Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿಯಲ್ಲಿ ಕಾರ್ಣಿಕ ಮೆರೆದ ಕೊರಗಜ್ಜ: ಅನಾರೋಗ್ಯದಿಂದ ಗುಣಮುಖನಾದ ಮಗ, ಹರಕೆ ಸಲ್ಲಿಸಿದ ಉಕ್ರೇನ್ ಕುಟುಂಬ

ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಉಕ್ರೇನ್ ದಂಪತಿ ಕೋರಿಕೊಂಡಿದ್ದರು. ಈ ವೇಳೆ ಕೊರಗಜ್ಜನಿಗೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು.

ಕರಾವಳಿಯಲ್ಲಿ ಕಾರ್ಣಿಕ ಮೆರೆದ ಕೊರಗಜ್ಜ: ಅನಾರೋಗ್ಯದಿಂದ ಗುಣಮುಖನಾದ ಮಗ, ಹರಕೆ ಸಲ್ಲಿಸಿದ ಉಕ್ರೇನ್ ಕುಟುಂಬ
ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಮೊರೆ ಹೋದ ವಿದೇಶಿ ದಂಪತಿ
Follow us
TV9 Web
| Updated By: ಆಯೇಷಾ ಬಾನು

Updated on:Nov 14, 2022 | 1:17 PM

ಮಂಗಳೂರು: ಚಿತ್ರರಂಗದಲ್ಲೇ ದೊಡ್ಡ ಮಟ್ಟಿಗೆ ಸದ್ದು ಮಾಡಿದ ಕಾಂತಾರ(Kantara) ಸಿನಿಮಾ ನಂತರ ಜನರಲ್ಲಿ ದೈವಾರಾಧನೆ(Tulunadu Daivaradhane) ಬಗೆಗಿನ ಆಸಕ್ತಿ ಹೆಚ್ಚಾಗಿದೆ. ದೈವಾರಾಧನೆ, ಭೂತಾರಾಧನೆಯನ್ನು ಜನ ಗೌರವಿಸಲು, ನಂಬಲು ಆರಂಭಿಸಿದ್ದಾರೆ. ಇದರ ನಡುವೆ ಮಗನ ಅನಾರೋಗ್ಯದ ಹಿನ್ನೆಲೆ ವಿದೇಶಿ ಕುಟುಂಬವೊಂದು ಕೊರಗಜ್ಜನಿಗೆ(Koragajja) ಹರಕೆ ಹೊತ್ತ ಘಟನೆ ನಡೆದಿದ್ದು ಕೊರಗಜ್ಜನ ಪವಾಡಕ್ಕೆ ಬೆರಗಾಗಿದೆ.

ಉಕ್ರೇನ್ ಪ್ರಜೆಗಳಾದ ಆಂಡ್ರ್ಯೋ ಮತ್ತು ಆತನ ಪತ್ನಿ ಎಲೆನಾ ತಮ್ಮ ಮಗ ಮ್ಯಾಕ್ಸಿಂಗಾಗಿ ಹರಕೆ ಹೊತ್ತಿದ್ದಾರೆ. ತುಳುನಾಡಿನ ಕಾರ್ಣಿಕ ಆರಾಧ್ಯ ದೈವ ಕೊರಗಜ್ಜನ ಕೋಲದಲ್ಲಿ ಉಕ್ರೇನ್ ನ ಕುಟುಂಬ ಮಗುವಿನ ಆರೋಗ್ಯಕ್ಕಾಗಿ ಹರಕೆ ಹೇಳಿದ್ದಾರೆ. ಆಂಡ್ರ್ಯೋ ದಂಪತಿಯ 6 ವರ್ಷದ ಮಗ ಮ್ಯಾಕ್ಸಿಂ, ಹೈ ಶುಗರ್ ನಿಂದ ಬಳಲುತ್ತಿದ್ದಾನೆ. ಮಗನ ಅನಾರೋಗ್ಯದ ಹಿನ್ನೆಲೆ 3 ತಿಂಗಳ ಹಿಂದೆ ಉಕ್ರೇನ್ ನಿಂದ ಭಾರತಕ್ಕೆ ಈ ಕುಟುಂಬ ಪ್ರವಾಸ ಕೈಗೊಂಡಿತ್ತು. ನಾಡಿ ನೋಡಿ ಔಷಧಿ ಕೊಡುವ ಮಂಗಳೂರಿನ ಭಕ್ತಿ ಭೂಷಣ್ ದಾಸ್ ಅವರನ್ನು ಈ ಕುಟುಂಬ ಭೇಟಿ ಮಾಡಿದೆ. ಸದ್ಯ ಈಗ 6 ವರ್ಷದ ಮ್ಯಾಕ್ಸಿಂ ಕಳೆದ ಮೂರು ತಿಂಗಳಿಂದ ಭಕ್ತಿ ಭೂಷಣ್ ದಾಸ್ ಅವರ ಮಂಗಳೂರು ಹೊರವಲಯದ ಬಂಟ್ವಾಳದ ಕುಮ್ಡೇಲು ಎಂಬಲ್ಲಿರುವ ಶ್ರೀ ರಾಧಾ ಸುರಭಿ ಗೋಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗುವಿಗೆ ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ನೀಡಲಾಗುತ್ತಿದೆ.

mng koragajja

ಮಗುವಿನ ಅನಾರೋಗ್ಯ ದೂರ ಮಾಡುವುದಾಗಿ ನುಡಿದಿದ್ದ ಕೊರಗಜ್ಜ

ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಉಕ್ರೇನ್ ದಂಪತಿ ಕೋರಿಕೊಂಡಿದ್ದರು. ಈ ವೇಳೆ ಕೊರಗಜ್ಜನಿಗೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಆಗ ಕೊರಗಜ್ಜ ಮಗನ ಅನಾರೋಗ್ಯ ದೂರ ಮಾಡುವ, ಕುಟುಂಬವನ್ನು ಕಾಪಾಡುವ ಅಭಯ ನೀಡಿತ್ತು. ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆ ಉಕ್ರೇನ್ ಕುಟುಂಬ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದ್ದಾರೆ. ಈ ಕುಟುಂಬ ಕೆಲವು ತಿಂಗಳುಗಳ ಬಳಿಕ ಮತ್ತೆ ಭಾರತಕ್ಕೆ ಮರಳಲಿದೆ.

mng koragajja

ಅಗೇಲು ಸೇವೆ ಎಂದರೇನು?

ಹರಕೆ ಹೊತ್ತವರು ಕೊರಗಜ್ಜನಿಗೆ ಪ್ರಿಯವಾದ ಆಹಾರವನ್ನ ನೈವೇದ್ಯವಾಗಿ ನೀಡುವುದು. ಇದರಲ್ಲಿ ಉಪ್ಪಿನಕಾಯಿ, ರೊಟ್ಟಿ, ಅನ್ನ, ಚಕ್ಕುಲಿ, ವೀಳ್ಯದೆಲೆ, ಕುಚಲಕ್ಕಿ, ಪುರಿ ಇರಬೇಕು.

Published On - 12:55 pm, Mon, 14 November 22

ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ