Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡಿನೋವಿನ ಕಾರಣ ಸಿಎಂ ಸಿದ್ದರಾಮಯ್ಯ ಹಂಪಿ ಉತ್ಸವ 2025 ಉದ್ಘಾಟನೆಗೆ ಬರುತ್ತಿಲ್ಲ: ಜಮೀರ್ ಅಹ್ಮದ್

ಮಂಡಿನೋವಿನ ಕಾರಣ ಸಿಎಂ ಸಿದ್ದರಾಮಯ್ಯ ಹಂಪಿ ಉತ್ಸವ 2025 ಉದ್ಘಾಟನೆಗೆ ಬರುತ್ತಿಲ್ಲ: ಜಮೀರ್ ಅಹ್ಮದ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 28, 2025 | 2:42 PM

ವಿಶ್ವ ವಿಖ್ಯಾತ ಹಂಪಿ ಉತ್ಸವ ಕಳೆದ ಬಾರಿಯಂತೆ ಈ ಸಲವೂ ಮೂರು ದಿನಗಳ ಕಾಲ ನಡೆಯಲಿದೆ. 2025 ರ ಉತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಚಿವ ಜಮೀರ್ ಅಹ್ಮದ್ ಖುದ್ದು ಹೇಳುವಂತೆ ಈ ವರ್ಷದ ಉತ್ಸವ ಭಿನ್ನವಾಗಿದೆ, ಸೊಗಸಾಗಿದೆ ಮತ್ತು ಅದ್ದೂರಿಯಾಗಿದೆ.

ವಿಜಯನಗರ, ಫೆ. 28: ಹಂಪಿ ಉತ್ಸವಕ್ಕೆ (Hampi Utsav) ಕ್ಷಣಗಣನೆ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಪ್ಡೇಟ್​ಗಳನ್ನು ಹೊಸಪೇಟೆಯಲ್ಲಿ ಮಾಧ್ಯಮಗಳಿಗೆ ನೀಡಿದರು. ಹಂಪಿ ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಬೇಕಿತ್ತು,ಆದರೆ ಮಂಡಿನೋವಿಂದ ಬಳಲುತ್ತಿರುವ ಅವರು ಬರಲಾಗಲ್ಲ ಅಂತ ಹೇಳಿದ್ದಾರೆ ಮತ್ತು ತಮ್ಮ ಪರವಾಗಿ ಹಂಪಿ ಜನರ ಕ್ಷಮೆ ಕೇಳಬೇಕು ಅಂತ ಹೇಳಿರುವರೆಂದು ಜಮೀರ್ ಅಹ್ಮದ್ ಹೇಳಿದರು. ಹಾಗೆಯೇ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಬೇರೆ ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿರುವ ಕಾರಣ ಬರಲಾಗಲ್ಲ ಎಂದಿದ್ದಾರಂತೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 2025ರ ಹಂಪಿ ಉತ್ಸವದ ಲಾಂಛನ ಅನಾವರಣ