AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!

ಮಡಿಕೇರಿ: ಯೋಧರ ತವರು ನಾಡು ಎಂದೇ ಪರಿಗಣಿತವಾಗಿರುವ ಕೊಡಗಿನಲ್ಲಿ ಮತ್ತೊಂದು ದಾರುಣ ಘಟನೆ ತಡವಾಗಿ ವರದಿಯಾಗಿದೆ. ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕರೊಬ್ಬರಿಗೆ ಸೇರಿದ ವಸ್ತುಗಳೂ ಮಾಯವಾಗಿವೆ! ಮೊನ್ನೆಯಷ್ಟೇ ಬಾಲಕಿಯೊಬ್ಬಳು ಕೊರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡು ವ್ಯಥೆಪಡುತ್ತಿದ್ದಾಗ ಆ ಮಹಾತಾಯಿ ಬಳಸುತ್ತಿದ್ದ ಮೊಬೈಲ್​ ಅನ್ನೇ ಮಡಿಕೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯವರು ಎಗರಿಸಿದ್ದರು ಎಂಬ ವಿಷಯ ರಾದ್ಧಾಂತವಾಗಿತ್ತು. ಆ ಘಟನೆ ಮಾಸುವ ಮುನ್ನವೇ ದೇಶ ಕಾಯುತ್ತಿದ್ದ ಹಿರಿಯ ಯೋಧ ಎಂಬುದನ್ನೂ ಪರಿಗಣಿಸದೆ ಆತನಿಗೆ ಸೇರಿದ ವಸ್ತುಗಳನ್ನು​ ಕೋವಿಡ್​ ಸೆಂಟರ್​ನವರು ಎಗರಿಸಿದ್ದಾರೆ ಎಂಬ […]

ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!
ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!
ಸಾಧು ಶ್ರೀನಾಥ್​
|

Updated on: May 24, 2021 | 3:37 PM

Share

ಮಡಿಕೇರಿ: ಯೋಧರ ತವರು ನಾಡು ಎಂದೇ ಪರಿಗಣಿತವಾಗಿರುವ ಕೊಡಗಿನಲ್ಲಿ ಮತ್ತೊಂದು ದಾರುಣ ಘಟನೆ ತಡವಾಗಿ ವರದಿಯಾಗಿದೆ. ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕರೊಬ್ಬರಿಗೆ ಸೇರಿದ ವಸ್ತುಗಳೂ ಮಾಯವಾಗಿವೆ! ಮೊನ್ನೆಯಷ್ಟೇ ಬಾಲಕಿಯೊಬ್ಬಳು ಕೊರೊನಾದಿಂದಾಗಿ ಅಮ್ಮನನ್ನು ಕಳೆದುಕೊಂಡು ವ್ಯಥೆಪಡುತ್ತಿದ್ದಾಗ ಆ ಮಹಾತಾಯಿ ಬಳಸುತ್ತಿದ್ದ ಮೊಬೈಲ್​ ಅನ್ನೇ ಮಡಿಕೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯವರು ಎಗರಿಸಿದ್ದರು ಎಂಬ ವಿಷಯ ರಾದ್ಧಾಂತವಾಗಿತ್ತು. ಆ ಘಟನೆ ಮಾಸುವ ಮುನ್ನವೇ ದೇಶ ಕಾಯುತ್ತಿದ್ದ ಹಿರಿಯ ಯೋಧ ಎಂಬುದನ್ನೂ ಪರಿಗಣಿಸದೆ ಆತನಿಗೆ ಸೇರಿದ ವಸ್ತುಗಳನ್ನು​ ಕೋವಿಡ್​ ಸೆಂಟರ್​ನವರು ಎಗರಿಸಿದ್ದಾರೆ ಎಂಬ ಆರೋಪ, ಕೆಟ್ಟ ವಾರ್ತೆ ಈಗ ಕೇಳಿಬಂದಿದೆ.

ಮಡಿಕೇರಿ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕರಾದ ಧರ್ಮಪ್ಪ(61) ಅವರಿಗೆ ಸೇರಿದ ವಸ್ತುಗಳು ಮಿಸ್​ ಅಗಿವೆ. ಮಾಜಿ ಯೋಧ, ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮದ ಧರ್ಮಪ್ಪ ಗೌಡ ಎಂ ಎನ್ (61) ಮೇ 4ರಂದು ಮೃತಪಟ್ಟಿದ್ರು. ಮೃತ ಧರ್ಮಪ್ಪನವರ ಪರ್ಸ್, ಮೊಬೈಲ್​, ಉಂಗುರವನ್ನು ವಾಪಸ್​ ನೀಡಿಲ್ಲ. 20 ದಿನ ಕಳೆದರೂ ಮಡಿಕೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯ ಸಿಬ್ಬಂದಿಯು ಧರ್ಮಪ್ಪ ಅವರ ಸಂಬಂಧಿಕರಿಗೆ ವಸ್ತುಗಳನ್ನು ಹಿಂದಿರುಗಿಸಿಲ್ಲ. ಇದೀಗ, ಧರ್ಮಪ್ಪ ಕುಟುಂಬಸ್ಥರು ಮಡಿಕೇರಿ ನಗರ ಪೊಲೀಸ್​ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

dharmappa kodagu ex soldier from shanivarsanthe loses battle against coronavirus also loses his valuables in madikeri hospital

ಶನಿವಾರಸಂತೆ ಗ್ರಾಮದ ಧರ್ಮಪ್ಪ ಗೌಡ ಎಂ ಎನ್

dharmappa kodagu ex soldier from shanivarsanthe loses battle against coronavirus also loses his valuables in madikeri hospital

ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!

ಬಾಲಕಿಯ ವಿಷಯದಲ್ಲಿ ಏನಾಯಿತು? ಮೊಬೈಲ್​ ಸಿಕ್ತಾ?

ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಪುಟ್ಟ ಬಾಲಕಿ ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾಳೆ. ಮೊಬೈಲ್​ನಲ್ಲಿ ನನ್ನ ಅಮ್ಮನ ನೆನಪುಗಳಿವೆ. ದಯವಿಟ್ಟು ಅಮ್ಮನ ಮೊಬೈಲ್​ನ ಹಿಂದಿರುಗಿಸಿ ಎಂದು ತಾಯಿಯನ್ನು ಕಳೆದುಕೊಂಡ ಮಗಳು ಕೊಡಗು ಜಿಲ್ಲಾಧಿಕಾರಿಗೆ, ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ, ಶಾಸಕರಿಗೆ ಪತ್ರ ಬರೆದಿದ್ದಳು. ಅಮ್ಮನ ನೆನಪಿರುವ ಆ ಮೊಬೈಲ್​ನ ನನಗೆ ಬೇಕು ಹುಡುಕಿಕೊಡಿ ಎಂದು ಪುಟ್ಟ ಹುಡುಗಿ ಅಂಗಲಾಚಿ ಕೇಳಿದ್ದಳು. ಆದರೆ ಮೊಬೈಲ್ ಇನ್ನು ಸಿಗಲೇ ಇಲ್ಲ.

ಅಮ್ಮನ ಮೊಬೈಲ್​ಗಾಗಿ ಪರದಾಟ ಪಡುತ್ತಿರುವ ಮಗಳು ಹೃತಿಕ್ಷಾ ಮೊಬೈಲ್ ಖಂಡಿತಾ ಸಿಗುತ್ತದೆ ಎನ್ನುವ ಭರವಸೆಯಲ್ಲಿದ್ದಾಳೆ. ಪೊಲೀಸರು, ಜಿಲ್ಲಾಧಿಕಾರಿಗಳು ಮೊಬೈಲ್ ಹುಡುಕಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ನನ್ನ ತಾಯಿಯ ನೆನಪುಗಳು ತಣ್ಣಗೆ ಉಳಿದಿವೆ. ಹೀಗಾಗಿ ನನಗೆ ಆ ಮೊಬೈಲ್ ಬೇಕೆ ಬೇಕು ಎಂದು ಟಿವಿ9 ಡಿಜಿಟಲ್​ನೊಂದಿಗೆ ಮಾತನಾಡುತ್ತಾ ಹೃತಿಕ್ಷಾ ಬೇಸರ ವ್ಯಕ್ತಪಡಿಸಿದ್ದಾಳೆ.

‘ಮೊಬೈಲ್ ತೆಗೆದುಕೊಂಡವರು ದಯವಿಟ್ಟು ವಾಪಸ್​ ಕೊಡಿ; ನಿಮ್ಮ ವಿರುದ್ಧ ಕೇಸ್​ ಹಾಕಿಸೋಲ್ಲ’

ನಿನ್ನೆ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ 10 ಮೊಬೈಲ್​ಗಳನ್ನು ಪರಿಶೀಲಿಸುವಂತೆ ಆಸ್ಪತ್ರೆ ವೈದ್ಯರು ಹೇಳಿದ್ದರು. ಹೀಗಾಗಿ ಮೃತ ಪ್ರಭಾ ಅವರ ಸಹೋದರ ಸಂತೋಷ್ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿರುವ 10 ಮೊಬೈಲ್​ಗಳಲ್ಲಿ ಮೃತ ಮಹಿಳೆಯ ಮೊಬೈಲ್ ಇಲ್ಲ. ಹೀಗಾಗಿ ತಾಯಿಯ ಮೊಬೈಲ್​ಗಾಗಿ ಮಗಳು ಹೃತಿಕ್ಷಾ ಪರಿತಪಿಸುತ್ತಿದ್ದಾಳೆ.

ಮೊಬೈಲ್ ಬಗ್ಗೆ ದೂರು ದಾಖಲಾಗಿದೆ. ಡಿವೈ.ಎಸ್​ಪಿ ಹುಡುಕಿ ಕೊಡುತ್ತೇವೆ ಅಂತ ಹೇಳಿದ್ದಾರೆ. ಆಸ್ಪತ್ರೆಯಲ್ಲಿದ್ದ 11 ದಿನಗಳಲ್ಲಿ 9 ದಿನ ನನ್ನ ಹೆಂಡತಿ ನನ್ನ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದಾರೆ. ಹೀಗಾಗಿ ಮೊಬೈಲ್ ಆಸ್ಪತ್ರೆಯಲ್ಲಿಯೇ ಕಳೆದು ಹೋಗಿದೆ. ಕಳೆದು ಹೋದ ಮೊಬೈಲ್​ಗೆ ಕರೆ ಮಾಡಿದ್ದಾಗ ಮೊದಲು ರಿಂಗ್ ಆಗಿತ್ತು. ಆ ನಂತರ ಸ್ವಿಚ್ಛ್ ಆಫ್ ಆಗಿದೆ. ಪತ್ನಿಯ ಫೋಟೋ ಆ ಮೊಬೈಲ್​ನಲ್ಲಿದೆ. ಹೀಗಾಗಿ ಮಗಳು ಆ ಮೊಬೈಲ್ ಬೇಕೆಂದು ಪಟ್ಟು ಹಿಡಿದ್ದಾಳೆ ಅಂತ ಹೃತಿಕ್ಷಾ ತಂದೆ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ನಾವು ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ. ಲಾಕ್​ಡೌನ್​ನಿಂದ 20 ದಿನಗಳಾಯ್ತು ಯಾವ ಕೆಲಸವೂ ಇಲ್ಲ. ತಿನ್ನುವುದಕ್ಕೂ ಕಷ್ಟವಾಗಿದೆ. ಈ ನಡುವೆ ಏಳೆಂಟು ಸಾವಿರ ರೂಪಾಯಿಯ ಮೊಬೈಲ್ ತೆಗೆದುಕೊಳ್ಳುವ ಸಾಮರ್ಥ್ಯನೂ ನಮಗೆ ಇಲ್ಲ. ಯಾರಾದರೂ ಮೊಬೈಲ್ ತೆಗೆದುಕೊಂಡರೆ ದಯವಿಟ್ಟು ಕೊಡಿ. ಅವರ ವಿರುದ್ಧ ಕೇಸ್​ ಹಾಕಲ್ಲ ಎಂದು ಮೃತ ಮಹಿಳೆಯ ಪತಿ ಬೇಸರ ವ್ಯಕ್ತಪಡಿಸಿದರು.

(dharmappa kodagu ex soldier from shanivarsanthe loses battle against coronavirus also loses his valuables in madikeri hospital)