Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಕೇಸ್: ಇಂದಿನಿಂದ 2ನೇ ಹಂತದ ವಿಚಾರಣೆ ಆರಂಭಿಸಲಿರುವ ಖಾಕಿ

ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸರು ಈ ಹಿಂದೆ ಶೋಧ ಮಾಡಿದ್ದು, ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಇಬ್ಬರು ಆರೋಪಿಗಳು ಸುಸ್ತಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಕೇಸ್: ಇಂದಿನಿಂದ 2ನೇ ಹಂತದ ವಿಚಾರಣೆ ಆರಂಭಿಸಲಿರುವ ಖಾಕಿ
ವಾಸ್ತುತಜ್ಞ ಚಂದ್ರಶೇಖರ ಗುರೂಜಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 12:35 PM

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji)  ಹತ್ಯೆ ಪ್ರಕರಣ ಸಂಬಂಧ ಇಂದಿನಿಂದ ಖಾಕಿ ಪಡೆ ಎರಡನೇ ಹಂತದ ವಿಚಾರಣೆ ಆರಂಭಿಸಲಿದ್ದಾರೆ. ಹಂತಕರ ಉತ್ತರ ಸಮರ್ಪಕ ಅನ್ನಿಸಿದ ಹಿನ್ನಲೆ ನಿನ್ನೆಯಷ್ಟೆ ಮತ್ತೆ ಆರು ದಿನಗಳ ಕಾಲ ಖಾಕಿ ಪಡೆ ತಮ್ಮ ಕಸ್ಟಡಿಗೆ ಪಡೆದಿದ್ದು, ಮತ್ತೆ ಇಂದಿನಿಂದ ತೀವ್ರ ವಿಚಾರಣೆ ನಡೆಸಲಿದ್ದಾರೆ. ಖಾಕಿ ಏನೇ ಪ್ರಶ್ನೆ ಮಾಡಿದರು ಹಂತಕರು ಸಿದ್ದ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಇಂದಿನ ತಾಂತ್ರಿಕ ಸಾಕ್ಷ್ಯ ಮುಂದಿಟ್ಟು ವಿಚಾರಣೆ ಮಾಡಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಸೂಚನೆ ಮೇರೆಗೆ ಹಂತಕರನ್ನು ಖಾಕಿ ಪಡೆ ಮತ್ತೆ ಆರು ದಿನ ವಶಕ್ಕೆ ಪಡೆದಿದ್ದಾರೆ. ಕೊಲೆಗೆ ನಿಖರ ಕಾರಣ ಸಿಗದಿದ್ದ ಹಿನ್ನಲೆ, ಮತ್ತೆ ವಿಚಾರಣೆ ಮಾಡಲಾಗುತ್ತಿದ್ದು, ಹಂತಕರು ಅಷ್ಟೊಂದು ಭೀಕರವಾಗಿ ಕೊಲ್ಲೊಕೆ ನಿಖರ ಕಾರಣ ಹೇಳುತ್ತಿಲ್ಲ. ಹೀಗಾಗಿ ಕೆಲ ತಾಂತ್ರಿಕ ಸಾಕ್ಷ್ಯ ಕಲೆ ಹಾಕಿರೋ ಖಾಕಿ ಪಡೆ, ಅದೇ ಸಾಕ್ಷ್ಯ ಮುಂದಿಟ್ಟು ಇಂದಿನಿಂದ ಮತ್ತೆ ವಿಚಾರಣೆ ಮಾಡಲಿದ್ದಾರೆ. ಕೊಲೆಯಲ್ಲು ಬೇನಾಮಿ ಆಸ್ತಿ, ರಾಜಕಾರಣಿಗಳ ಕೈವಾಡದ ಬಗ್ಗೆಯೂ ವಿಚಾರಣೆ ಮಾಡಲಿದ್ದು, ಇಂದಿನ ಹಂತಕರ ವಿಚಾರಣೆ ತೀವ್ರಗೊಳ್ಳಲಿದೆ.

ಇದನ್ನೂ ಓದಿ; ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣ: ಹಂತಕರಿಗೆ ಕನಿಷ್ಟ ಜೀವಾವಧಿ ಶಿಕ್ಷೆ ಪಕ್ಕಾ, ಗಲ್ಲು ಶಿಕ್ಷೆಗೆ ಛಾನ್ಸ್​ ಇಲ್ಲವಾ?

ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸ್ ಶೋಧ:

ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸರು ಈ ಹಿಂದೆ ಶೋಧ ಮಾಡಿದ್ದು, ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಇಬ್ಬರು ಆರೋಪಿಗಳು ಸುಸ್ತಾಗಿದ್ದಾರೆ. ಆರೋಪಿಗಳಿಗೆ ಮ್ಯಾರಥಾನ್ ಗ್ರಿಲ್​ ಮಾಡುತ್ತಿರುವ ಪೊಲೀಸರು, ವಿಚಾರಣೆ ವೇಳೆ ಉದ್ಯೋಗದ ಬಗ್ಗೆ ಇಬ್ಬರು ಹಂತಕರು ಬಾಯ್ಬಿಟ್ಟಿದ್ದಾರೆ. ಗುರೂಜಿ ಸ್ವಭಾವ, ವ್ಯಕ್ತಿತ್ವ, ದೌರ್ಬಲ್ಯಗಳನ್ನು ಸೂಕ್ತವಾಗಿ ಗ್ರಹಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅತ್ಯಾಪ್ತನಾಗಿದ್ದ ಮಂಜುನಾಥ, ಧಾರವಾಡ ತಾಲೂಕಿನ ದೇವಗಿರಿ ಗ್ರಾಮದ ನಿವಾಸಿ. ಮುಗ್ಧತೆಯ ನಾಟಕವಾಡಿ ಆರ್ಥಿಕ ಸಹಾಯ ಪಡೆದಿದ್ದ. ಗುರೂಜಿ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ ಶಿರೂರ ನೆಲೆಸಿದ್ದ. ಕೋರ್ಟ್​ ಅನುಮತಿ ಮೇರೆಗೆ ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಿದ್ದು, ಮನೆಯಲ್ಲಿ ಅಗತ್ಯ ದಾಖಲೆಗಳು ಪೊಲೀಸರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಹಂತಕರ ವಿಚಾರಣೆಯನ್ನ ಖಾಕಿ ಪಡೆ ಮುಂದುವರೆಸಿದ್ದರು.

ಇದನ್ನೂ ಓದಿ: Chandrashekhar Guruji:‘ಗುರೂಜಿಯನ್ನ ನನ್ನ ಗಂಡನೇ ಕೊಲೆ ಮಾಡಿದ್ದಾನೆ’ ಎಂದ ಮಹಾಂತೇಶ ಪತ್ನಿ ವನಜಾಕ್ಷಿ

ಚಂದ್ರಶೇಖರ ಗುರೂಜಿ ಅವರ ಸ್ವಭಾವ, ವ್ಯಕ್ತಿತ್ವ, ದೌರ್ಬಲ್ಯಗಳನ್ನೆಲ್ಲ ಸೂಕ್ತವಾಗಿ ಗ್ರಹಿಸಿ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಗುರೂಜಿಗೆ ಮಂಜುನಾಥ ಅತ್ಯಾಪ್ತನಾಗಿದ್ದ. ಬಡತನದಿಂದ ಕುಟುಂಬಕ್ಕೆ ನಾನೇ ಆಧಾರ ಸ್ತಂಭ, ನಿಮ್ಮನೇ ನಂಬಿದ್ದೇನೆ ಎಂಬಿತ್ಯಾದಿ ನಾಟಕೀಯ ಮಾತುಗಳ ಮೂಲಕ ಗುರೂಜಿ ಮನಗೆದ್ದಿದ್ದ. ಗುರೂಜಿ ಹುಬ್ಬಳಿಗೆ ಬಂದಾಗ ತನ್ನೂರು ಧುಮ್ಮವಾಡಕ್ಕೆ ಕರೆದೊಯ್ದು ಕುಟುಂಬದ ಆರ್ಥಿಕ ಸ್ಥಿತಿ-ಗತಿಗಳನ್ನು ಹಂತಕ ವಿವರಿಸಿದ್ದ. ಮುಗ್ಧತೆಯ ನಾಟಕವಾಡಿ, ಆರ್ಥಿಕ ಸಹಾಯ ಪಡೆದಿದ್ದ. ಮಹಾಂತೇಶ ಶಿರೂರನ ಸಂಚಿನ ಮರ್ಮ ಅರಿಯದ ಗುರೂಜಿ, ಮಹಾಂತೇಶನನ್ನು ನಂಬಿದ್ದರು.

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ