AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲನಗರಿ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಡೀಸೆಲ್​ ಕಳವು ದಂಧೆ!

ಮಂಗಳೂರಿನ ಸುರತ್ಕಲ್‌ನಲ್ಲಿರುವ ಟ್ಯಾಂಕರ್ ಯಾರ್ಡ್‌ನಲ್ಲಿ ಭಾರೀ ಪ್ರಮಾಣದ ಡೀಸೆಲ್ ಕಳ್ಳತನ ನಡೆದಿದ್ದು, 1685 ಲೀಟರ್ ಡೀಸೆಲ್ ಜಪ್ತಿಯಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಡಿಮೆ ತಾಪಮಾನದಲ್ಲಿ ಡೀಸೆಲ್‌ನ ಪ್ರಮಾಣ ಕಡಿಮೆ ಕಾಣುವುದನ್ನು ಬಳಸಿಕೊಂಡು ಟ್ಯಾಂಕರ್ ಚಾಲಕರು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಈ ಅಕ್ರಮದಲ್ಲಿ ಟ್ಯಾಂಕರ್ ಮಾಲೀಕರ ಪಾತ್ರವೂ ಇರುವ ಸಾಧ್ಯತೆಯಿದೆ.

ಕಡಲನಗರಿ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಡೀಸೆಲ್​ ಕಳವು ದಂಧೆ!
ಕಡಲನಗರಿ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಡೀಸೆಲ್​ ಕಳವು ದಂಧೆ!
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Jan 16, 2025 | 10:27 PM

Share

ಮಂಗಳೂರು, ಜನವರಿ 16: ವಾಯು ಸಾರಿಗೆ, ಜಲ ಸಾರಿಗೆ ಹಾಗೂ ಭೂ ಸಾರಿಗೆ ಈ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕರ್ನಾಟಕದ ಏಕೈಕ ನಗರವೆಂದರೆ ಅದು ಕಡಲ ನಗರಿ ಮಂಗಳೂರು. ಹೀಗಾಗಿ ಇಲ್ಲಿಂದ ಸಾಕಷ್ಟು ಉತ್ಪನ್ನಗಳು ರಾಜ್ಯ, ಹೊರರಾಜ್ಯಗಳಿಗೆ ರಫ್ತಾಗುತ್ತದೆ. ಅದರಲ್ಲಿ ಡೀಸೆಲ್ (Diesel)​ ರಫ್ತು ಕೂಡ ಒಂದು. ಇಷ್ಟೇ ಆದರೆ ಏನು ಸಮಸ್ಯೆ ಇರಲಿಲ್ಲ. ಆದರೆ ಮಂಗಳೂರಿನ ಟ್ಯಾಂಕರ್ ಯಾರ್ಡ್​ ಒಂದರಲ್ಲಿ ಭಾರೀ ಅಕ್ರಮದ ವಾಸನೆ ಸುಳಿದಾಡಿದ್ದು, ಲಕ್ಷಗಟ್ಟಲೇ ಮೌಲ್ಯದ ಡೀಸೆಲ್​ ಕಳ್ಳತನವಾಗಿದೆ. ಈ ಕುರಿತ ಕಂಪ್ಲೀಟ್​ ವರದಿ ಇಲ್ಲಿದೆ.

ಡೀಸೆಲ್​ ಕಳ್ಳತನ

ಕಡಲನಗರಿ ಮಂಗಳೂರಿನಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಟ್ಯಾಂಕರ್​ಗಳ ಮೂಲಕ ಡೀಸೆಲ್ ರಫ್ತಾಗುತ್ತೆ ಅನ್ನೋದು ಬಹುತೇಕರಿಗೆ ತಿಳಿದಿರುವ ವಿಚಾರ. ಆದರೆ ಈಗ ಹೊಸ ಸುದ್ದಿ ಏನೆಂದರೆ ಮಂಗಳೂರು ತಾಲೂಕಿನ ಸುರತ್ಕಲ್​​ ಸಮೀಪದ ಬಾಳ ಗ್ರಾಮದ ಟ್ಯಾಂಕರ್​ ಯಾರ್ಡ್​ನಲ್ಲಿ ಡೀಸೆಲ್​ ಲೋಡ್​​ ಮಾಡುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಟ್ಯಾಂಕರ್​ ಚಾಲಕರು ಡೀಸೆಲ್​ ಕಳ್ಳತನ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಮಾಲೀಕರು ಸಾಥ್​ ನೀಡಿದ್ದಾರೆ ಎಂಬ ಗುಮಾನಿ ಎದ್ದಿದೆ.

ಇದನ್ನೂ ಓದಿ: ಹಿಂದೂ ಯುವಕನೊಂದಿಗೆ ಮದ್ವೆಯಾದ ಮುಸ್ಲಿಂ ಯುವತಿ: ನಾಪತ್ತೆಯಾಗಿದ್ದ ಜೋಡಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷ

ಮಂಗಳೂರಿನಿಂದ ಟ್ಯಾಂಕರ್​ಗಳಲ್ಲಿ ಡೀಸೆಲ್​ ಲೋಡ್​ ಮಾಡಿ ಕೇರಳ, ತಮಿಳುನಾಡು ಸೇರಿದಂತೆ ರಾಜ್ಯ, ಹೊರರಾಜ್ಯಗಳಿಗೆ ಡೀಸೆಲ್​ ರಫ್ತು ಮಾಡಲಾಗುತ್ತದೆ. ಕಡಿಮೆ ತಾಪಮಾನದಲ್ಲಿ ಜಿಗುಟಾಗಿ ಇರುವ ಡೀಸೆಲ್​​ ಕಡಿಮೆ ಪ್ರಮಾಣದಲ್ಲಿರುವಂತೆ ಕಂಡರೆ ಹೆಚ್ಚು ತಾಪಮಾನಗಳಿರುವ ರಾಜ್ಯಗಳಿಗೆ ಹೋದಾಗ ಜಿಗುಟಾದ ಡೀಸೆಲ್​ ಕರಗಿ ದ್ರವವಾಗಿ ಮಾರ್ಪಾಡಾಗುವ ಕಾರಣ ಡೀಸೆಲ್​ ಪ್ರಮಾಣ ಹೆಚ್ಚಾದಂತೆ ತೋರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್​ ಚಾಲಕರು ಲೋಡಿಂಗ್ ಸಂದರ್ಭ ಕಡಿಮೆ ತಾಪಮಾನವಿರುವಾಗ ಟ್ಯಾಂಕರ್​ಗಳಿಂದ ಡೀಸೆಲ್​ ಕದ್ದು ಹೆಚ್ಚು ತಾಪಮಾನ ಹೊಂದಿರುವ ರಾಜ್ಯಗಳಲ್ಲಿರುವ ಫ್ಯಾಕ್ಟರಿಗಳಿಗೆ ರಫ್ತು ಮಾಡುವಾಗ ಪಂಗನಾಮ ಎಸಗಿರುವ ವಿಚಾರ ಬೆಳಕಿಗೆ ಬಂದಿದೆ.

ನಾಲ್ವರ ಬಂಧನ

ಸುರತ್ಕಲ್​ ಯಾರ್ಡ್​ನಲ್ಲಿಯೇ ಈ ಕಳ್ಳಾಟ ನಡೀತಾ ಇದ್ದು ಒಂದೊಂದು ಟ್ಯಾಂಕರ್​ಗಳಿಂದ ಖದೀಮರು ಏನಿಲ್ಲವೆಂದರೂ 40 ರಿಂದ 100 ಲೀಟರ್​ ಡೀಸೆಲ್​ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಬಿಸಿಲಿನ ತಾಪ ಏರಿದಂತೆ ಡೀಸೆಲ್ ಪ್ರಮಾಣ ಏರಿಕೆಯಾಗುವ ಕಾರಣ ಇವರ ಕಳ್ಳತನ ಫ್ಯಾಕ್ಟರಿಗಳ ಗಮನಕ್ಕೆ ಬಂದಿರಲಿಲ್ಲ. ಆದರೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ, ಕಳ್ಳತನ ಮಾಡಿ ಡೀಸೆಲ್​ ಸಂಗ್ರಹಿಸಿಟ್ಟಿದ್ದ ಶೆಡ್​ ಮೇಲೆ ದಾಳಿ ಮಾಡಿದ್ದು, ನಾಲ್ವರು ಆರೋಪಿಗಳಾದ ಸಂತೋಷ್​, ಐರನ್​ ರಿತೇಶ್​ ಮಿನೇಜ್, ಟ್ಯಾಂಕರ್ ಚಾಲಕ ನಾರಾಯಣ, ಜಾಗದ ಮಾಲೀಕ ರವಿ ಎಂಬವರನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ದಾಳಿ ವೇಳೆ 1 ಲಕ್ಷದ 52 ಸಾವಿರ ರೂಪಾಯಿ ಮೌಲ್ಯದ 1,685 ಲೀಟರ್​ ಡೀಸೆಲ್​, 20 ಲೀಟರ್​​ ಪೆಟ್ರೋಲ್​, ಕೃತ್ಯಕ್ಕೆ ಬಳಸಿದ 4 ಮೊಬೈಲ್​ ಸೇರಿದಂತೆ ಒಟ್ಟು 2 ಲಕ್ಷದ 2 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನ ಸೀಜ್​ ಮಾಡಿದ್ದಾರೆ .

ಇದನ್ನೂ ಓದಿ: ಮಂಗಳೂರು: ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಕ್ಯುಆರ್ ಕೋಡ್ ಇಟ್ಟ ಸಿಬ್ಬಂದಿ! ಆಮೇಲೇನಾಯ್ತು?

ಒಟ್ಟಿನಲ್ಲಿ ಮಂಗಳೂರಿನಲ್ಲಿನ ಫ್ಯೂಯಲ್ ಸರಬರಾಜು​ ಕಂಪನಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದವರ ಹೆಡೆಮುರಿ ಕಟ್ಟುವಲ್ಲಿ ಖಾಕಿ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ಮಾಲೀಕರೂ ಶಾಮಿಲಾಗಿರುವ ಸಾಧ್ಯತೆ ಗೋಚರಿಸುತ್ತಿದ್ದು ತಪ್ಪಿತಸ್ಥರ ಎದೆಯಲ್ಲಿ ನಡುಕ ಹುಟ್ಟಿರುವುದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್