ದಾವಣಗೆರೆ: ಕೋರ್ಟ್ ಆದೇಶಿಸಿದರೂ ವಿಕಲಚೇತನರಿಗೆ ನೌಕರಿ ಇಲ್ಲ; ಕ್ಯಾರೆ ಎನ್ನದ ಭೂಮಾಪನ ಇಲಾಖೆ

| Updated By: sandhya thejappa

Updated on: Jul 28, 2021 | 2:34 PM

ರಾಜ್ಯ ಸರ್ಕಾರ ಭೂಮಾಪನ ಇಲಾಖೆಯಲ್ಲಿ 43 ಜನ ಅಂಗವಿಕಲರಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಆಹ್ವಾನಿಸಿದ ನಂತರ ಪರೀಕ್ಷೆ ಮಾಡಿ ನೇಮಕಾತಿ ಸಹ ಮಾಡಿದ್ದರು. ಆದರೆ ಇದರಲ್ಲಿ ಐವರು ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ನೇಮಕ ಆಗಿದ್ದರು.

ದಾವಣಗೆರೆ: ಕೋರ್ಟ್ ಆದೇಶಿಸಿದರೂ ವಿಕಲಚೇತನರಿಗೆ ನೌಕರಿ ಇಲ್ಲ; ಕ್ಯಾರೆ ಎನ್ನದ ಭೂಮಾಪನ ಇಲಾಖೆ
ವಿಕಲಚೇತನ ವ್ಯಕ್ತಿ
Follow us on

ದಾವಣಗೆರೆ: ವಿಕಲಚೇತನರಿಗೆ ಸುತ್ತಾಡುವುದೇ ಕಷ್ಟ. ಇವರಿಗಾಗಿ ಸರ್ಕಾರ ನಾನಾ ಯೋಜನೆಗಳನ್ನ ತಂದಿದೆ. ಜೊತೆಗೆ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಸಹ ಮಾಡುತ್ತಾರೆ. ಆದರೆ ಜಿಲ್ಲೆಯ ಕೆಲ ವಿಕಲಚೇತನರು ಕಳೆದ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಹೋರಾಟ ಮಾಡಿ ಮಾಡಿ ಓರ್ವ ಅಭ್ಯರ್ಥಿ ಸಾವನ್ನಪ್ಪಿದ್ದಾರೆ. ಉಳಿದವರಿಗಾದರೂ ನೇಮಕಾತಿ ಪತ್ರ ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ ಭೂಮಾಪನ ಇಲಾಖೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ರಾಜ್ಯ ಸರ್ಕಾರ ಭೂಮಾಪನ ಇಲಾಖೆಯಲ್ಲಿ 43 ಜನ ಅಂಗವಿಕಲರಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಆಹ್ವಾನಿಸಿದ ನಂತರ ಪರೀಕ್ಷೆ ಮಾಡಿ ನೇಮಕಾತಿ ಸಹ ಮಾಡಿದ್ದರು. ಆದರೆ ಇದರಲ್ಲಿ ಐವರು ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ನೇಮಕ ಆಗಿದ್ದರು. ಇದನ್ನ ಪ್ರಶ್ನೆ ಮಾಡಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಗಿರೀಶ್ ಸೇರಿ ನಾಲ್ವರು ಅಂಗವಿಕಲರು ರಾಜ್ಯ ಆಯುಕ್ತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಅನ್ವಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿ ವಿವಿಧ ಕಡೆ ವೈದ್ಯಕೀಯ ಪರೀಕ್ಷೆ ಮಾಡಿಸಿ ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ನೌಕರಿ ಗಿಟ್ಟಿಸಿದ್ದು ಗೊತ್ತಾಯಿತು. ಈ ಕಾರಣ ಆ ಐದು ಜನರನ್ನ ನೌಕರಿಯಿಂದ ವಜಾ ಮಾಡಲಾಯಿತು.

ಹೀಗೆ ನೇಮಕಾತಿ ರದ್ದಾದ ಬಳಿಕ ವೆಟಿಂಗ್ ಲಿಸ್ಟ್​ನಲ್ಲಿ ಇದ್ದ ಐದು ಜನಕ್ಕೆ ಆ ಹುದ್ದೆ ನೀಡಬೇಕು. ನೇಮಕಾತಿ ಕೊಡಿ ಎಂದು ಹೋರಾಟ ಮಾಡುತ್ತಿದ್ದರು. ಕೊಲಾರ ಮೂಲದ ಲೋಕೇಶ್ ರೆಡ್ಡಿ ಎಂಬುವವರು ಹೋರಾಟ ಮಾಡಿ ಕೊನೆಗೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಬೇರೆ ಕಡೆ ಕೆಲಸ ಸಿಕ್ಕಿತ್ತು. ಈ ಹೋರಾಟದಲ್ಲಿ ಉಳಿದವರು ಕೇವಲ ಮೂರು ಜನ ಮಾತ್ರ.

ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿದ ಐದು ಜನರನ್ನ ನೌಕರಿಯಿಂದ ವಜಾ ಮಾಡಲಾಗಿದೆ. ಆ ಹುದ್ದೆಗಳು ನಮಗೆ ಸಿಗಬೇಕು. ನಾವು ಕೂಲಿ ಕಾರ್ಮಿಕರಾಗಿ ಸೇವೆ ಮಾಡುತ್ತಿದ್ದೇವೆ. ಮೇಲಾಗಿ ಸರ್ಕಾರಿ ನೌಕರಿ ಪಡೆಯುವ ವಯಸ್ಸು ಮುಗಿಯುತ್ತದೆ. ಬೆಂಗಳೂರಿನ ಕೆಆರ್ ಸರ್ಕಕ್ನಲ್ಲಿ ಇರುವ ಅಂಗವಿಕಲ ಆಯುಕ್ತರ ಕಚೇರಿಗೆ ಹೋದರೆ ಕೇವಲ ಭರವಸೆ ನೀಡುತ್ತಿದ್ದಾರೆ. ಆದರೆ ನೇಮಕಾತಿ ಆದೇಶ ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ವಿಕಲಚೇತನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ

ಜನಪರ ಆಡಳಿತದ ಭರವಸೆ ನೀಡಿದ ಬಸವರಾಜ ಬೊಮ್ಮಾಯಿ; ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ ಏರಿಕೆ

Basavaraj Bommai: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1,000 ಕೋಟಿ ರೂ. ವೆಚ್ಚದಲ್ಲಿ ಶಿಷ್ಯ ವೇತನ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

(court order to gave job to disabled but disabled have not got a government job in Davanagere)