ಮಹಿಳೆ ಸ್ನಾನಕ್ಕೆ ಹೋಗುವುದನ್ನ ಗಮನಿಸಿ ಬಾತ್​​ರೂಮ್​ಗೆ ಹೋಗಿ ಬೆತ್ತಲಾಗಿ ನಿಂತ ಯುವಕ, ಮುಂದೇನಾಯ್ತು?

ಮಹಿಳೆ ಸ್ನಾನಕ್ಕೆ ಹೋಗುವುದನ್ನು ಗಮನಿಸಿದ ಯುವಕನೋರ್ವ ಓಡಿ ಹೋಗಿ ಬಾತ್​ ರೂಮ್​​ನಲ್ಲಿ ಬೆತ್ತಲಾಗಿ ನಿಂತಿದ್ದಾನೆ. ಮಹಿಳೆ ಸ್ನಾನಕ್ಕೆಂದು ಹೋದಾಗ ಯುವಕ ಬೆತ್ತಲಾಗಿ ಕಂಡು ಶಾಕ್​ ಆಗಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮಹಿಳೆ ಸ್ನಾನಕ್ಕೆ ಹೋಗುವುದನ್ನ ಗಮನಿಸಿ ಬಾತ್​​ರೂಮ್​ಗೆ ಹೋಗಿ ಬೆತ್ತಲಾಗಿ ನಿಂತ ಯುವಕ, ಮುಂದೇನಾಯ್ತು?
ಸಾಂದರ್ಭಿಕ ಚಿತ್ರ
Edited By:

Updated on: Aug 22, 2023 | 3:24 PM

ಮಂಗಳೂರು, (ಆಗಸ್ಟ್ 22): ಯುವಕನೋರ್ವ ಪಕ್ಕದ ಮನೆಯ ಬಾತ್ ರೂಮ್​ನಲ್ಲಿ (Bathroom) ಬೆತ್ತಲಾಗಿ ನಿಂತು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ಮೊನ್ನೆ ಸಂಜೆ 7.40ಕ್ಕೆ ಪಕ್ಕದ ಮನೆಯ ಮಹಿಳೆ(Woman) ಸ್ನಾನಕ್ಕೆ ಹೋಗುವುದನ್ನು ಗಮನಿಸಿದ ಕಾಮುಕ ಮನೋಜ್, ಮಹಿಳೆ ಬರುವ ಮೊದಲೇ ಹೋಗಿ ಬಾತ್​ ರೂಮ್​ನಲ್ಲಿ ಬೆತ್ತಲಾಗಿ ನಿಂತಿದ್ದಾನೆ. ಬಳಿಕ ಮಹಿಳೆ ಸ್ನಾನಕ್ಕೆಂದು ಬಾತ್​ ರೂಮ್​ಗೆ ಬಂದು ಲೈಟ್ ಆನ್ ಮಾಡಿದ್ದಾಗ ಮನೋಜ್​ ಬೆತ್ತಲಾಗಿ ನಿಂತಿರುವುದು ಕಂಡಿದೆ. ಇದರಿಂದ ಶಾಕ್ ಆದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಹೆಂಡ್ತಿ ಧ್ವನಿ  ಕೇಳಿ ಕೂಡಲೇ ಸ್ಥಳಕ್ಕೆ  ಪತಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಮನೋಜ್​ ಸ್ಥಳದಿಂದ ಪರಾರಿಯಾಗಿದ್ದಾರೆ.

ಅಲ್ಲದೇ ಬಾತ್​ರೂಮ್​​ನಲ್ಲಿ ಮಹಿಳೆ ಮೈ ಕೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದ್ದು. ಈ ಬಗ್ಗೆ ಮನೋಜ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಟ್ಸಾಪ್​ಗೆ ವಿಡಿಯೋ ಹರಿಬಿಟ್ಟ ಕಿಡಿಗೇಡಿ

ರಾಮನಗರದ ಕನಕಪುರದಲ್ಲಿ ವಾಟ್ಸಾಪ್​ ಗ್ರೂಪ್​ಗೆ ಮಹಿಳೆ ಸ್ನಾನದ ವಿಡಿಯೋ ಹಾಕಿದ ಆರೋಪ, ಧನರಾಜ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರತಿಬಂಧಕ ಹೆಸರಿನ ವಾಟ್ಸಾಪ್ ಗ್ರೂಪ್​ನಲ್ಲಿ ಆಗಸ್ಟ್​ 17 ರಂದು ವಿಡಿಯೋ ಶೇರ್​ ಮಾಡಿದ ಆರೋಪದಡಿ, ಮಹಿಳೆ ದೂರು ನೀಡಿದ್ರು. ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಇನ್ನಷ್ಟು ಮಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us