AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ, ಮಗಳು ಸಜೀವ ದಹನ: ಹತ್ತಾರು ಸಂಶಯ!

ಚಿತ್ರದುರ್ಗ: ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ಕೆಲವರು ಆಗ್ತಾನೆ ನಿದ್ರೆಯಿಂದ ಎದ್ದು ಕಣ್ ಒರಿಸಿಕೊಂಡು ಮನೆಯಿಂದ ಹೊರ ಬಂದಿದ್ರಷ್ಟೇ. ಈ ವೇಳೆ ಶಾಕ್ ಆಗಿ ಹೋಗಿದ್ರು. ಯಾಕಂದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ ದುರಂತವೇ ನಡೆದುಬಿಟ್ಟಿತ್ತು. ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ ಹಾಗೂ 13 ವರ್ಷದ ಹುಡುಗಿ ಸಜೀವವಾಗಿ ದಹನವಾಗಿಬಿಟ್ಟಿದ್ರು. ಇಲ್ಲಿ ಮೊದ ಮೊದ್ಲು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಅದ್ರಿಂದ್ಲೇ ಒಂದು ಕುಟುಂಬ ಸಾವಿನ ಮನೆ ಸೇರಿದೆ ಎನ್ನಲಾಗಿತ್ತು. ಆದ್ರೆ, ಸಿಲಿಂಡರ್ ನೋಡಿದ್ರೆ ಚೆನ್ನಾಗಿಯೇ ಇತ್ತು. ಹೀಗಾಗಿ ಹತ್ತಾರು […]

ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ, ಮಗಳು ಸಜೀವ ದಹನ: ಹತ್ತಾರು ಸಂಶಯ!
ಸಾಧು ಶ್ರೀನಾಥ್​
|

Updated on:Jan 03, 2020 | 1:05 PM

Share

ಚಿತ್ರದುರ್ಗ: ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ಕೆಲವರು ಆಗ್ತಾನೆ ನಿದ್ರೆಯಿಂದ ಎದ್ದು ಕಣ್ ಒರಿಸಿಕೊಂಡು ಮನೆಯಿಂದ ಹೊರ ಬಂದಿದ್ರಷ್ಟೇ. ಈ ವೇಳೆ ಶಾಕ್ ಆಗಿ ಹೋಗಿದ್ರು. ಯಾಕಂದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ ದುರಂತವೇ ನಡೆದುಬಿಟ್ಟಿತ್ತು. ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ ಹಾಗೂ 13 ವರ್ಷದ ಹುಡುಗಿ ಸಜೀವವಾಗಿ ದಹನವಾಗಿಬಿಟ್ಟಿದ್ರು. ಇಲ್ಲಿ ಮೊದ ಮೊದ್ಲು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಅದ್ರಿಂದ್ಲೇ ಒಂದು ಕುಟುಂಬ ಸಾವಿನ ಮನೆ ಸೇರಿದೆ ಎನ್ನಲಾಗಿತ್ತು. ಆದ್ರೆ, ಸಿಲಿಂಡರ್ ನೋಡಿದ್ರೆ ಚೆನ್ನಾಗಿಯೇ ಇತ್ತು. ಹೀಗಾಗಿ ಹತ್ತಾರು ಸಂಶಯದ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಖಾಸಗಿ ಬಸ್ ಚಾಲಕನಾಗಿ ಕೆಲಸ ಅರುಣ್ ಮಾಡ್ತಿದ್ದ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಲತಾ ಸೇವೆ ಸಲ್ಲಿಸ್ತಿದ್ರು. ಇವರಿಬ್ಬರ ಮುದ್ದಿನ ಮಗಳು ಇದೇ ಅಮೃತಾ. ಪ್ರಾರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಮೂವರು ಖುಷಿಯಾಗಿ ಕಾಲ ಕಳೀತಿದ್ರು. ಆದ್ರೆ, ಕೆಲ ವರ್ಷಗಳಿಂದ ಅರುಣ್​ಗೆ ಮಹಿಳೆಯರ ಸಹವಾಸ ಹೆಚ್ಚಾಗಿತ್ತಂತೆ. ಇದ್ರಿಂದ ಗಂಡ, ಹೆಂಡ್ತಿ ನಡುವೆ ಜಗಳ ಶುರುವಾಗಿತ್ತು. ಅಲ್ದೆ, ಇಬ್ಬರು ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ರು. ಆವತ್ತಿನಿಂದ ಅರುಣ್ ಹೆಂಡ್ತಿಯನ್ನ ಬಿಟ್ಟು ಹೋಗಿದ್ದ. ಆಗಾಗ ಮಾತ್ರ ಮನೆಗೆ ಬರ್ತಿದ್ದನಂತೆ.

ಮುಂಜಾನೆ ಸಮಯ.. ದಟ್ಟ ಹೊಗೆ.. ಆಗಿದ್ದು ಘನ ಘೋರ! ಅದ್ರಂತೆ ಬೆಳಗ್ಗೆ 6 ಗಂಟೆಗೆ ಮನೆಗೆ ಬಂದ ಅರುಣ್, ಹೆಂಡ್ತಿ ಹಾಗೂ ಮಗಳಿಗೆ ಸೀಮೆಎಣ್ಣೆ ಸುರಿದು ಕೊಂದಿದ್ದಾನೆ. ಈ ವೇಳೆ ಅರುಣ್​ಗೂ ಬೆಂಕಿ ತಾಗಿ ಸತ್ತಿದ್ದಾನೆ ಅಂತಾ ಮೃತ ಲತಾ ಸಹೋದರಿ ಆರೋಪ ಮಾಡ್ತಿದ್ದಾರೆ. ಒಟ್ನಲ್ಲಿ, ಗಂಡ, ಹೆಂಡ್ತಿ ಜಗಳವೋ ಅಥವಾ ಬೇರೆ ಏನಾದ್ರೂ ರೀಸನ್ ಇದ್ಯೋ ಗೊತ್ತಿಲ್ಲ. ಆದ್ರೆ, ಇಲ್ಲಿ ಒಂದು ಕುಟುಂಬವೇ ಸರ್ವನಾಶ ಆಗಿದೆ. ನೂರಾರು ಕನಸು ಕಂಡಿದ್ದ 13 ವರ್ಷದ ಹುಡುಗಿ ನರಕಯಾತನೆ ಅನುಭವಿಸಿ ಬಾರದ ಲೋಕ ಸೇರಿದ್ದಾಳೆ.

Published On - 1:02 pm, Fri, 3 January 20

ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ