ ಸುಮಾರಿಗೆ ಊರಿಗೆ ತೆರಳುತ್ತಿದ್ದ ಲೋಕೇಶ್ ದಂಪತಿಯ ಬೈಕ್ ಅಡ್ಡಗಟ್ಟಿ ಸುಲಿಗೆ ಮಾಡಲಾಗಿದೆ. ಮೊಬೈಲ್, ಚಿನ್ನಾಭರಣ ದೋಚಿ ಖದೀಮರು ಪರಾರಿ ಆಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಇಲ್ಲಿನ ದಾಬಸ್‌ಪೇಟೆ ನಿವಾಸಿ ತೇಜೇಂದ್ರ ಎಂಬುವರ ಮನೆಯ ಕಿಟಕಿ ಕಂಬಿ ಕತ್ತರಿಸಿ ಬೀರುವಿನಲ್ಲಿದ್ದ 200 ಗ್ರಾಂ ಚಿನ್ನಾಭರಣ, ಒಂದೂವರೆ ಲಕ್ಷ ನಗದು ಕಳವು ಮಾಡಲಾಗಿದೆ.

ಬೆಂಗಳೂರು: ಇಲ್ಲಿನ ಆರ್.ಟಿ. ನಗರದ ಸರ್ಕಾರಿ ಶಾಲೆ ಮುಂಭಾಗ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿರುವ ದೃಶ್ಯ ಸೆರೆಯಾಗಿದೆ. ಅಕ್ಕ- ಪಕ್ಕದಲ್ಲಿ ಬರುವ ವಾಹನ ಸವಾರರಿಗೂ ತೊಂದರೆ ನೀಡುತ್ತಾ ವ್ಹೀಲಿಂಗ್ ಮಾಡಿದ್ದಾರೆ. ವ್ಹೀಲಿಂಗ್ ಮಾಡಿ, ಮೊಬೈಲ್​​ನಲ್ಲಿ ರೆಕಾರ್ಡ್ ಮಾಡುವ ಪುಂಡರು ವಿರುದ್ಧ ಹಲವು ಬಾರಿ ಸ್ಥಳೀಯರು ವಾರ್ನ್ ಮಾಡಿದರೂ ಡೋಂಟ್ ಕೇರ್ ಎಂಬ ವರ್ತನೆ ತೋರಿದ್ದಾರೆ.

ಬೆಂಗಳೂರು: ಕಸಕ್ಕೆ ಇಟ್ಟಿದ್ದ ಬೆಂಕಿ ವಾಹನಗಳಿಗೆ ತಗುಲಿ ಸುಟ್ಟುಕರಕಲು ಆದ ಘಟನೆ ಇಲ್ಲಿನ ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ಸಂಭವಿಸಿದೆ. ಆಟೋ, ಕಾರು, ದ್ವಿಚಕ್ರ ವಾಹನ ಸುಟ್ಟುಕರಕಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಜಯನಗರ: ಇಲ್ಲಿನ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕಂಟೇನರ್​​ಗೆ ಬೈಕ್ ಡಿಕ್ಕಿ ಆಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಸಹಳ್ಳಿಯಿಂದ ಇಮಡಾಪುರಕ್ಕೆ ಬೈಕ್​​ನಲ್ಲಿ ತೆರಳುತ್ತಿದ್ದ ಸವಾರ ಆಕಾಶ್​​ ಮೃತಪಟ್ಟಿದ್ದಾರೆ.

ಕೊಪ್ಪಳ: ಇಲ್ಲಿ ಐಪಿಎಲ್ ಬೆಟ್ಟಿಂಗ್​​ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಅಳವಂಡಿ ಪೊಲೀಸರು ಶಿವಕುಮಾರ ಕಣವಿ, ಹನುಮಂತಪ್ಪ ಕಕ್ಕೂರು ಎಂಬವರನ್ನು ಬಂಧಿಸಿ ನಗದು ಜಪ್ತಿ ಮಾಡಿದ್ದಾರೆ.

ಮಡಿಕೇರಿ: ಕುಡಿದ ಮತ್ತಿನಲ್ಲಿ ಲಾರಿ ಚಾಲಕನಿಂದ ಅವಾಂತರ ಸೃಷ್ಟಿಯಾಗಿದೆ. ರಸ್ತೆ ಮಧ್ಯೆ ಲಾರಿ ನಿಲ್ಲಿಸಿ ನಿದ್ದೆಗೆ ಜಾರಿದ ಚಾಲಕನಿಂದ ಮಡಿಕೇರಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಾಂತರ ಉಂಟಾಗಿದೆ. ಮಡಿಕೇರಿ ಸಮೀಪದ ಚೈನ್ ಗೇಟ್ ಬಳಿ ಲಾರಿ ನಿಲ್ಲಿಸಿದ್ದ ಲಾರಿಯನ್ನು ಬಳಿಕ ಸ್ಥಳೀಯರು ರಸ್ತೆಬದಿ ನಿಲ್ಲಿಸಿದ್ದಾರೆ. ಮದ್ಯದ ನಶೆಯಲ್ಲಿ ಲಾರಿ ನಿಲ್ಲಿಸಿದ್ದ ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು: ತಾಯಿ, ಮಗಳನ್ನು ಕೊಂದಿದ್ದ ಹಂತಕನಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿದ ಸೆಷನ್ಸ್ ಕೋರ್ಟ್

ಇದನ್ನೂ ಓದಿ: ಅನುಪಯುಕ್ತ ಬೆಡ್​ಶೀಟ್​ಗೆ ಬೆಂಕಿ ಹಚ್ಚಿ ಆಸ್ಪತ್ರೆ ವಾರ್ಡ್ ತುಂಬೆಲ್ಲಾ ಹೊಗೆ; ಬ್ರಿಮ್ಸ್ ಸಿಬ್ಬಂದಿ ಎಡವಟ್ಟಿಗೆ ರೋಗಿಗಳು ಹೈರಾಣು

Published On - 12:20 pm, Thu, 7 April 22