AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಹಾಳು ಪಬ್​​ಜಿ, ಟಿಕ್ ಟಾಕ್ ಹಾವಳಿ ಕಾಲೇಜು ಫೆಸ್ಟ್ ಗೂ ಬಂದುಬಿಟ್ಟಿದೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರೂ ಆನ್ ಲೈನ್ ಗೇಮ್ ಗಳದ್ದೇ ಸದ್ದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಗಲ್ಲಿ ಗಲ್ಲಿಗಳಲ್ಲೂ ಅಪಾಯಕಾರಿ ಗೇಮ್ ನದ್ದೇ ಕಾರುಬಾರು. ಇದೀಗ ಕಾಲೇಜಿಗಳ ಫೆಸ್ಟ್ ನಲ್ಲೂ ಪಬ್ಜಿ, ಟಿಕ್ ಟಾಕ್ ನ ಹವಾ ಶುರುವಾಗಿದೆ.. ಹೌದು ಇತ್ತೀಚೆಗೆ ಈ ಮೊಬೈಲ್ ಗೇಮ್ ಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ. ಪಬ್ಜಿ, ಟಿಕ್ ಟಾಕ್ ನಂತಹ ವಿಷಕಾರಿ ಆನ್ ಲೈನ್ ಆಪ್ ಗಳು ಜನರ ಸಮಯವನ್ನು ಕಸಿದುಕೊಳ್ಳುವ ಜೊತೆಗೆ ಯುವಕರ ಜೀವನವನ್ನೇ ಹಾಳು […]

ಮನೆಹಾಳು ಪಬ್​​ಜಿ, ಟಿಕ್ ಟಾಕ್ ಹಾವಳಿ ಕಾಲೇಜು ಫೆಸ್ಟ್ ಗೂ ಬಂದುಬಿಟ್ಟಿದೆ
ಸಾಧು ಶ್ರೀನಾಥ್​
|

Updated on: Sep 20, 2019 | 2:50 PM

Share

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರೂ ಆನ್ ಲೈನ್ ಗೇಮ್ ಗಳದ್ದೇ ಸದ್ದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಗಲ್ಲಿ ಗಲ್ಲಿಗಳಲ್ಲೂ ಅಪಾಯಕಾರಿ ಗೇಮ್ ನದ್ದೇ ಕಾರುಬಾರು. ಇದೀಗ ಕಾಲೇಜಿಗಳ ಫೆಸ್ಟ್ ನಲ್ಲೂ ಪಬ್ಜಿ, ಟಿಕ್ ಟಾಕ್ ನ ಹವಾ ಶುರುವಾಗಿದೆ.. ಹೌದು ಇತ್ತೀಚೆಗೆ ಈ ಮೊಬೈಲ್ ಗೇಮ್ ಗಳು ಜನರನ್ನು ತನ್ನತ್ತ ಸೆಳೆಯುತ್ತಿವೆ. ಪಬ್ಜಿ, ಟಿಕ್ ಟಾಕ್ ನಂತಹ ವಿಷಕಾರಿ ಆನ್ ಲೈನ್ ಆಪ್ ಗಳು ಜನರ ಸಮಯವನ್ನು ಕಸಿದುಕೊಳ್ಳುವ ಜೊತೆಗೆ ಯುವಕರ ಜೀವನವನ್ನೇ ಹಾಳು ಮಾಡುತ್ತಿವೆ. ಪಬ್ಜಿ ಆಡಿ ಕೆಲವರು ಜೈಲು ಸೇರಿದರೆ ಟಿಕ್ ಟಾಕ್ ಮಾಡಿ ಕೆಲವರು ಫೆಮಸ್ ಆಗಿರುವವರು ಜೊತೆಗೆ ಮರ್ಯಾದೆ ಕಳೆದುಕೊಂಡವರು ಕೂಡ ಇದ್ದಾರೆ. ಈಗ ಅದೇ ಗೇಮ್ ಗಳು ಕಾಲೇಜು ಫೆಸ್ಟ್ ನಲ್ಲಿ ಫುಲ್ ಹವಾ ಎಬ್ಬಿಸಿದೆ.

ಕಾಲೇಜುಗಳಲ್ಲಿ ಫೆಸ್ಟ್, ಮೇಳ ಸರ್ವೇಸಾಮಾನ್ಯ. ಆದರೆ ಮೊದಲೆಲ್ಲ ಪೆಸ್ಟ್ ಗಳಲ್ಲಿ ದೇಶಿ ಆಟಗಳಿಗೆ ಹೆಚ್ಚಿನ ಪ್ರೂತ್ಸಾಹ ನೀಡುತ್ತಿದ್ದರು ಆದರೆ ಈಗ ಅಪಾಯಕಾರಿ ಆಟಗಳಿಗೆ ಮಾರು ಹೋದ ಯುವಕರು ದೇಶಿ ಆಟಗಳನ್ನು ಮೂಲೆ ಗುಂಪು ಮಾಡಿದ್ದಾರೆ. ಇಲ್ಲೊಂದು ಕಾಲೇಜಿನಲ್ಲಿ ಟ್ರೆಂಡ್ ಗೆ ತಕ್ಕ ಹಾಗೆ ಬದಲಾವಣೆಯಂತೆ ಪಬ್ಜಿ, ಟಿಕ್ ಟಾಕ್ ಗಳನ್ನು ಆಯೋಜಿಸಲಾಗಿದೆ.

ಹೆಬ್ಬಾಳದ ಸಿಂಧಿ ಕಾಲೇಜು ಈ ಬಾರಿಯ ಅಪಾಯಕಾರಿ  ಪಬ್ಜಿ, ಟಿಕ್ ಟಾಕ್ ಫೆಸ್ಟ್ ಆಯೋಜಿಸಿದೆ. ಇಗಾಗಲೇ ಈ ಆಟಗಳಿಂದ ಅನಾಹುತಗಳು ಹೆಚ್ಚಾಗಿದ್ದು, ಕಾಲೇಜು ಮಂಡಳಿ ಮಾತ್ರ ವಿದ್ಯಾರ್ಥಿಗಳ ತಾಳಕ್ಕೆ ಹೆಜ್ಜೆ ಹಾಕಿದೆ. ಇಷ್ಟೆಲ್ಲಾ ಸಾವು ನೋವುಗಳನ್ನು ಕಂಡರು ಕಾಲೇಜುಗಳಲ್ಲಿ ಪಬ್ಜಿ, ಟಿಕ್ ಟಾಕ್ ಗಳ ಅಯೋಜನೆ ನಡಿತಾನೆ ಇದ್ದು, ಸಾರ್ವಜನಿಕರು ಕಾಲೇಜು ಮಂಡಳಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ