AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಮೀನು ಮಾರಾಟಕ್ಕೆಂದು ತಂದಿದ್ದ1.5 ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದ ಪರಾರಿಯಾದ ಖದೀಮ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಅವರು 65 ವರ್ಷ ವಯಸ್ಸಿನ ವೃದ್ಧೆ. ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಸ್ವಾಭಿಮಾನಿ ಆಕೆ. ಬೆಳಗ್ಗೆ 5 ಗಂಟೆಗೆ ಎದ್ದು ತಮ್ಮ ಕಾಯಕ ಮಾಡುತ್ತಿದ್ದವರು. ಎಂದಿನಂತೆ ತಮ್ಮ ಶಾಪ್​ಗೆ ಮೀನು ತರಲು ಮಂಗಳೂರು ದಕ್ಷಿಣ ಧಕ್ಕೆಗೆ ಹೋಗಿದ್ದಾರೆ. ಅದನ್ನ ನೋಡಿಕೊಂಡ ಕಟ್ಟುಮಸ್ತಾಗಿರುವ ಯುವಕನೊಬ್ಬ ಆ ಅಜ್ಜಿಯ ಬಳಿ ಇದ್ದ ಹಣವನ್ನ ಕಳ್ಳತನ ಮಾಡುತ್ತಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಫುಲ್​ ವೈರಲ್​ ಆಗಿದ್ದು ನೆಟ್ಟಿಗರು ಆ ಖದೀಮನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಂಗಳೂರು: ಮೀನು ಮಾರಾಟಕ್ಕೆಂದು ತಂದಿದ್ದ1.5 ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದ ಪರಾರಿಯಾದ ಖದೀಮ; ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಹಿರಾ ಶ್ರಿಯಾನ್. ಹಣ ಕಳೆದುಕೊಂಡ ವೃದ್ಧೆ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Apr 06, 2023 | 1:25 PM

Share

ದಕ್ಷಿಣ ಕನ್ನಡ: ಈ ವೃದ್ಧೆಯನ್ನೊಮ್ಮೆ ನೋಡಿ. ವಯಸ್ಸು 65 ಆದರೂ ಸೊಂಟಕ್ಕೆ ಪ್ಲಾಸ್ಟಿಕ್ ಕಟ್ಟಿಕೊಂಡು ಮೀನಿನ ರಾಶಿ ಮುಂದೆ ಕುಳಿತು ಬೆಳಗ್ಗೆಯಿಂದ ರಾತ್ರಿವರೆಗೂ ದುಡಿದು ಸಂಪಾದನೆ ಮಾಡುತ್ತಾರೆ ಈ ಸ್ವಾಭಿಮಾನಿ ಅಜ್ಜಿ. ಇವರ ಹೆಸರು ಹಿರಾ ಶ್ರಿಯಾನ್, ಮಂಗಳೂರು ನಿವಾಸಿ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಾರೆ. ಎಂದಿನಂತೆ ಏಪ್ರಿಲ್ 1 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ತಮ್ಮ ಶಾಪ್​ಗೆ ಮೀನು ತರಲು ಮಂಗಳೂರು ದಕ್ಷಿಣ ಧಕ್ಕೆಗೆ ಹೋಗಿದ್ದಾರೆ. ಅಲ್ಲಿಂದ ಮೀನು ಖರೀದಿ ಮಾಡಿಕೊಂಡು ಬರಲು ಬ್ಯಾಗ್​ನಲ್ಲಿ 1.5 ಲಕ್ಷ ರೂ ಹಣವನ್ನು ಇಟ್ಟುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗೆ ಕೆಂಪು ಶರ್ಟ್, ಕಪ್ಪು ಪ್ಯಾಂಟ್, ತಲೆಗೆ ಬಿಳಿ ಬಟ್ಟೆ ಧರಿಸಿದ ಸದೃಢವಾದ ಯುವಕನೊಬ್ಬ ಬರುತ್ತಾನೆ. ಅರೆಕ್ಷಣದಲ್ಲಿ ಈ ವೃದ್ಧೆಯ ಬಳಿಯಿದ್ದ ಬ್ಯಾಗ್​ನ್ನು ಕಸಿದು ಪರಾರಿಯಾಗುತ್ತಾನೆ.

ಈ ಅಜ್ಜಿ ಪ್ರತಿನಿತ್ಯ ಧಕ್ಕೆಗೆ ಹೋಗಿ ಮೀನು ಖರೀದಿ ಮಾಡಿಕೊಂಡು ಬಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ ನಿತ್ಯ ಬ್ಯಾಗ್​ನಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದರು. ಮೀನು ಖರೀದಿಗೆ ಹೋಗುವವರು ಹಣ ಇಟ್ಟುಕೊಂಡು ಹೋಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುತ್ತೆ. ಆದರೆ ವೃದ್ಧೆ ಎನ್ನುವ ಕಾರಣಕ್ಕೆ ಖದೀಮ ಈಕೆಯನ್ನ ಟಾರ್ಗೆಟ್ ಮಾಡಿದ್ದಾನೆ. ಇನ್ನು ಈ ಘಟನೆ ಈಗ ಮೀನು ಮಾರಾಟ ಮಾಡುವ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಇನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ವೀಡಿಯೋ ಆಧಾರದಲ್ಲಿ ಆರೋಪಿಗಾಗಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಅದೇನೆ ಇದ್ದರೂ ವೃದ್ಧೆಯ ಬಳಿ ದಾಂಡಿಗನೊಬ್ಬ ಕನ್ನ ಹಾಕಿದ್ದು ನಿಜಕ್ಕೂ ಆತನಿಗೆ ನಾಚಿಕೆಗೇಡು.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ