AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ : 102 ವರ್ಷದ ಅಜ್ಜಿಯ ಜನ್ಮದಿನ ಆಚರಿಸಿದ ಗ್ರಾಮಸ್ತರು

ಧಾರವಾಡ ಜಿಲ್ಲೆಯ ಕಲಘಟಗಿ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ವೀರಬಸವ್ವ ಚಂದ್ರಗೌಡ ಪಾಟೀಲ್ ಎಂಬವರ 102ನೇ ವರ್ಷದ ಹುಟ್ಟುಹಬ್ಬವನ್ನು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು.

ಧಾರವಾಡ : 102 ವರ್ಷದ ಅಜ್ಜಿಯ ಜನ್ಮದಿನ ಆಚರಿಸಿದ ಗ್ರಾಮಸ್ತರು
ವೀರಬಸವ್ವ ಚಂದ್ರಗೌಡ ಪಾಟೀಲ್
TV9 Web
| Edited By: |

Updated on: Jan 28, 2023 | 6:38 AM

Share

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಹಬ್ಬದ ವಾತಾವರಣ. ಇಡಿ ಗ್ರಾಮದ ಜನರಲ್ಲಿ ಅದೇನೊ ಸಂತಸ, ಪ್ರತಿಯೊಬ್ಬರ ಮನೆಯಲ್ಲೂ ಖುಷಿಯ ಸಿಂಚನ. ಊರಬ್ಬದಲ್ಲು ಇಲ್ಲದ ಆನಂದ ಅವತ್ತು ಎಲ್ಲರ ಮನೆ ಮನದಲ್ಲೂ ತುಂಬಿ ತುಳುಕುತ್ತಿತ್ತು. ಇಡಿ ಹಳ್ಳಿಯ ಜನ ಹಿರಿಹಿರಿ ಹಿಗ್ಗಿ ಸುಗ್ಗಿಯಂತ ದಿನ ಆಚರಣೆ ಮಾಡುತ್ತಿದ್ದಾರೆ ಅಂತ ಹೇಳಿದ್ರೆ ನೀವು ಕೂಡ ಅಚ್ಚರಿಪಡುತ್ತೀರಿ. ಇಡಿ ತುಮರಿಕೊಪ್ಪ ಗ್ರಾಮದ ಹಿರಿಯ ಜೀವದ ಜನ್ಮದಿನದ ಆಚರಣೆಗೆ ಎಲ್ಲರೂ ದೇವಸ್ಥಾನದಲ್ಲಿ ಸೇರಿದ್ದರು. ವೀರಬಸವ್ವ ಚಂದ್ರಗೌಡ ಪಾಟೀಲ್ ಎಂಬವರ 102ನೇ ವರ್ಷದ ಹುಟ್ಟುಹಬ್ಬವನ್ನು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು. 4ಜನ ಮಕ್ಕಳು, 30 ಜನ ಮರಿಮೊಮ್ಮಕ್ಕಳು, 20 ಗಿರಿ ಮೊಮ್ಮಕ್ಕಳು ಸೇರಿ ನೂರಾರು ಬಂಧು-ಬಳಗ ಎಲ್ಲ ಸೇರಿ ಮುತ್ತಜ್ಜಿಗೆ ಶುಭ ಹಾರೈಸಿದರು. ವೀರ ಬಸವ್ವ ಇನ್ನೂ ಆರೋಗ್ಯವಂತ ದೇಹ ಕಾಪಾಡಿಕೊಂಡು ಬಂದಿದ್ದಾರೆ. ಯಾವುದೇ ವಯೋಸಹಜ ಖಾಯಿಲೆ ಕೂಡ ಬಸವ್ವಗೆ ಇಲ್ಲ. ತನ್ನ 102ನೇ ವಯಸ್ಸಲ್ಲಿ ಅಜ್ಜಿ ಫಿಟ್ ಅಂಡ್ ಫೈನ್ ಆಗಿದ್ದಾಳೆ. ಕಾರ್ಯಕ್ರಮಕ್ಕೆ ಬಂದವರು ಶತಾಯುಷಿ ಬಸವ್ವಲಿಗೆ ಮತ್ತೊಂದು ನೂರು ವರ್ಷ ಬದುಕಮ್ಮಾ ಅಂತ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಹನ್ನೆರಡು ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ತುಮರಿಕೊಪ್ಪ ಗ್ರಾಮದ ಹಿರಿಯರಾದ ಸೋಮನಗೌಡ ಪಾಟೀಲ್ ರುದ್ರಗೌಡ ಪಾಟೀಲ್ ರುದ್ರಯ್ಯ ಸೇರಿ ನೂರಾರು ಬಂಧು-ಬಳಗ ಎಲ್ಲರೂ ಭಾಗವಹಿಸಿ, ಹ್ಯಾಪಿ ಬರ್ತ್ ಡೇ ವೀರಮ್ಮ ಅಂತ ಹಾಡಿ ಹೊಗಳಿ ದೊಡ್ಡ ಕೇಕ್ ಕಟ್ ಮಾಡಿಸಿದ್ದು, ಗ್ರಾಮಸ್ತರಲ್ಲಿ ಹೆಮ್ಮೆ ಪಡುವಂತೆ ಮಾಡಿತ್ತು.

Follow Us
Web contact
Web contact

TV9 Kannada

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್