AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿದವರಿಗೆ ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಿರುವ ಸಾಮಾಜಿಕ ಕಾರ್ಯಕರ್ತ.. ದಿನಕ್ಕೆ 500 ಊಟ ವಿತರಣೆ ಯೋಜನೆ

ಕೊರೊನಾ ವಿರುದ್ಧ ಬಿಟ್ಟಿರುವ ಲಾಕ್‌ಡೌನ್ ಅನ್ನೋ ಬ್ರಹ್ಮಾಸ್ತ್ರ ಕೊರೊನಾ ಕಂಟ್ರೋಲ್ ಮಾಡ್ತಿದೆ ನಿಜ. ಆದ್ರೆ ಈ ಲಾಕ್‌ಡೌನ್ ಅದೆಷ್ಟೋ ಬಡವರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆಯನ್ನ ಹಾಕುತ್ತಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಗೆ ತಂದಿದೆ. ಹೀಗಾಗಿ ಆ ಯುವ ಸ್ವಯಂಸೇವಕ ಸಂಘಟನೆ ಹಸಿದ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ.

ಹಸಿದವರಿಗೆ ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಿರುವ ಸಾಮಾಜಿಕ ಕಾರ್ಯಕರ್ತ.. ದಿನಕ್ಕೆ 500 ಊಟ ವಿತರಣೆ ಯೋಜನೆ
ಹಸಿದವರಿಗೆ ಊಟ ವಿತರಣೆ
ಆಯೇಷಾ ಬಾನು
|

Updated on: May 21, 2021 | 7:33 AM

Share

ಉಡುಪಿ: ಲಾಕ್‌ಡೌನ್ ಲಾಕ್‌ಡೌನ್ ಲಾಕ್‌ಡೌನ್‌.. ಈ ಪದ ಕೇಳುತ್ತಿದ್ದರೆ ಭಯ ಆಗುತ್ತೆ. ಯಾಕಂದ್ರೆ ಈ ಲಾಕ್‌ಡೌನ್‌ನಿಂದ ಹಣವಂತರು ಮನೆಯಲ್ಲಿ ಚೆನ್ನಾಗಿ ಉಂಡು ತಿಂದು ಮಲಗಿದ್ರೆ, ಬಡವರು ಹಸಿದ ಹೊಟ್ಟೆಯಲ್ಲಿ ಮಲಗುವಂತೆ ಮಾಡಿದೆ. ಅಂದೇ ದುಡಿದು ಅಂದೇ ಊಟ ಮಾಡುವರು ಒಂದು ಹೊತ್ತಿನ ಊಟಕ್ಕೂ ನರಕಯಾತನೆ ಪಡುತ್ತಿದ್ದಾರೆ.

ಬಡವರ ಕಷ್ಟ ಈ ನೋಡಲಾಗದೆ, ಹೋಟೆಲ್ ಕ್ಲೋಸ್ ಇರುವುದರಿಂದ ಉಡುಪಿಯ ಕಾಂಗ್ರೆಸ್ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಮತ್ತು ಬಳಗ ಪ್ರತಿದಿನ 250ಕ್ಕೂ ಅಧಿಕ ಊಟ ವಿತರಿಸುತ್ತಿದ್ದಾರೆ. ಕೇವಲ ರಸ್ತೆ ಬದಿಯಲ್ಲಿರುವ ನಿರಾಶ್ರಿತರು ಮಾತ್ರವಲ್ಲದೆ ಆಸ್ಪತ್ರೆಗಳಿಗೆ ದುಡಿಯುವ ಆ್ಯಂಬುಲೆನ್ಸ್ ಚಾಲಕರು, ಪೊಲೀಸರು ಮತ್ತು ಹೋಂಗಾರ್ಡ್ ಸಿಬ್ಬಂದಿಗೆ ಊಟ ನೀಡುತ್ತಿದ್ದಾರೆ. ಎಲ್ಲಾ ಕಡೆ ಹೋಟೆಲ್‌ಗಳು ಮುಚ್ಚಿರುವ ಕಾರಣ ಬಹಳಷ್ಟು ಜನರು ನಗರದಲ್ಲಿ ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ನೀಗಿಸಲು ಕೃಷ್ಣಮೂರ್ತಿ ಮತ್ತು ಅವರ ತಂಡ ಹಗಲಿರುಳು ಶ್ರಮಿಸುತ್ತಿದೆ.

Free meal

ಊಟ ವಿತರಣೆಗೆ ಸಿದ್ಧತೆ

ಕೃಷ್ಣಮೂರ್ತಿ ಅವರ ತಂಡ ಕೇವಲ ಊಟ ಹಂಚುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾರಿಗೆ ಔಷಧಿ ಅಗತ್ಯವಿದೆಯೋ ಅವರಿಗೆ ಮೆಡಿಕಲ್ ಸ್ಟೋರ್ಗಳಿಂದ ಉಚಿತವಾಗಿ ಔಷಧಿ ಸರಬರಾಜು ಮಾಡುತ್ತಿದ್ದಾರೆ. 25 ಅಧಿಕ ಆಟೋ ಚಾಲಕರನ್ನು ಜೊತೆಗೂಡಿಸಿಕೊಂಡು ಮೆಡಿಕಲ್ ಎಮರ್ಜೆನ್ಸಿ ಇರುವ ಜನರಿಗೆ ಉಚಿತ ಆಟೋ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೈವೆಯಲ್ಲಿ ಹೋಗುವ ಲಾರಿ ಚಾಲಕರಿಗೂ ಊಟ ನೀರು ನೀಡುವ ಕೆಲಸ ನಿತ್ಯ ಈ ಯುವಕರ ತಂಡದಿಂದ ನಡೆಯುತ್ತಿದೆ.

ಹೋಟೆಲ್ ಉದ್ಯಮಿಯಾಗಿರುವ ಕೃಷ್ಣಮೂರ್ತಿ ತನ್ನ ಹೋಟೆಲ್‌ ಕಿಚನ್ ಬಳಸಿಕೊಂಡು ಊಟ ತಯಾರಿಸುತ್ತಿದ್ದಾರೆ. ಉಡುಪಿ, ಕಾಪು, ಕಟಪಾಡಿ, ಪರ್ಕಳ, ಮಣಿಪಾಲ ಮೊದಲಾದ ಕಡೆ ಇವರು ಆಹಾರ ವಿತರಿಸುತ್ತಿದ್ದು, ಇಂದಿನಿಂದ ದಿನಕ್ಕೆ 500 ಊಟ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ನಮ್ಮದೊಂದು ಸಲಾಂ.

Free meal

ಪೊಲೀಸರು ಮತ್ತು ಹೋಂಗಾರ್ಡ್ ಸಿಬ್ಬಂದಿಗೆ ಊಟ ವಿತರಣೆ

ಇದನ್ನೂ ಓದಿ: ರೋಗಿಗಳಿಗೆ ಚಿಕಿತ್ಸೆ ನೀಡೋದನ್ನು ನಿಮ್ಮಿಂದ ಕಲಿಯಬೇಕಿಲ್ಲ; ಸೋನು ಸೂದ್​ ವಿರುದ್ಧ ತಿರುಗಿಬಿದ್ದ ವೈದ್ಯರು

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್