Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಪೊಲೀಸರು ಸೃಷ್ಟಿಸಿದ್ದ ಜಡ್ಜ್​ ಪಾತ್ರದಿಂದ ಬಲೆಗೆ ಬಿದ್ದ ಪೋಕ್ಸೋ ಆರೋಪಿ

ಧಾರವಾಡದಲ್ಲಿ ಪೋಕ್ಸೋ ಪ್ರಕರಣದ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಅಸಾಧಾರಣ ಚಾಕಚಕ್ಯತೆಯನ್ನು ತೋರಿದ್ದಾರೆ. ಪೊಲೀಸರು ಸೃಷ್ಟಿಸಿದ ಜಡ್ಜ್​​ ಪಾತ್ರ ಆರೋಪಿಯನ್ನು ಸರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರ ಈ ಚಾತುರ್ಯಕ್ಕೆ ಸಾಕ್ಷಿಯಾಗಿದೆ ಈ ಪ್ರಕರಣ. ಅಷ್ಟಕ್ಕೂ ಧಾರವಾಡದಲ್ಲಿ ನಡೆದಿದ್ದೇನು? ಇಲ್ಲಿದೆ ಓದಿ.

Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ವಿವೇಕ ಬಿರಾದಾರ

Updated on:Feb 10, 2025 | 11:58 AM

ಧಾರವಾಡ, ಫೆಬ್ರವರಿ 09: ಪೊಲೀಸರು (Police) ಕೂಡ ಕೆಲಸವೊಂದು ಸಾರಿ ಚಲನಚಿತ್ರ ನಿರ್ದೇಶಕ ಆಗುತ್ತಾರೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಪೊಕ್ಸೋ (POCSO) ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ನ್ಯಾಯಾಧೀಶರ ಪಾತ್ರ ಸೃಷ್ಟಿಸಿ, ಯಶಸ್ವಿಯಾಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಧಾರವಾಡ ಪೊಲೀಸರು (Dharwad Police) ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಧಾರವಾಡ ಪೊಲೀಸರ ಈ ಚಾಕಚಕ್ಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟಕ್ಕೂ ಧಾರವಾಡದಲ್ಲಿ ನಡೆದಿದ್ದೇನು? ಇಲ್ಲಿದೆ ಓದಿ.

ಅಣ್ಣಿಗೇರಿ ನಿವಾಸಿಯಾಗಿರುವ ವಿಜಯ ಉಣಕಲ್ ವಿರುದ್ಧ 2021ರಲ್ಲಿ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ವಿಜಯ ಉಣಕಲ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್​ನಿಂದ ಬಂಧನ ವಾರಂಟ್ ಜಾರಿಯಾಗಿತ್ತು. ರವಿವಾರ (ಫೆ.09) ಪೊಲೀಸರು ವಿಜಯ ಉಣಕಲ್​ನನ್ನು ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಆರೋಪಿ ವಿಜಯ್ ಉಣಕಲ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ವಿಜಯ್ ಉಣಕಲ್​ನನ್ನು ಪೊಲೀಸರು ಜೈಲಿಗೆ ಕರೆದೊಯ್ಯೊತ್ತಿದ್ದರು. ಈ ವೇಳೆ ವಿಜಯ್ ಉಣಕಲ್ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡದ ಮೇಲೇರಿದ್ದನು. ಬಳಿಕ, ಸ್ಥಳಕ್ಕೆ ನ್ಯಾಯಾಧೀಶರು ಬರಬೇಕು, ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದನು. ವಿಚಾರ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿದರು.

ಪ್ಲ್ಯಾನ್ ​ಮಾಡಿ ಆರೋಪಿಯನ್ನು ಯಾಮಾರಿಸಿದ ಪೊಲೀಸರು

ಆರೋಪಿ ವಿಜಯ್ ಉಣಕಲ್​​ನ ಹೈಡ್ರಾಮಾ ನೋಡಲು ಸ್ಥಳಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಉನ್ಯಾಸಕ ಡಾ. ವಿಶ್ವನಾಥ್​ ಚಿಂತಾಮಣಿ ಆಗಮಿಸಿದ್ದರು. ಈ ವೇಳೆ ಪೊಲೀಸರು, ಪ್ಲ್ಯಾನ್​ಮಾಡಿ ಜಡ್ಜ್​ ಪಾತ್ರವನ್ನು ಸೃಷ್ಟಿಸಿದರು. ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ಅವರೇ ನ್ಯಾಯಾಧೀಶ ಎಂದು ಆರೋಪಿ ವಿಜಯ್​ ಉಣಕಲ್​ಗೆ ಪೊಲೀಸರು ಹೇಳಿದರು.

ಇದನ್ನೂ ಓದಿ: ನನ್ನ ಮಗಳ ಕೊಲೆ ಹಿಂದೆ ಶಾಸಕರ ಕೈವಾಡವಿದೆ, ನೇಹಾ ತಂದೆ ಆರೋಪ

ಪೊಲೀಸರ ಪ್ಲ್ಯಾನ್​​ನಂತೆ ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ಅವರು ಕೂಡ ನಟಿಸಿದರು. ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ಅವರ ನಟನೆಯನ್ನು ನಂಬಿ, ಆರೋಪಿ ವಿಜಯ್ ಉಣಕಲ್ ಅವರೊಂದಿಗೆ ಮಾತನಾಡಲು ಆರಂಭಿಸಿದನು. ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ನೈಸ್​ ಆಗಿ ಮಾತನಾಡಿ ಆರೋಪಿ ವಿಜಯ್ ಉಣಕಲ್​ನನ್ನು ಕಟ್ಟಡದಿಂದ ಕೆಳಗೆ ಇಳಿಸಿದರು. ಕೂಡಲೇ, ಹಿಂದಿನಿಂದ ಬಂದ ಪೊಲೀಸರು ಆರೋಪಿ ವಿಜಯ್ ಉಣಕಲ್​ನನ್ನು ಬಂಧಿಸಿ, ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Sun, 9 February 25