AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎತ್ತಿನೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಟೆಕಿ ಕಾಲ್ನಡಿಗೆ; ಮಂಜುನಾಥನಿಗೆ ಹೀಗೊಂದು ಹರಕೆ

ಅಕ್ಟೋಬರ್ 2ರಂದು ಶ್ರೇಯಾಂಶ ಮತ್ತು ಭೀಷ್ಮ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆಯ ಪಯಣ ಆರಂಭಿಸುತ್ತಾರೆ. 36 ದಿನಗಳ ಬಳಿಕ, ಅಂದರೆ ನವೆಂಬರ್ 6ರಂದು ಧರ್ಮಸ್ಥಳಕ್ಕೆ ತಲುಪಿದ್ದಾರೆ.

ಎತ್ತಿನೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಟೆಕಿ ಕಾಲ್ನಡಿಗೆ; ಮಂಜುನಾಥನಿಗೆ ಹೀಗೊಂದು ಹರಕೆ
ಮಾರ್ಗ ಮಧ್ಯೆ ಭೀಷ್ಮನಿಗೆ ತಿನಿಸು ನೀಡುತ್ತಿರುವ ಶ್ರೇಯಾಂಸ್ (ಚಿತ್ರ ಕೃಪೆ; ನ್ಯೂಸ್ 18 ಇಂಗ್ಲಿಷ್)
Follow us
TV9 Web
| Updated By: Ganapathi Sharma

Updated on:Nov 19, 2022 | 6:05 PM

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ (Horanadu) ಸಾಫ್ಟ್​ವೇರ್ ಉದ್ಯೋಗಿ ಶ್ರೇಯಾಂಶ ಕೆ.ಡಿ. ಎಂಬವರು ಗಿರ್ ತಳಿಯ ಎತ್ತಿನ (Gyr Bull) ಜತೆ ಸತತ 36 ದಿನಗಳ ಕಾಲ ಬೆಂಗಳೂರಿನಿಂದ (Bengaluru) ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ (Dharmasthala) ತೆರಳಿ ಭಕ್ತರ ಗಮನ ಸೆಳೆದಿದ್ದಾರೆ. ಇವರ ಈ ಸಾಹಸಕ್ಕೆ, ತಾನು ಖರೀದಿಸಿದ ದನದ ಮೊದಲ ಕರುವನ್ನು ಧರ್ಮಸ್ಥಳದ ಮಂಜುನಾಥ ದೇವರಿಗೆ ಸಮರ್ಪಣೆ ಮಾಡುತ್ತೇನೆ ಎಂದು ಹೊತ್ತುಕೊಂಡಿದ್ದ ಹರಕೆಯೇ ಕಾರಣ.

ಗಿರ್ ತಳಿಯ ಬೆನ್ನತ್ತಿ…

ಗಿರ್ ತಳಿಯ ದನವೊಂದನ್ನು ಸಾಕಬೇಕು ಎಂಬುದು ಶ್ರೇಯಾಂಶ ಆಸೆಯಾಗಿತ್ತು. ಅದರಂತೆ ಗುಜರಾತ್​ನಿಂದ 2020ರಲ್ಲಿ 5 ವರ್ಷ ವಯಸ್ಸಿನ ದನವೊಂದನ್ನು 1.9 ಲಕ್ಷ ರೂ.ಗೆ ಖರೀದಿಸಿ ರೈಲಿನಲ್ಲಿ ಬರಮಾಡಿಕೊಳ್ಳುತ್ತಾರೆ. ದೊಡ್ಡಬಳ್ಳಾಪುರಕ್ಕೆ ಬಂದ ದನ ‘ಪಾರ್ವತಿ’ ಮತ್ತು ಅದರ ಕರು ‘ಭೀಷ್ಮ’ನನ್ನು ಬೆಂಗಳೂರಿಗೆ ಕರೆತರುತ್ತಾರೆ. ‘ಭೀಷ್ಮ’ ಜನಿಸಿ ಆಗ ಕೇವಲ ನಾಲ್ಕು ದಿನಗಳಾಗಿತ್ತಷ್ಟೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಶ್ರೇಯಾಂಸ್ ಪಕ್ಕದ ಖಾಲಿ ಸೈಟಿನ ಮಾಲೀಕರನ್ನು ಸಂಪರ್ಕಿಸಿ ದನ ಹಾಗೂ ಕರುವನ್ನು ಕಟ್ಟಿಹಾಕಲು ಜಾಗ ಮಾಡಿಕೊಳ್ಳುತ್ತಾರೆ. ಬಳಿಕ ಅದರ ಮಾಲೀಕರಿಗೆ ಅದಕ್ಕಾಗಿ ಬಾಡಿಗೆಯನ್ನೂ ಪಾವತಿಸುತ್ತಾರೆ. ಆ ಸಂದರ್ಭದಲ್ಲಿ ಶ್ರೇಯಾಂಸ್ ಕರುವನ್ನು ಧರ್ಮಸ್ಥಳದ ಮಂಜುನಾಥ ದೇವರಿಗೆ ಹರಕೆ ಒಪ್ಪಿಸುವುದಾಗಿ ನಂಬಿಕೊಂಡಿರುತ್ತಾರೆ. ಅದರಂತೆ ಭೀಷ್ಮನಿಗೆ 1 ವರ್ಷ 10 ತಿಂಗಳಾಗುವಾಗ ಧರ್ಮಸ್ಥಳಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ.

ಶುರುವಾಯ್ತು 36 ದಿನಗಳ ಪಯಣ

ಅಕ್ಟೋಬರ್ 2ರಂದು ಶ್ರೇಯಾಂಶ ಮತ್ತು ಭೀಷ್ಮ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆಯ ಪಯಣ ಆರಂಭಿಸುತ್ತಾರೆ. ಸಾಮಾನ್ಯ ಮಾರ್ಗವನ್ನು ಬಿಟ್ಟು ಭೀಷ್ಮನಿಗೆ ಮೇವು, ನೀರಿಗೆ ಕೊರತೆಯಾಗದಂತೆ ಕರೆದೊಯ್ಯಲು ಹಾಸನ, ಬೇಲೂರು, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ ಮೂಲಕ ಧರ್ಮಸ್ಥಳಕ್ಕೆ ಪಯಣಿಸುತ್ತಾರೆ. 36 ದಿನಗಳ ಬಳಿಕ, ಅಂದರೆ ನವೆಂಬರ್ 6ರಂದು ಧರ್ಮಸ್ಥಳಕ್ಕೆ ತಲುಪುತ್ತಾರೆ. ಅಂದು ವಿಶ್ರಮಿಸಿ ಮರುದಿನ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಭೀಷ್ಮನನ್ನು ಮಂಜುನಾಥನಿಗೆ ಸಮರ್ಪಿಸುತ್ತಾರೆ.

ಒಂದು ಲ್ಯಾಪ್​ಟಾಪ್, ಚಾರ್ಜರ್, ಒಂದು ಜತೆ ಹೆಚ್ಚುವರಿ ಬಟ್ಟೆಯೊಂದಿಗೆ ಶ್ರೇಯಾಂಶ ಮತ್ತು ಭೀಷ್ಮನ ಧರ್ಮಸ್ಥಳ ಪಯಣ ನಡೆಯುತ್ತದೆ. ದಾರಿಯಲ್ಲಿ ನೆರವಾದ ಎಲ್ಲರನ್ನೂ ಶ್ರೇಯಾಂಸ್ ಪ್ರೀತಿಯಿಂದ ಸ್ಮರಿಸಿಕೊಂಡಿರುವುದಾಗಿ ‘ನ್ಯೂಸ್ 18 ಇಂಗ್ಲಿಷ್’ ತಾಣ ವರದಿ ಮಾಡಿದೆ. ಕೆಲವರು ನಮ್ಮನ್ನು ಮನೆಗೆ ಕರೆದು ಊಟ ಮಾಡಿ ಜಾಗ ಕೊಟ್ಟರು. ನಾವು ಸಾಮಾನ್ಯವಾಗಿ ಶಾಲೆಯ ಮೈದಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆವು ಎಂದು ಶ್ರೇಯಾಂಶ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Sat, 19 November 22

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!