ಕೊರೊನಾ ಎಫೆಕ್ಟ್​: ಹುಟ್ಟುಹಬ್ಬದ ಪ್ರಯುಕ್ತ ಆನ್​ಲೈನ್​ ಮೂಲಕ ಪೂಜೆ ಸಲ್ಲಿಸಿದ ಡಿಕೆಶಿ

ಸಾಧು ಶ್ರೀನಾಥ್​

|

Updated on:May 15, 2020 | 5:05 PM

ಚಿಕ್ಕಮಗಳೂರು: ಕೊರೊನಾ ಕ್ರಿಮಿಯ ಎಫೆಕ್ಟ್​ನಿಂದ ದೇವಸ್ಥಾನಗಳಲ್ಲಿ ಪೂಜೆಗೆ ಬ್ರೇಕ್​ ಹಾಕಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆನ್​ಲೈನ್ ಮೂಲಕವೇ ದೇವರ ಮೊರೆ ಹೋಗಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗನಿಗೆ ಆನ್​ಲೈನ್ ಮೂಲಕವೇ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ. ಇಷ್ಟ ದೇವತೆ ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಮುಕ್ತಿಗೆ ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದ್ದಾರೆ. ಋಷ್ಯಶೃಂಗನಿಗೆ ಆನ್​ಲೈನ್ ಅಕೌಂಟ್ ಮೂಲಕವೇ ಹಣ ಪಾವತಿಸಿದ್ದಾರೆ. ಕಾಂಗ್ರೆಸ್​ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ […]

ಕೊರೊನಾ ಎಫೆಕ್ಟ್​: ಹುಟ್ಟುಹಬ್ಬದ ಪ್ರಯುಕ್ತ ಆನ್​ಲೈನ್​ ಮೂಲಕ ಪೂಜೆ ಸಲ್ಲಿಸಿದ ಡಿಕೆಶಿ

ಚಿಕ್ಕಮಗಳೂರು: ಕೊರೊನಾ ಕ್ರಿಮಿಯ ಎಫೆಕ್ಟ್​ನಿಂದ ದೇವಸ್ಥಾನಗಳಲ್ಲಿ ಪೂಜೆಗೆ ಬ್ರೇಕ್​ ಹಾಕಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆನ್​ಲೈನ್ ಮೂಲಕವೇ ದೇವರ ಮೊರೆ ಹೋಗಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗನಿಗೆ ಆನ್​ಲೈನ್ ಮೂಲಕವೇ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ.

ಇಷ್ಟ ದೇವತೆ ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಮುಕ್ತಿಗೆ ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದ್ದಾರೆ. ಋಷ್ಯಶೃಂಗನಿಗೆ ಆನ್​ಲೈನ್ ಅಕೌಂಟ್ ಮೂಲಕವೇ ಹಣ ಪಾವತಿಸಿದ್ದಾರೆ. ಕಾಂಗ್ರೆಸ್​ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ 101 ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada