AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಮಿಸ್ ಕಾಲ್ ಕೊಟ್ಟು ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್; ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

ಮಿಸ್ ಕಾಲ್ ಕೊಟ್ಟು ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್ ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ದಾವಣಗೆರೆಯ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಮ್ಮ (30) ಗಿಡ್ಡ ಗಂಗಮ್ಮ (52) ಹರೀಶ್ (32) ಚಂದ್ರು (30) ಬಂಧಿತ ಆರೋಪಿಗಳು.

ದಾವಣಗೆರೆ: ಮಿಸ್ ಕಾಲ್ ಕೊಟ್ಟು ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್; ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ
ಆರೋಪಿಗಳಾದ (ಎಡದಿಂದ) ಹರೀಶ್​, ಚಂದ್ರು, ಗಿಡ್ಡ ಗಂಗಮ್ಮ, ಗಂಗಮ್ಮ
ಕಿರಣ್ ಹನುಮಂತ್​ ಮಾದಾರ್
|

Updated on: Apr 06, 2023 | 2:24 PM

Share

ದಾವಣಗೆರೆ: ಮಿಸ್ ಕಾಲ್ ಕೊಟ್ಟು ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್ (Honeytrap) ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ದಾವಣಗೆರೆಯ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಂಗಮ್ಮ (30) ಗಿಡ್ಡ ಗಂಗಮ್ಮ (52) ಹರೀಶ್ (32) ಚಂದ್ರು (30) ಬಂಧಿತ ಆರೋಪಿಗಳು. ಚನ್ನಗಿರಿ ಮೂಲದ ವ್ಯಕ್ತಿಯೊಬ್ಬನಿಗೆ ಆರೋಪಿ ಗಂಗಮ್ಮ ಮಿಸ್ ಕಾಲ್ ಮಾಡಿದ್ದಾಳೆ. ಬಳಿಕ ಮತ್ತೆ ಆ ವ್ಯಕ್ತಿ ಮರು ಕರೆ ಮಾಡಿದ್ದು, ಹಾಗೇ ಪೋನಿನಲ್ಲಿ ಪರಿಚಯವಾಗಿದೆ. ನಂತರ ಗಂಗಮ್ಮ ದಾವಣಗೆರೆಗೆ ಬನ್ನಿ, ನಿಮ್ಮ ಜೊತೆ ಊಟ ಮಾಡಬೇಕೆಂದು‌ ಹೇಳಿ ಕರೆಸಿಕೊಂಡಿದ್ದಾಳೆ.

ಸಿದ್ದವೀರಪ್ಪ ಬಡಾವಣೆಯಲ್ಲಿ ನಡೆದಿತ್ತು ಹನಿಟ್ರ್ಯಾಪ್ ಪ್ಲಾನ್

ಹೀಗೆ ನಾಲ್ವರು ಸೇರಿ ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿ ಹನಿಟ್ರ್ಯಾಪ್ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಆ ವ್ಯಕ್ತಿ ಬರುತ್ತಿದ್ದಂತೆ ಗಿಡ್ಡ ಗಂಗಮ್ಮ ಆತನನ್ನು ಕರೆದುಕೊಂಡು ರೂಮಿಗೆ ಹೋಗಿದ್ದಾಳೆ. ಇದೆ ವೇಳೆ ಹರೀಶ್​ ಹಾಗೂ ಚಂದ್ರು ಅಲ್ಲಿಗೆ ಬಂದು ಅವರಿಬ್ಬರು ಮನೆಯ ಬೇಡ್ ರೂಮ್​ನಲ್ಲಿ ಹೋಗುತ್ತಿದ್ದಂತೆ ಕ್ಯಾಮರಾ ತೆಗೆದುಕೊಂಡು ವಿಡಿಯೋ ಮಾಡಿ, ಮೂರು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ವಸೂಲಿ‌ ಮಾಡಿದ್ದಾರೆ ಈ ಆರೋಪಿಗಳು.‘

ಇದನ್ನೂ ಓದಿ:ಮಂಗಳೂರು: ಮೀನು ಮಾರಾಟಕ್ಕೆಂದು ತಂದಿದ್ದ1.5 ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದ ಪರಾರಿಯಾದ ಖದೀಮ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ರಕ್ಷಣಾ ವೇದಿಕೆ ಹೆಸರು ಹೇಳಿಕೊಂಡು ಬೇದರಿಕೆ

ಹೌದು ರಕ್ಷಣಾ ವೇದಿಕೆಯ ಹೆಸರನ್ನ ಹೇಳಿಕೊಂಡು ಹರೀಶ್ ಬೆದರಿಕೆ ಹಾಕಿದ್ದಾನೆ. ಇತ್ತ ಗಂಗಮ್ಮ ಕೂಡ ನಾಟಕ ಶುರುಮಾಡಿಕೊಂಡಿದ್ದಾಳೆ. ‌ನನ್ನ ಮಾನ ಹೋಗುತ್ತದೆ ದಯವಿಟ್ಟು ಅವರು ಕೇಳಿದಷ್ಟು ಹಣವನ್ನ ಕೊಟ್ಟುಬಿಡಿ ಎಂದು ಆತನಿಗೆ ಬೇಡಿಕೊಂಡವಳಂತೆ ನಾಟಕ ಮಾಡಿದ್ದಾಳೆ. ಇಂತಹ ಖತರ್ನಾಕ್​ ಗ್ಯಾಂಗ್​ನ್ನ ಇದೀಗ ಪೊಲೀಸರು ಬಂಧಿಸಿ, ಆರೋಪಿಗಳಿಂದ ಒಂದು ಲಕ್ಷ ಐವತ್ತು ಸಾವಿರ ರೂಪಾಯಿಯನ್ನ ವಶ ಪಡೆದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ