ಜನಾರ್ಧನ ಪೂಜಾರಿಗೆ ಕೊರೊನಾ ಸೋಂಕು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು

| Updated By: KUSHAL V

Updated on: Jul 05, 2020 | 7:35 PM

ದಕ್ಷಿಣ ಕನ್ನಡ: ಹಿರಿಯ ಕಾಂಗ್ರೆಸ್‌ ಮುಖಂಡ, ಮಾಜಿ ಕೇಂದ್ರ  ಸಚಿವ ಜನಾರ್ಧನ ಪೂಜಾರಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ತಮ್ಮ ತವರೂರಾದ ಜಿಲ್ಲೆಯ ಬಂಟ್ವಾಳದಲ್ಲಿ ನೆಲೆಸಿರುವ ಜನಾರ್ಧನ ಪೂಜಾರಿಯವರನ್ನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ನುರಿತ ವೈದ್ಯರಿಂದ ಪೂಜಾರಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಪೂಜಾರಿಯವರ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಪೂಜಾರಿಯವರಿಗೆ ಸೋಂಕು ತಗಲಿದೆ. ಪೂಜಾರಿ ಕುಟುಂಬಕ್ಕೆ ಅವರ ಮನೆಗೆಲಸಕ್ಕೆ ಬರುತ್ತಿದ್ದವರಿಂದ ಸೋಂಕು ತಗಲಿದೆ ಎನ್ನಲಾಗ್ತಿದೆ.

ಜನಾರ್ಧನ ಪೂಜಾರಿಗೆ ಕೊರೊನಾ ಸೋಂಕು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು
Follow us on

ದಕ್ಷಿಣ ಕನ್ನಡ: ಹಿರಿಯ ಕಾಂಗ್ರೆಸ್‌ ಮುಖಂಡ, ಮಾಜಿ ಕೇಂದ್ರ  ಸಚಿವ ಜನಾರ್ಧನ ಪೂಜಾರಿಗೆ ಕೊರೊನಾ ಸೋಂಕು ದೃಢವಾಗಿದೆ.

ಸದ್ಯ ತಮ್ಮ ತವರೂರಾದ ಜಿಲ್ಲೆಯ ಬಂಟ್ವಾಳದಲ್ಲಿ ನೆಲೆಸಿರುವ ಜನಾರ್ಧನ ಪೂಜಾರಿಯವರನ್ನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ನುರಿತ ವೈದ್ಯರಿಂದ ಪೂಜಾರಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಪೂಜಾರಿಯವರ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಪೂಜಾರಿಯವರಿಗೆ ಸೋಂಕು ತಗಲಿದೆ. ಪೂಜಾರಿ ಕುಟುಂಬಕ್ಕೆ ಅವರ ಮನೆಗೆಲಸಕ್ಕೆ ಬರುತ್ತಿದ್ದವರಿಂದ ಸೋಂಕು ತಗಲಿದೆ ಎನ್ನಲಾಗ್ತಿದೆ.

Published On - 7:34 pm, Sun, 5 July 20