AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆಯಿಂದ ಮಹಿಳೆಯರಿಗೆ ಅಡ್ಡ ಪರಿಣಾಮ ಹೆಚ್ಚು.. ಅಧ್ಯಯನದಲ್ಲಿ ಹೊಸ ವಿಚಾರ ಬಹಿರಂಗ

ಕೊರೊನಾ ನಿಯಂತ್ರಣಕ್ಕೆ ಸರ್ಕಾರ‌ ಪಣತೊಟ್ಟಿದೆ. ದೇಶಾದ್ಯಂತ ಹಂತ ಹಂತವಾಗಿ ವ್ಯಾಕ್ಸಿನ್ ಅಭಿಯಾನವನ್ನ ಶುರು ಮಾಡಿದೆ. ಆದ್ರೆ ವ್ಯಾಕ್ಸಿನ್ ಪಡಿತಾ ಇರೋರಿಗೆ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಆಗ್ತಿದ್ದು, ಅದರಲ್ಲೂ ಮಹಿಳೆಯರಲ್ಲೇ ಈ ಸೈಡ್ ಎಫೆಕ್ಟ್ ಹೆಚ್ಚಾಗ್ತಿರೋದು ಕಂಡು ಬರ್ತಿದೆಯಂತೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.

ಕೊರೊನಾ ಲಸಿಕೆಯಿಂದ ಮಹಿಳೆಯರಿಗೆ ಅಡ್ಡ ಪರಿಣಾಮ ಹೆಚ್ಚು.. ಅಧ್ಯಯನದಲ್ಲಿ ಹೊಸ ವಿಚಾರ ಬಹಿರಂಗ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on:Mar 25, 2021 | 6:47 AM

Share

ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆ ವೈದ್ಯರು ನಡೆಸಿರುವ ಸ್ಟಡಿಯಲ್ಲಿ ಭಯಾನಕ ಸತ್ಯ ಹೊರಬಿದ್ದಿದೆ. ಕೊವಿಡ್ ವ್ಯಾಕ್ಸಿನ್ ಸೈಡ್ ಎಫೆಕ್ಟ್ ಮಹಿಳೆಯರಲ್ಲೇ ಅಧಿಕವಾಗಿ ಕಂಡುಬಂದಿದೆ. ರಾಜಧಾನಿ ಖಾಸಗಿ ಆಸ್ಪತ್ರೆಯಲ್ಲಿ ಕೈಗೊಂಡ ಅಧ್ಯಯನದಲ್ಲಿ ಹೊಸ ವಿಚಾರ ಬಹಿರಂಗವಾಗಿದೆ. ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದಿಂದ ನಡೆಸಲಾಗಿರುವ ಅಧ್ಯಯನದಲ್ಲಿ ಲಸಿಕೆ ಪಡೆದ ಮಹಿಳೆಯರಿಗೆ ಸೈಡ್ ಎಫೆಕ್ಟ್ ಆಗ್ತಿರೋದು ಗೊತ್ತಾಗಿದೆ.

ಪುರುಷರಿಗಿಂತ ಮಹಿಳೆಯರಿಗೆ ಲಸಿಕೆ ಅಡ್ಡ ಪರಿಣಾಮ ಹೆಚ್ಚು ಲಸಿಕೆ ಪಡೆದ ನಂತ್ರ ಜ್ವರ, ಮೈಕೈ ನೋವು, ಸುಸ್ತು, ತುಟಿ ಊತ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉದ್ಭವವಾಗಿದೆ. ಲಸಿಕೆ ಪಡೆದ ಶೇಕಡ 78 ಜನರಲ್ಲಿ ಅಡ್ಡಪರಿಣಾಮ ಕಾಣಿಸಿದೆ. ಹಾರ್ಮೋನ್ಸ್, ಇಮ್ಯುನೋಜೆನಿಸಿಟಿ ಪರಿಣಾಮ ಮಹಿಳೆಯರಿಗೆ ಲಸಿಕೆ ಸೈಡ್ ಎಫೆಕ್ಟ್ ಕಂಡುಬಂದಿದ್ದು, ಮಹಿಳೆಯರು ಮಾತ್ರವಲ್ಲದೆ 40 ವರ್ಷದೊಳಗಿನ ಹಲವರಿಗೆ ಸೈಡ್ ಎಫೆಕ್ಟ್ ಕಂಡುಬಂದಿದೆ.

ಇನ್ನು ಲಸಿಕೆಯಿಂದ ಅತಿ ಹೆಚ್ಚು ಸೈಡ್ ಎಫೆಕ್ಟ್ ಏನೂ ಆಗಿಲ್ಲ. ಸಣ್ಣ ಪ್ರಮಾಣದ ಎಫಕ್ಟ್ ಆಗಿದೆ. ಅದ್ರಲ್ಲೂ ಮಹಿಳೆಯರಿಗೆ ಹೆಚ್ಚು ಸೈಡ್ ಎಫೆಕ್ಟ್ ಉಂಟಾಗಿದೆ. ಅದನ್ನ ಹೊರುಪಡಿಸಿ ಲಸಿಕೆ ಕಂಪ್ಲೀಟ್ ಸೇಫಾಗಿದೆ. ಬ್ಯಾಪಿಸ್ಟ್ ಆಸ್ಪತ್ರೆ ಸಿಬ್ಬಂದಿ ಮೇಲೆ ಅಧ್ಯಯನ ನಡೆಸಲಾಗಿದೆ. 1500 ಆಸ್ಪತ್ರೆ ಸಿಬ್ಬಂದಿ ಪೈಕಿ 756 ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಲಸಿಕೆ ಪಡೆದವರಿಗೆ ಗೂಗಲ್ ಫಾರಂ‌ ನೀಡಿ ಉತ್ತರ ಪಡೆಯಲಾಗಿದೆ. 218 ಸಿಬ್ಬಂದಿಯಿಂದ ಹಲವು ರೀತಿ ಉತ್ತರ ಲಭ್ಯವಾಗಿದ್ದು, ಮಹಿಳೆಯರು ಸಣ್ಣ ಸೈಡ್ ಎಫೆಕ್ಟ್ ಬಗ್ಗೆ ಹೇಳಿಕೊಂಡಿದ್ದಾರೆ. ಸೈಡ್ ಎಫೆಕ್ಟ್ ಜೊತೆಗೆ, ಲಸಿಕೆ ಸೇಫ್ ಆಗಿರುವ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

ಒಟ್ನಲ್ಲಿ ಯಾವುದೇ ವ್ಯಾಕ್ಸಿನ್‌ ಪಡೆದರೂ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಇದ್ದೇ ಇರತ್ತೆ ಅನ್ನೋದು ತಜ್ಞ ವೈದ್ಯರ ಅಭಿಪ್ರಾಯ. ಆದರಲ್ಲೂ ಮಹಿಳೆಯರಿಗೆ ಬಹುಬೇಗ ಎಫೆಕ್ಟ್ ಉಂಟಾಗುತ್ತದೆ. ಹೀಗಾಗಿ ಯಾರೂ ಗಾಬರಿ ಪಡುವ ಅಗತ್ಯತೆಯಿಲ್ಲ.‌ ಮೂರ್ನಾಲ್ಕು ದಿನದ ಬಳಿಕ ಎಲ್ಲವೂ ಕ್ಲಿಯರ್ ಆಗುತ್ತೆ ಅನ್ನೋದನ್ನೂ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು: ಲಸಿಕೆ ರಫ್ತಿಗೆ ತಾತ್ಕಾಲಿಕ ತಡೆ?

Published On - 6:47 am, Thu, 25 March 21

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ