AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ಕುಳಿತು ಸುಳ್ಯದಲ್ಲಿರುವ ಹೆಂಡತಿಗೆ ಮೂರು ಬಾರಿಯ ತಲಾಖ್ ಸಂದೇಶ ನೀಡಿದ್ದ, ಸಾಲದು ಅಂತಾ, ಮತ್ತೆ ಕರೆ ಮಾಡಿ ಪುನರುಚ್ಚರಿಸಿದ್ದ!

ಮೊದಲ ಮಗುವಾದ ಬಳಿಕ ಮಿಸ್ರೀಯಾ ವಿದೇಶದಲ್ಲಿ ಪತಿ ಜೊತೆ ನೆಲೆಸಿದ್ದರು. ಎರಡನೇ ಮಗುವಿನ ಹೆರಿಗೆಗೆ ಬಂದಾಗ ಮನಸ್ತಾಪ ತಲೆದೋರಿದೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿದೇಶದಲ್ಲಿ ಕುಳಿತು ಸುಳ್ಯದಲ್ಲಿರುವ ಹೆಂಡತಿಗೆ ಮೂರು ಬಾರಿಯ ತಲಾಖ್ ಸಂದೇಶ ನೀಡಿದ್ದ, ಸಾಲದು ಅಂತಾ, ಮತ್ತೆ ಕರೆ ಮಾಡಿ ಪುನರುಚ್ಚರಿಸಿದ್ದ!
ವಿದೇಶದಲ್ಲಿ ಕುಳಿತು ಸುಳ್ಯದಲ್ಲಿರುವ ಹೆಂಡತಿಗೆ ತ್ರಿವಳಿ ತಲಾಖ್ ನೀಡಿದ ಭೂಪ!
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಸಾಧು ಶ್ರೀನಾಥ್​|

Updated on:Sep 20, 2023 | 1:16 PM

Share

ಮಂಗಳೂರು, ಸೆಪ್ಟೆಂಬರ್​ 20: ಭಾರತದಲ್ಲಿ ತಲಾಖು ಇಲ್ಲ; ತ್ರವಳಿ ತಲಾಖೂ ಇಲ್ಲ; ಆದರೂ ವಿದೇಶದಲ್ಲಿರುವ ಪತಿರಾಯನೊಬ್ಬ ಡೆಲಿವರಿಗೆಂದು ಭಾರತಕ್ಕೆ ಬಂದಿರುವ ತನ್ನ ಹೆಂಡತಿಗೆ ತಲಾಖ್ ನೀಡಿದ್ದಾನೆ.  ಅಂದ್ರೆ ವಿವಾಹ ವಿಚ್ಛೇದನ (Divorce) ನೀಡಿದ್ದಾನೆ. ತನ್ನ ಗಂಡ ವಾಟ್ಸಾಪ್ ನಲ್ಲಿ ತ್ರಿವಳಿ ತಲಾಖ್ ನೀಡಿದ್ದು, ಕಾನೂನು ಕ್ರಮ ಕೈಗೊಳ್ಳಿ ಎಂದು ಗಂಡನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಮಧ್ಯೆ ಇತ್ತೀಚೆಗೆ ಕೌಟುಂಬಿಕ ಕಲಹ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಹೆಂತಿ ಮಿಸ್ರೀಯಾ (Misriya, Jayanagar in Sullia) ಎರಡನೇ ಮಗುವಿನ ಹೆರಿಗೆಗೆ ಭಾರತಕ್ಕೆ ಬಂದಿದ್ದು, 6 ತಿಂಗಳಿಂದ ಇಲ್ಲೇ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಮಧ್ಯೆ ಆಕೆಯ ವಿರುದ್ಧ ವೈಮನಸ್ಯ ಬೆಳೆಸಿಕೊಂಡ ಗಂಡ ಅಬ್ದುಲ್ ರಷೀದ್ (Abdul Rasheed) ದಿಢೀರನೆ ತಲಾಕ್ ಸಂದೇಶ (triple talaq message on WhatsApp) ರವಾನಿಸಿದ್ದಾನೆ. ತ್ರಿವಳಿ ತಲಾಖ್​ಗೆ ದೇಶಾದ್ಯಂತ ನಿಷೇಧವಿದ್ದು, ಅದನ್ನು ಅನುಸರಿಸಿದರೆ ಕಠಿಣ ಶಿಕ್ಷೆ ಜಾರಿಗೊಳಿಸುವ ಕಾಯ್ದೆ ಜಾರಿ ಮಾಡಲಾಗಿದೆ. ಹಾಗಿದ್ದರೂ, ಅಬ್ದುಲ್ ರಷೀದ್ ಎಂಬಾತ ಇಸ್ಲಾಂ ನಿಯಮವನ್ನು ಪತ್ನಿಯ ಮೇಲೆ ಹೇರಲು ಯತ್ನಿಸಿದ್ದಾನೆ. ಅಬ್ದುಲ್ ರಷೀದ್ ಮೂಲತಃ ಕೇರಳದ ತ್ರಿಶೂರ್​ ನಿವಾಸಿ (Thrissur, Kerala)

ಇದನ್ನೂ ಓದಿ: ಕೋಲಾರ: ಅಂತರಗಂಗೆ ಬೆಟ್ಟದ ಮೇಲೆ ಪಾಕ್ ಧ್ವಜದ ಮಾದರಿ ಹಸಿರು ಬಣ್ಣ ಬಳಿದು 786 ಬರೆದ ಕಿಡಿಕೇಡಿಗಳು

ಮೊದಲ ಮಗುವಾದ ಬಳಿಕ ಮಿಸ್ರೀಯಾ ವಿದೇಶದಲ್ಲಿ ಪತಿ ಜೊತೆ ನೆಲೆಸಿದ್ದರು. ಎರಡನೇ ಮಗುವಿನ ಹೆರಿಗೆಗೆ ಬಂದಾಗ ಮನಸ್ತಾಪ ತಲೆದೋರಿದೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮೂರು ಬಾರಿ ತಲಾಖ್ ಸಂದೇಶ ಸಾಲದು ಅಂತಾ, ಮತ್ತೆ ಕರೆ ಮಾಡಿ ಪುನರುಚ್ಚರಿಸಿದ್ದ ಭೂಪ!

ಮಂಗಳೂರು: ವಿದೇಶದಲ್ಲಿ ಕುಳಿತು ಹೆಂಡತಿಗೆ ತ್ರಿಬಲ್ ತಲಾಖ್ ನೀಡಿದ ಪ್ರಕರಣ ಆರೋಪಿ ವಿರುದ್ಧ ‘ದಿ ಮುಸ್ಲಿಂ ವುಮೆನ್ ಆ್ಯಕ್ಟ್ 2019’ ರಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸುಳ್ಯ ಠಾಣೆ ಪೊಲೀಸರು ಐಪಿಸಿ 504, 506 ಸೆಕ್ಷನ್ ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೂನ್ 5ರಂದೇ ತ್ರಿಬಲ್ ತಲಾಖ್ ಹೇಳಿದ್ದ ಆರೋಪಿ ಅಬ್ದುಲ್ ರಷೀದ್ ಫೋನ್ ಕರೆ ಹಾಗೂ ವಾಟ್ಸಪ್ ಮೂಲಕ ತಲಾಖ್ ಸಂದೇಶ ರವಾನೆ ಮಾಡಿದ್ದಾನೆ. ಸಾಲದು ಅಂತಾ ಆರೋಪಿ ಗಂಡ, ಜುಲೈ 7ರಂದು ತ್ರಿಬಲ್ ತಲಾಖ್ ನೀಡಿದರ ಬಗ್ಗೆ ಪುನರುಚ್ಚರಿಸಿದ್ದಾನೆ.

ನೀನು‌ ನಿನ್ನ ತಾಯಿಯೊಂದಿಗೆ ಜೀವಿಸು. ಇನ್ನು ನೀನು ನನಗೆ ಬೇಡ ಎಂದಿದ್ದಾನೆ ಆರೋಪಿ‌ ರಷೀದ್. ಸದ್ಯ ಸಂತ್ರಸ್ಥ ಮಹಿಳೆ ಮಿಸ್ರೀಯಾ ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:23 am, Wed, 20 September 23

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್