ಕೋಮು ಪ್ರಚೋದನೆ ಭಾಷಣ; ಚೈತ್ರಾ ಕುಂದಾಪುರ ವಿರುದ್ಧ ಎಫ್ಐಆರ್

| Updated By: guruganesh bhat

Updated on: Oct 07, 2021 | 11:48 PM

ಅ‌ಕ್ಟೋಬರ್ 4ರಂದು ಸುರತ್ಕಲ್​ನಲ್ಲಿ ಭಜರಂಗದಳ ಮತ್ತು ದುರ್ಗಾ ವಾಹಿನಿ ಸುರತ್ಕಲ್ ಪ್ರಖಂಡ ಜನಜಾಗೃತಿ ಸಭೆಯಲ್ಲಿ ಭಾಷಣ ಮಾಡಿದ್ದ ಚೈತ್ರಾ ಕುಂದಾಪುರ್ ಭಾಷಣದಲ್ಲಿ ಕೆಲ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು.

ಕೋಮು ಪ್ರಚೋದನೆ ಭಾಷಣ; ಚೈತ್ರಾ ಕುಂದಾಪುರ ವಿರುದ್ಧ ಎಫ್ಐಆರ್
ಚೈತ್ರಾ ಕುಂದಾಪುರ
Follow us on

ಮಂಗಳೂರು: ಕೋಮು ಪ್ರಚೋದನೆ ಭಾಷಣ ಮಾಡಿದ ಆರೋಪದಡಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅ‌ಕ್ಟೋಬರ್ 4ರಂದು ಸುರತ್ಕಲ್​ನಲ್ಲಿ ಭಜರಂಗದಳ ಮತ್ತು ದುರ್ಗಾ ವಾಹಿನಿ ಸುರತ್ಕಲ್ ಪ್ರಖಂಡ ಜನಜಾಗೃತಿ ಸಭೆಯಲ್ಲಿ ಭಾಷಣ ಮಾಡಿದ್ದ ಚೈತ್ರಾ ಕುಂದಾಪುರ್ ಭಾಷಣದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು.

ಜತೆಗೆ ಅವರು ತಮ್ಮ ಭಾಷಣದಲ್ಲಿ ಒಂದು ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು. ಅವರ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು ಅಲ್ಲದೇ ಸುರತ್ಕಲ್​ನಲ್ಲಿ ಅವರು ಮಾಡಿದ ಭಾಷಣ ವಿವಾದದ ಕಿಡಿಯನ್ನೇ ಹೊತ್ತಿಸಿತ್ತು. ಭಾಷಣದ ಸುತ್ತ ವಾದ ವಿವಾದದ ಮಾತುಗಳು ಕೇಳಿಬಂದಿದ್ದವು.

ಅನ್ಯಧರ್ಮದವರ ಜತೆ ಹಿಂದೂ ಯುವತಿಯರು ತೆರಳುವುದನ್ನು ಭಜರಂಗದಳದ ಸದಸ್ಯರು ಮಾಡಿದರೆ ನೈತಿಕ ಪೊಲೀಸ್​ಗಿರಿ ಆಗುತ್ತದೆ ಅಂತಾದಲ್ಲಿ ಅದನ್ನು ದುರ್ಗಾವಾಹಿನಿಯ ಸದಸ್ಯೆಯರು ಮಾಡಬೇಕು. ಅನ್ಯಧರ್ಮದ ಮಹಿಳೆಯರನ್ನು ಮದುವೆಯಾಗಲೂ ನಮಗೆ ಗೊತ್ತು ಎಂಬಿತ್ಯಾದಿಯಾಗಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದರು.

ಇದನ್ನೂ ಓದಿ:

 17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು

Kambala: ಕಂಬಳ ಕ್ರೀಡೆಗೆ ಮಹಿಳಾ ಸಾರಥಿಗಳು; ಐವರು ಯುವತಿಯರಿಗೆ ತರಬೇತಿ ನೀಡಲು ತಯಾರಿ

Published On - 11:37 pm, Thu, 7 October 21