AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ಅವಘಡ: ಗುತ್ತಿಗೆ ನೌಕರ ಸಾವು

ಲೈನ್ ದುರಸ್ತಿ ವೇಳೆ ಸರ್ಕಾರಿ ಲೈನ್‌ಮೆನ್ ನೀಡಿದ ತಪ್ಪು ಮಾಹಿತಿಯಿಂದ ಗುತ್ತಿಗೆ ನೌಕರನೊಬ್ಬ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರದ ಕೇಶವ ನಗರದಲ್ಲಿ ನಡೆದಿದೆ.

ವಿದ್ಯುತ್ ಅವಘಡ: ಗುತ್ತಿಗೆ ನೌಕರ ಸಾವು
ಪೃಥ್ವಿಶಂಕರ
| Updated By: Skanda|

Updated on:Dec 03, 2020 | 12:45 PM

Share

ದಾವಣಗೆರೆ: ಲೈನ್ ದುರಸ್ತಿ ವೇಳೆ ಸರ್ಕಾರಿ ಲೈನ್‌ಮೆನ್ ನೀಡಿದ ತಪ್ಪು ಮಾಹಿತಿಯಿಂದ ಗುತ್ತಿಗೆ ನೌಕರನೊಬ್ಬ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರದ ಕೇಶವ ನಗರದಲ್ಲಿ ನಡೆದಿದೆ.

ಹಳೇ ಕಂಬವನ್ನ ತೆಗೆದು ಹೊಸ ಕಂಬ ನೆಡುವ ವೇಳೆ ಈ ಅವಘಡ ಸಂಭವಿಸಿತು. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಮಾರುತಿ (24) ಸ್ಥಳದಲ್ಲಿಯೇ ಸಾವನ್ನಪ್ಪಿದರೆ. ಮತ್ತೊಬ್ಬ ಗುತ್ತಿಗೆ ನೌಕರ ಮಹೇಶ್‌ಗೆ ತೀವ್ರ ಗಾಯಗಳಾಗಿವೆ.

ಹಳೇ ಕಂಬವನ್ನ ತೆಗೆದು ಹೊಸ ಲೈಟ್ ಕಂಬ ನೆಡಲು ಒಬ್ಬ ಸರ್ಕಾರಿ ನೌಕರ ಹಾಗೂ ಇಬ್ಬರು ಗುತ್ತಿಗೆ ನೌಕರರು ಕಂಬದ ಬಳಿ ಬಂದಿದ್ದರು. ಈ ವೇಳೆ ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಹೇಳಿದ ಸರ್ಕಾರಿ ಲೈನ್​ಮೆನ್ ಇಬ್ಬರು ಗುತ್ತಿಗೆ ನೌಕರರನ್ನು ಕಂಬಕ್ಕೆ ಹತ್ತಲು ಬಿಟ್ಟರು. ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರಿಂದ, ಆಘಾತಕ್ಕೆ ಗುತ್ತಿಗೆ ನೌಕರ ಮಾರುತಿ (24) ಸ್ಥಳದಲ್ಲಿಯೇ ಸಾವನ್ನಪ್ಪಿದರು.

ಮತ್ತೊಬ್ಬ ಗುತ್ತಿಗೆ ನೌಕರ ಮಹೇಶ್‌ಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರೂ ಗುತ್ತಿಗೆ ನೌಕರರು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆ ನಡೆಯುವ ವೇಳೆ ಯುವಕ ಮಾರುತಿ, ಅಣ್ಣ ನನ್ನ ಬದುಕಿಸಿ ಬದುಕಿಸಿ ಎಂದು ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.

ಸ್ಥಳಕ್ಕೆ ಹರಿಹರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಯುವಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Published On - 4:00 pm, Sun, 29 November 20