AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ, ಮಗಳು ಸಜೀವ ದಹನ: ಹತ್ತಾರು ಸಂಶಯ!

ಚಿತ್ರದುರ್ಗ: ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ಕೆಲವರು ಆಗ್ತಾನೆ ನಿದ್ರೆಯಿಂದ ಎದ್ದು ಕಣ್ ಒರಿಸಿಕೊಂಡು ಮನೆಯಿಂದ ಹೊರ ಬಂದಿದ್ರಷ್ಟೇ. ಈ ವೇಳೆ ಶಾಕ್ ಆಗಿ ಹೋಗಿದ್ರು. ಯಾಕಂದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ ದುರಂತವೇ ನಡೆದುಬಿಟ್ಟಿತ್ತು. ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ ಹಾಗೂ 13 ವರ್ಷದ ಹುಡುಗಿ ಸಜೀವವಾಗಿ ದಹನವಾಗಿಬಿಟ್ಟಿದ್ರು. ಇಲ್ಲಿ ಮೊದ ಮೊದ್ಲು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಅದ್ರಿಂದ್ಲೇ ಒಂದು ಕುಟುಂಬ ಸಾವಿನ ಮನೆ ಸೇರಿದೆ ಎನ್ನಲಾಗಿತ್ತು. ಆದ್ರೆ, ಸಿಲಿಂಡರ್ ನೋಡಿದ್ರೆ ಚೆನ್ನಾಗಿಯೇ ಇತ್ತು. ಹೀಗಾಗಿ ಹತ್ತಾರು […]

ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ, ಮಗಳು ಸಜೀವ ದಹನ: ಹತ್ತಾರು ಸಂಶಯ!
ಸಾಧು ಶ್ರೀನಾಥ್​
|

Updated on:Jan 03, 2020 | 1:05 PM

Share

ಚಿತ್ರದುರ್ಗ: ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ಕೆಲವರು ಆಗ್ತಾನೆ ನಿದ್ರೆಯಿಂದ ಎದ್ದು ಕಣ್ ಒರಿಸಿಕೊಂಡು ಮನೆಯಿಂದ ಹೊರ ಬಂದಿದ್ರಷ್ಟೇ. ಈ ವೇಳೆ ಶಾಕ್ ಆಗಿ ಹೋಗಿದ್ರು. ಯಾಕಂದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ ದುರಂತವೇ ನಡೆದುಬಿಟ್ಟಿತ್ತು. ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ ಹಾಗೂ 13 ವರ್ಷದ ಹುಡುಗಿ ಸಜೀವವಾಗಿ ದಹನವಾಗಿಬಿಟ್ಟಿದ್ರು. ಇಲ್ಲಿ ಮೊದ ಮೊದ್ಲು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಅದ್ರಿಂದ್ಲೇ ಒಂದು ಕುಟುಂಬ ಸಾವಿನ ಮನೆ ಸೇರಿದೆ ಎನ್ನಲಾಗಿತ್ತು. ಆದ್ರೆ, ಸಿಲಿಂಡರ್ ನೋಡಿದ್ರೆ ಚೆನ್ನಾಗಿಯೇ ಇತ್ತು. ಹೀಗಾಗಿ ಹತ್ತಾರು ಸಂಶಯದ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಖಾಸಗಿ ಬಸ್ ಚಾಲಕನಾಗಿ ಕೆಲಸ ಅರುಣ್ ಮಾಡ್ತಿದ್ದ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಲತಾ ಸೇವೆ ಸಲ್ಲಿಸ್ತಿದ್ರು. ಇವರಿಬ್ಬರ ಮುದ್ದಿನ ಮಗಳು ಇದೇ ಅಮೃತಾ. ಪ್ರಾರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಮೂವರು ಖುಷಿಯಾಗಿ ಕಾಲ ಕಳೀತಿದ್ರು. ಆದ್ರೆ, ಕೆಲ ವರ್ಷಗಳಿಂದ ಅರುಣ್​ಗೆ ಮಹಿಳೆಯರ ಸಹವಾಸ ಹೆಚ್ಚಾಗಿತ್ತಂತೆ. ಇದ್ರಿಂದ ಗಂಡ, ಹೆಂಡ್ತಿ ನಡುವೆ ಜಗಳ ಶುರುವಾಗಿತ್ತು. ಅಲ್ದೆ, ಇಬ್ಬರು ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ರು. ಆವತ್ತಿನಿಂದ ಅರುಣ್ ಹೆಂಡ್ತಿಯನ್ನ ಬಿಟ್ಟು ಹೋಗಿದ್ದ. ಆಗಾಗ ಮಾತ್ರ ಮನೆಗೆ ಬರ್ತಿದ್ದನಂತೆ.

ಮುಂಜಾನೆ ಸಮಯ.. ದಟ್ಟ ಹೊಗೆ.. ಆಗಿದ್ದು ಘನ ಘೋರ! ಅದ್ರಂತೆ ಬೆಳಗ್ಗೆ 6 ಗಂಟೆಗೆ ಮನೆಗೆ ಬಂದ ಅರುಣ್, ಹೆಂಡ್ತಿ ಹಾಗೂ ಮಗಳಿಗೆ ಸೀಮೆಎಣ್ಣೆ ಸುರಿದು ಕೊಂದಿದ್ದಾನೆ. ಈ ವೇಳೆ ಅರುಣ್​ಗೂ ಬೆಂಕಿ ತಾಗಿ ಸತ್ತಿದ್ದಾನೆ ಅಂತಾ ಮೃತ ಲತಾ ಸಹೋದರಿ ಆರೋಪ ಮಾಡ್ತಿದ್ದಾರೆ. ಒಟ್ನಲ್ಲಿ, ಗಂಡ, ಹೆಂಡ್ತಿ ಜಗಳವೋ ಅಥವಾ ಬೇರೆ ಏನಾದ್ರೂ ರೀಸನ್ ಇದ್ಯೋ ಗೊತ್ತಿಲ್ಲ. ಆದ್ರೆ, ಇಲ್ಲಿ ಒಂದು ಕುಟುಂಬವೇ ಸರ್ವನಾಶ ಆಗಿದೆ. ನೂರಾರು ಕನಸು ಕಂಡಿದ್ದ 13 ವರ್ಷದ ಹುಡುಗಿ ನರಕಯಾತನೆ ಅನುಭವಿಸಿ ಬಾರದ ಲೋಕ ಸೇರಿದ್ದಾಳೆ.

Published On - 1:02 pm, Fri, 3 January 20

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ