AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ- ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಜೆಪಿ ನಡ್ಡಾ ಭಾಷಣ

ಈ ಮೊದಲು ಪಂಚಾಯ್ತಿಗಳ ಅಭಿವೃದ್ಧಿಗೆ ಎಷ್ಟು ಹಣ ಬರುತ್ತಿತ್ತು. ಈಗ ಪ್ರತಿ ಪಂಚಾಯ್ತಿಗಳಿಗೆ ಅಭಿವೃದ್ಧಿಗೆ ಕೋಟಿ ರೂ. ಬರುತ್ತಿದೆ ಎಂದು ಜಿಲ್ಲೆಯಲ್ಲಿ ನಡೆದ ‘ಬಿಜೆಪಿ ಜನಪ್ರತಿನಿಧಿಗಳ’ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭಾಷಣ ಮಾಡಿದರು.

ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ- ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಜೆಪಿ ನಡ್ಡಾ ಭಾಷಣ
ಜೆಪಿ ನಡ್ಡಾ
TV9 Web
| Updated By: sandhya thejappa|

Updated on:Jun 18, 2022 | 7:20 PM

Share

ಚಿತ್ರದುರ್ಗ: ಇಂದು ಗ್ರಾ.ಪಂ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡ್ತಿರೋದು ನನ್ನ ಸೌಭಾಗ್ಯ. ಕರ್ನಾಟಕದ ವಿವಿಧ ಭಾಗಗಳಿಂದ ಜನಪ್ರತಿನಿಧಿಗಳು ಬಂದಿದ್ದಾರೆ. ನಿಮ್ಮೆಲ್ಲರನ್ನು ನೋಡಿ ನನಗೆ ತುಂಬಾ ಸಂತೋಷ ಆಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. ಪ್ರಧಾನಿ ಮೋದಿಯವರು (PM Modi) ನೀಡಿದ ಕಾರ್ಯಕ್ರಮ ರೈತರ ಜೀವನಶೈಲಿಯನ್ನೇ ಬದಲಾಯಿಸಿದೆ. ಕಷ್ಟದ ದಿನಗಳ ಅನುಭವ ಇಲ್ಲದಿದ್ರೆ ಒಳ್ಳೆಯ ದಿನಗಳ ಅನುಭವ ಆಗಲ್ಲ. ಈ ಮೊದಲು ಪಂಚಾಯ್ತಿಗಳ ಅಭಿವೃದ್ಧಿಗೆ ಎಷ್ಟು ಹಣ ಬರುತ್ತಿತ್ತು. ಈಗ ಪ್ರತಿ ಪಂಚಾಯ್ತಿಗಳಿಗೆ ಅಭಿವೃದ್ಧಿಗೆ ಕೋಟಿ ರೂ. ಬರುತ್ತಿದೆ ಎಂದು ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ‘ಬಿಜೆಪಿ ಜನಪ್ರತಿನಿಧಿಗಳ’ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭಾಷಣ ಮಾಡಿದರು.

ಈ ಮೊದಲು ದೆಹಲಿಯಿಂದ ಬಂದ ಹಣ ಬೆಂಗಳೂರಿನಲ್ಲಿ ನಿಲ್ಲುತ್ತಿತ್ತು. ಈಗ ನೇರವಾಗಿ ದೆಹಲಿಯಿಂದ ಪಂಚಾಯ್ತಿಗಳಿಗೆ ಹಣ ಬರ್ತಿದೆ. ಹಳ್ಳಿಯ ವ್ಯಕ್ತಿ ಈ ಮೊದಲು ಆಸ್ತಿ ಅಡ ಇಡದೇ ಬ್ಯಾಂಕ್ನಿಂದ ಸಾಲ ಪಡೆಯಲು ಆಗ್ತಿರಲಿಲ್ಲ. ಈಗ ಸ್ವಾಮಿತ್ವ ಯೋಜನೆಯಡಿ ಜಮೀನುಗಳನ್ನು ಡ್ರೋನ್ ಮೂಲಕ ಸರ್ವೆ ಮಾಡಿ, ಜಮೀನುಗಳ ಪ್ರಾಪರ್ಟಿ ಕಾರ್ಡ್ ರೈತರಿಗೆ ನೀಡಲಾಗಿದೆ ಎಂದು ಜೆಪಿ ನಡ್ಡಾ ತಿಳಿಸಿದರು.

ಬೊಮ್ಮಾಯಿಗೆ ಅಭಿನಂದನೆ: ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾತನಾಡಿದ ನಡ್ಡಾ, ಬಯಲು ಶೌಚಮುಕ್ತ ಸ್ಥಾನದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ಉಜ್ವಲ, ಆಯುಷ್ಮಾನ್, ಗರೀಬ್ ಕಲ್ಯಾಣ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಉತ್ತಮವಾಗಿ ಜಾರಿ ಮಾಡಿದೆ. ಗ್ರಾ.ಪಂ. ಸದಸ್ಯರು, ಬಿಜೆಪಿ ಕಾರ್ಯಕರ್ತರು ಜಾಗೃತಿ ಮೂಡಿಸಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಸ್ವರಾಜ್​ ಅಭಿಯಾನದ ಮೂಲಕ ಗ್ರಾಮದ ಅಭಿವೃದ್ಧಿಯ ಪ್ಲ್ಯಾನ್ ಜನರೇ ಮಾಡುತ್ತಿದ್ದಾರೆ. 8 ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್​ ಮೂಲಕ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ
Image
ಸಿಇಟಿ ಪರೀಕ್ಷೆಯಲ್ಲಿ ಮೊಬೈಲ್ ಮೂಲಕ ಉತ್ತರ ಬರೆಯಲು ಯತ್ನ! ವಿದ್ಯಾರ್ಥಿ ಪೊಲೀಸರ ವಶಕ್ಕೆ
Image
Viral Video: ಪುರುಷ ಗ್ರಾಹಕರನ್ನು ಸೆಳೆಯಲು ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ದೃಶ್ಯ ಬಳಕೆ, ಟೀಕೆಗೆ ಗುರಿಯಾದ ಪಾಕ್​ನ ರೆಸ್ಟೋರೆಂಟ್
Image
IND vs SA 5th T20 Match Preview: ಬೆಂಗಳೂರಿನಲ್ಲಿ ಸರಣಿ ನಿರ್ಧಾರ; ಭಾರತಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ
Image
ಪಿಯು ಫಲಿತಾಂಶ: ರಬಕವಿ-ಬನಹಟ್ಟಿಯ ಈ ಹುಡುಗ ತಂದೆತಾಯಿ ತನಗಿಟ್ಟ ಹೆಸರನ್ನು ಸಾಧನೆ ಮೂಲಕ ಸಾರ್ಥಕಪಡಿಸಿದ್ದಾನೆ!!

ಮುಂದುವರಿದು ಮಾತನಾಡಿದ ಅವರು, ದೇಶದಲ್ಲಿ ಸಾಮಾಜಿಕ ಭದ್ರತೆಯ ಕೆಲಸ ಮಾಡಬೇಕಾಗಿದೆ. ಅಟಲ್ ಸುರಕ್ಷಾ ಯೋಜನಾ, ಆಯುಷ್ಮಾನ್ ಭಾರತ್, ಗರೀಬ್ ಕಲ್ಯಾಣ ಸೇರಿ ವಿವಿಧ ಯೋಜನೆ ಸಾಕಾರಗೊಳಿಸಬೇಕು. ಎಫ್​ಡಿಐನಲ್ಲಿ ಕರ್ನಾಟಕ‌ ದೇಶದಲ್ಲೇ ನಂಬರ್ ಒನ್‌ ಸ್ಥಾನದಲ್ಲಿದೆ. ಪಡಿತರ ​ಕಾರ್ಡ್ ಹೆಚ್ಚಳಗೊಳಿಸುವ ಕೆಲಸ ಬೊಮ್ಮಾಯಿ ಸರ್ಕಾರ ಮಾಡಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಈಗ ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ದೇಶದ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೇಶದ ಗಡಿ ತಲುಪಲು 24 ಗಂಟೆ ಸಾಕು ಎಂಬ ಸ್ಥಿತಿ ಈಗಿದೆ. ಯಾವುದೇ ಸಂದರ್ಭದಲ್ಲಿ ಸೇನೆ ಯುದ್ಧಕ್ಕೆ ಸನ್ನದ್ಧವಾಗಿರುತ್ತದೆ. ನಾವು ಯಾವುದೇ ದೇಶದ ಭೂಮಿ ಒತ್ತುವರಿ ಮಾಡಲ್ಲ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಕೂರಲ್ಲ ಎಂದು ಸಂದೇಶ್ ಸಾರಿದರು.

ಮೋದಿ ಮೇಲೆ ನಂಬಿಕೆ ಇಡಬೇಕು: ದೇಶದ ಜನರು ಪ್ರಧಾನಿ ಮೋದಿ ಮೇಲೆ ನಂಬಿಕೆ ಇಡಬೇಕು ಎಂದು ಚಿತ್ರದುರ್ಗದ ಮುರುಘಾಮಠದಲ್ಲಿ ಜೆಪಿ ನಡ್ಡಾ ಹೇಳಿಕೆ ನೀಡಿದರು. ಅಗ್ನಿವೀರ್ ಸೇವೆ ಸಲ್ಲಿಸಿ ಬಂದವರಿಗೆ ವಿಫುಲ ಅವಕಾಶ ಸಿಗಲಿದೆ. ಪ್ರತಿಭಟನೆ ದಾರಿಯಲ್ಲಿರುವ ಯುವಕರು ಅರ್ಥ ಮಾಡಿಕೊಳ್ಳಲಿ. 17ನೇ ವರ್ಷದಲ್ಲಿ ತರಬೇತಿಯ ಅವಕಾಶ ಸಿಗುತ್ತದೆ. ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಸಿಗಲಿದೆ. ಅಗ್ನಿಪಥ ಯೋಜನೆ ಲಾಭವನ್ನು ಪಡೆಯುವ ಕೆಲಸ ಆಗಬೇಕು ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Sat, 18 June 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?