AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಮೀನು ಮಾರಾಟಕ್ಕೆಂದು ತಂದಿದ್ದ1.5 ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದ ಪರಾರಿಯಾದ ಖದೀಮ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಅವರು 65 ವರ್ಷ ವಯಸ್ಸಿನ ವೃದ್ಧೆ. ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಸ್ವಾಭಿಮಾನಿ ಆಕೆ. ಬೆಳಗ್ಗೆ 5 ಗಂಟೆಗೆ ಎದ್ದು ತಮ್ಮ ಕಾಯಕ ಮಾಡುತ್ತಿದ್ದವರು. ಎಂದಿನಂತೆ ತಮ್ಮ ಶಾಪ್​ಗೆ ಮೀನು ತರಲು ಮಂಗಳೂರು ದಕ್ಷಿಣ ಧಕ್ಕೆಗೆ ಹೋಗಿದ್ದಾರೆ. ಅದನ್ನ ನೋಡಿಕೊಂಡ ಕಟ್ಟುಮಸ್ತಾಗಿರುವ ಯುವಕನೊಬ್ಬ ಆ ಅಜ್ಜಿಯ ಬಳಿ ಇದ್ದ ಹಣವನ್ನ ಕಳ್ಳತನ ಮಾಡುತ್ತಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಫುಲ್​ ವೈರಲ್​ ಆಗಿದ್ದು ನೆಟ್ಟಿಗರು ಆ ಖದೀಮನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಂಗಳೂರು: ಮೀನು ಮಾರಾಟಕ್ಕೆಂದು ತಂದಿದ್ದ1.5 ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದ ಪರಾರಿಯಾದ ಖದೀಮ; ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಹಿರಾ ಶ್ರಿಯಾನ್. ಹಣ ಕಳೆದುಕೊಂಡ ವೃದ್ಧೆ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Apr 06, 2023 | 1:25 PM

Share

ದಕ್ಷಿಣ ಕನ್ನಡ: ಈ ವೃದ್ಧೆಯನ್ನೊಮ್ಮೆ ನೋಡಿ. ವಯಸ್ಸು 65 ಆದರೂ ಸೊಂಟಕ್ಕೆ ಪ್ಲಾಸ್ಟಿಕ್ ಕಟ್ಟಿಕೊಂಡು ಮೀನಿನ ರಾಶಿ ಮುಂದೆ ಕುಳಿತು ಬೆಳಗ್ಗೆಯಿಂದ ರಾತ್ರಿವರೆಗೂ ದುಡಿದು ಸಂಪಾದನೆ ಮಾಡುತ್ತಾರೆ ಈ ಸ್ವಾಭಿಮಾನಿ ಅಜ್ಜಿ. ಇವರ ಹೆಸರು ಹಿರಾ ಶ್ರಿಯಾನ್, ಮಂಗಳೂರು ನಿವಾಸಿ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಾರೆ. ಎಂದಿನಂತೆ ಏಪ್ರಿಲ್ 1 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ತಮ್ಮ ಶಾಪ್​ಗೆ ಮೀನು ತರಲು ಮಂಗಳೂರು ದಕ್ಷಿಣ ಧಕ್ಕೆಗೆ ಹೋಗಿದ್ದಾರೆ. ಅಲ್ಲಿಂದ ಮೀನು ಖರೀದಿ ಮಾಡಿಕೊಂಡು ಬರಲು ಬ್ಯಾಗ್​ನಲ್ಲಿ 1.5 ಲಕ್ಷ ರೂ ಹಣವನ್ನು ಇಟ್ಟುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗೆ ಕೆಂಪು ಶರ್ಟ್, ಕಪ್ಪು ಪ್ಯಾಂಟ್, ತಲೆಗೆ ಬಿಳಿ ಬಟ್ಟೆ ಧರಿಸಿದ ಸದೃಢವಾದ ಯುವಕನೊಬ್ಬ ಬರುತ್ತಾನೆ. ಅರೆಕ್ಷಣದಲ್ಲಿ ಈ ವೃದ್ಧೆಯ ಬಳಿಯಿದ್ದ ಬ್ಯಾಗ್​ನ್ನು ಕಸಿದು ಪರಾರಿಯಾಗುತ್ತಾನೆ.

ಈ ಅಜ್ಜಿ ಪ್ರತಿನಿತ್ಯ ಧಕ್ಕೆಗೆ ಹೋಗಿ ಮೀನು ಖರೀದಿ ಮಾಡಿಕೊಂಡು ಬಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ ನಿತ್ಯ ಬ್ಯಾಗ್​ನಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದರು. ಮೀನು ಖರೀದಿಗೆ ಹೋಗುವವರು ಹಣ ಇಟ್ಟುಕೊಂಡು ಹೋಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುತ್ತೆ. ಆದರೆ ವೃದ್ಧೆ ಎನ್ನುವ ಕಾರಣಕ್ಕೆ ಖದೀಮ ಈಕೆಯನ್ನ ಟಾರ್ಗೆಟ್ ಮಾಡಿದ್ದಾನೆ. ಇನ್ನು ಈ ಘಟನೆ ಈಗ ಮೀನು ಮಾರಾಟ ಮಾಡುವ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಇನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ವೀಡಿಯೋ ಆಧಾರದಲ್ಲಿ ಆರೋಪಿಗಾಗಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಅದೇನೆ ಇದ್ದರೂ ವೃದ್ಧೆಯ ಬಳಿ ದಾಂಡಿಗನೊಬ್ಬ ಕನ್ನ ಹಾಕಿದ್ದು ನಿಜಕ್ಕೂ ಆತನಿಗೆ ನಾಚಿಕೆಗೇಡು.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ