Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿದವರಿಗೆ ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಿರುವ ಸಾಮಾಜಿಕ ಕಾರ್ಯಕರ್ತ.. ದಿನಕ್ಕೆ 500 ಊಟ ವಿತರಣೆ ಯೋಜನೆ

ಕೊರೊನಾ ವಿರುದ್ಧ ಬಿಟ್ಟಿರುವ ಲಾಕ್‌ಡೌನ್ ಅನ್ನೋ ಬ್ರಹ್ಮಾಸ್ತ್ರ ಕೊರೊನಾ ಕಂಟ್ರೋಲ್ ಮಾಡ್ತಿದೆ ನಿಜ. ಆದ್ರೆ ಈ ಲಾಕ್‌ಡೌನ್ ಅದೆಷ್ಟೋ ಬಡವರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆಯನ್ನ ಹಾಕುತ್ತಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಗೆ ತಂದಿದೆ. ಹೀಗಾಗಿ ಆ ಯುವ ಸ್ವಯಂಸೇವಕ ಸಂಘಟನೆ ಹಸಿದ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ.

ಹಸಿದವರಿಗೆ ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಿರುವ ಸಾಮಾಜಿಕ ಕಾರ್ಯಕರ್ತ.. ದಿನಕ್ಕೆ 500 ಊಟ ವಿತರಣೆ ಯೋಜನೆ
ಹಸಿದವರಿಗೆ ಊಟ ವಿತರಣೆ
Follow us
ಆಯೇಷಾ ಬಾನು
|

Updated on: May 21, 2021 | 7:33 AM

ಉಡುಪಿ: ಲಾಕ್‌ಡೌನ್ ಲಾಕ್‌ಡೌನ್ ಲಾಕ್‌ಡೌನ್‌.. ಈ ಪದ ಕೇಳುತ್ತಿದ್ದರೆ ಭಯ ಆಗುತ್ತೆ. ಯಾಕಂದ್ರೆ ಈ ಲಾಕ್‌ಡೌನ್‌ನಿಂದ ಹಣವಂತರು ಮನೆಯಲ್ಲಿ ಚೆನ್ನಾಗಿ ಉಂಡು ತಿಂದು ಮಲಗಿದ್ರೆ, ಬಡವರು ಹಸಿದ ಹೊಟ್ಟೆಯಲ್ಲಿ ಮಲಗುವಂತೆ ಮಾಡಿದೆ. ಅಂದೇ ದುಡಿದು ಅಂದೇ ಊಟ ಮಾಡುವರು ಒಂದು ಹೊತ್ತಿನ ಊಟಕ್ಕೂ ನರಕಯಾತನೆ ಪಡುತ್ತಿದ್ದಾರೆ.

ಬಡವರ ಕಷ್ಟ ಈ ನೋಡಲಾಗದೆ, ಹೋಟೆಲ್ ಕ್ಲೋಸ್ ಇರುವುದರಿಂದ ಉಡುಪಿಯ ಕಾಂಗ್ರೆಸ್ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಮತ್ತು ಬಳಗ ಪ್ರತಿದಿನ 250ಕ್ಕೂ ಅಧಿಕ ಊಟ ವಿತರಿಸುತ್ತಿದ್ದಾರೆ. ಕೇವಲ ರಸ್ತೆ ಬದಿಯಲ್ಲಿರುವ ನಿರಾಶ್ರಿತರು ಮಾತ್ರವಲ್ಲದೆ ಆಸ್ಪತ್ರೆಗಳಿಗೆ ದುಡಿಯುವ ಆ್ಯಂಬುಲೆನ್ಸ್ ಚಾಲಕರು, ಪೊಲೀಸರು ಮತ್ತು ಹೋಂಗಾರ್ಡ್ ಸಿಬ್ಬಂದಿಗೆ ಊಟ ನೀಡುತ್ತಿದ್ದಾರೆ. ಎಲ್ಲಾ ಕಡೆ ಹೋಟೆಲ್‌ಗಳು ಮುಚ್ಚಿರುವ ಕಾರಣ ಬಹಳಷ್ಟು ಜನರು ನಗರದಲ್ಲಿ ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ನೀಗಿಸಲು ಕೃಷ್ಣಮೂರ್ತಿ ಮತ್ತು ಅವರ ತಂಡ ಹಗಲಿರುಳು ಶ್ರಮಿಸುತ್ತಿದೆ.

Free meal

ಊಟ ವಿತರಣೆಗೆ ಸಿದ್ಧತೆ

ಕೃಷ್ಣಮೂರ್ತಿ ಅವರ ತಂಡ ಕೇವಲ ಊಟ ಹಂಚುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾರಿಗೆ ಔಷಧಿ ಅಗತ್ಯವಿದೆಯೋ ಅವರಿಗೆ ಮೆಡಿಕಲ್ ಸ್ಟೋರ್ಗಳಿಂದ ಉಚಿತವಾಗಿ ಔಷಧಿ ಸರಬರಾಜು ಮಾಡುತ್ತಿದ್ದಾರೆ. 25 ಅಧಿಕ ಆಟೋ ಚಾಲಕರನ್ನು ಜೊತೆಗೂಡಿಸಿಕೊಂಡು ಮೆಡಿಕಲ್ ಎಮರ್ಜೆನ್ಸಿ ಇರುವ ಜನರಿಗೆ ಉಚಿತ ಆಟೋ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೈವೆಯಲ್ಲಿ ಹೋಗುವ ಲಾರಿ ಚಾಲಕರಿಗೂ ಊಟ ನೀರು ನೀಡುವ ಕೆಲಸ ನಿತ್ಯ ಈ ಯುವಕರ ತಂಡದಿಂದ ನಡೆಯುತ್ತಿದೆ.

ಹೋಟೆಲ್ ಉದ್ಯಮಿಯಾಗಿರುವ ಕೃಷ್ಣಮೂರ್ತಿ ತನ್ನ ಹೋಟೆಲ್‌ ಕಿಚನ್ ಬಳಸಿಕೊಂಡು ಊಟ ತಯಾರಿಸುತ್ತಿದ್ದಾರೆ. ಉಡುಪಿ, ಕಾಪು, ಕಟಪಾಡಿ, ಪರ್ಕಳ, ಮಣಿಪಾಲ ಮೊದಲಾದ ಕಡೆ ಇವರು ಆಹಾರ ವಿತರಿಸುತ್ತಿದ್ದು, ಇಂದಿನಿಂದ ದಿನಕ್ಕೆ 500 ಊಟ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ನಮ್ಮದೊಂದು ಸಲಾಂ.

Free meal

ಪೊಲೀಸರು ಮತ್ತು ಹೋಂಗಾರ್ಡ್ ಸಿಬ್ಬಂದಿಗೆ ಊಟ ವಿತರಣೆ

ಇದನ್ನೂ ಓದಿ: ರೋಗಿಗಳಿಗೆ ಚಿಕಿತ್ಸೆ ನೀಡೋದನ್ನು ನಿಮ್ಮಿಂದ ಕಲಿಯಬೇಕಿಲ್ಲ; ಸೋನು ಸೂದ್​ ವಿರುದ್ಧ ತಿರುಗಿಬಿದ್ದ ವೈದ್ಯರು

ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ