ಹುಬ್ಬಳ್ಳಿಯ ಬೆಂಗೇರಿಯಲ್ಲಿಯೇ ಅತಿ ಹೆಚ್ಚು ತ್ರಿವರ್ಣ ಧ್ವಜ ತಯಾರಿ; ಕಳೆದ ವರ್ಷ 28 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ ಮಾರಾಟ

ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ರಾಷ್ಟ್ರಧ್ವಜ ನಿರ್ಮಾಣ ಮಾಡಲು ದೇಶದಾದ್ಯಂತ ಬಿಐಎಸ್(BIS)​ನಿಂದ ಮಾನ್ಯತೆ ಪಡೆದ ಏಕೈಕ ಕೇಂದ್ರವಾಗಿದೆ. ಇನ್ನು ಕಳೆದ ಬಾರಿ 28 ಸಾವಿರಕ್ಕೂ ಅಧಿಕ ಧ್ವಜಗಳ ಮಾರಾಟ ಮಾಡಲಾಗಿತ್ತು. ಈ ಬಾರಿ ಇದಕ್ಕಿಂತ ಹೆಚ್ಚು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಹುಬ್ಬಳ್ಳಿಯ ಬೆಂಗೇರಿಯಲ್ಲಿಯೇ ಅತಿ ಹೆಚ್ಚು ತ್ರಿವರ್ಣ ಧ್ವಜ ತಯಾರಿ; ಕಳೆದ ವರ್ಷ 28 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ ಮಾರಾಟ
ಹುಬ್ಬಳ್ಳಿಯ ಬೆಂಗೇರಿ
Follow us
|

Updated on:Aug 10, 2023 | 9:10 PM

ಹುಬ್ಬಳ್ಳಿ, ಆ.10: ಭಾರತವು 77ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದೆ. ಅದರಂತೆ ರಾಷ್ಟ್ರಧ್ವಜ ನಿರ್ಮಾಣ ಮಾಡಲು ಭಾರತೀಯ ಮಾನಕ ಸಂಸ್ಥೆ(BIS) ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ ಹುಬ್ಬಳ್ಳಿ(Hubballi)ಯ ಬೆಂಗೇರಿ ಗ್ರಾಮದಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ. ಹೌದು, ದೇಶದಲ್ಲಿಯೇ ರಾಷ್ಟ್ರಧ್ವಜವನ್ನು ನೇಯುವ ಅವಕಾಶ ನಮ್ಮ ಕರ್ನಾಟಕಕ್ಕೆ ದೊರೆತಿದೆ. ಇದೀಗ ಸ್ವಾತಂತ್ರ್ಯ ದಿನವನ್ನು ಆಡಂಬರ ಮತ್ತು ಉಲ್ಲಾಸದಿಂದ ಆಚರಿಸಲು ದೇಶಾದ್ಯಂತ ರಾಷ್ಟ್ರಧ್ವಜವನ್ನು ವಿತರಿಸುವ ಸಲುವಾಗಿ ನೇಯುವ ಕೆಲಸದಲ್ಲಿ ನಿರತವಾಗಿದೆ. ಇನ್ನು ವಿಶೇಷವೆಂದರೆ ಬಹುತೇಕ  ಮಹಿಳೆಯರೇ ರಾಷ್ಟ್ರಧ್ವಜಗಳನ್ನು ನೇಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವನ್ನು 1957 ರಲ್ಲಿ ಸ್ಥಾಪಿಸಲಾಯಿತು. ತಿರಂಗಾವನ್ನು ತಯಾರಿಸುವಾಗ ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಖಾದಿ ಬಟ್ಟೆಯಿಂದ ತಯಾರಿಸಲಾಗುತ್ತದೆ . ಸ್ವಾತಂತ್ರ್ಯ ನಂತರ ದೇಶದ ಎಲ್ಲ ಕಡೆಗಳಲ್ಲಿ ಧಾರವಾಡದ ಗರಗ ಖಾದಿ ಕೇಂದ್ರದಿಂದ ಬಟ್ಟೆ ಪೂರೈಕೆ ಮಾಡಲಾಗುತ್ತಿತ್ತು. ಬಳಿಕ 2006 ರಲ್ಲಿ ಹುಬ್ಬಳ್ಳಿಯ ಬೆಂಗೇರಿ ಗ್ರಾಮದಲ್ಲಿ ಇದಕ್ಕೆ ಬಿಐಎಸ್​ನಿಂದ ಅನುಮಯತಿ ಸಿಕ್ಕಿತು. ಇನ್ನು ಆಗಸ್ಟ್ 15 ಮತ್ತು ಜನವರಿ 26 ರಂದು ಈ ಧ್ವಜಗಳಿಗೆ ಭಾರಿ ಬೇಡಿಕೆಯಿದ್ದು, ಅದರಂತೆ 2022-23 ರಲ್ಲಿ, ಈ ಕೇಂದ್ರವು ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಸುಮಾರು 28,900 ಧ್ವಜಗಳ ಮಾರಾಟದೊಂದಿಗೆ 4.28 ಕೋಟಿ ಆದಾಯ ಗಳಿಸಿದೆ.

ಇದನ್ನೂ ಓದಿ:ಹುಬ್ಬಳ್ಳಿ: ಸ್ವಾತಂತ್ರ್ಯ ದಿನಚಾರಣೆಗೆ ರಾಷ್ಟ್ರಧ್ವಜಗಳಿಗೆ ಅಧಿಕ ಬೇಡಿಕೆ; ಖಾದಿ ಗ್ರಾಮೋದ್ಯೋಗದಲ್ಲಿ ಸಿಬ್ಬಂದಿಗಳಿಂದ ಓವರ್​​​ಟೈಮ್​ ಡ್ಯೂಟಿ

ಭಾರತೀಯ ಧ್ವಜದ ವಿನ್ಯಾಸಕಾರ

ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ಮತ್ತು ಭೂವಿಜ್ಞಾನಿಯಾದ ಪಿಂಗಲಿ ವೆಂಕಯ್ಯ ಅವರು ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದರು. ದೂರದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಬೋಯರ್ ಯುದ್ಧದ ಸಂದರ್ಭದಲ್ಲಿ ಯೂನಿಯನ್ ಜ್ಯಾಕ್‌ಗೆ ಬಲವಂತವಾಗಿ ನಮಸ್ಕರಿಸಿದಾಗ ಭಾರತಕ್ಕೆ ಧ್ವಜದ ಕಲ್ಪನೆಯು ಅವರ ಮನಸ್ಸಿನಲ್ಲಿ ಬಂದಿದೆ ಎಂದು ಹೇಳಲಾಗುತ್ತದೆ. ವೆಂಕಯ್ಯ ಅವರು ಆಗ ಬ್ರಿಟಿಷ್ ಸೇನೆಯಲ್ಲಿ ಸೈನಿಕರಾಗಿದ್ದರು. ವಜ್ರ ಗಣಿಗಾರಿಕೆಯಲ್ಲಿ ಪರಿಣತರಾಗಿದ್ದ ವೆಂಕಯ್ಯ ಅವರು ಏಪ್ರಿಲ್ 1, 1921 ರಂದು ಮಹಾತ್ಮ ಗಾಂಧಿಯವರು ವಿಜಯವಾಡಕ್ಕೆ ಭೇಟಿ ನೀಡಿದಾಗ ರಾಷ್ಟ್ರಧ್ವಜವನ್ನು ಅವರಿಗೆ ಅರ್ಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:33 pm, Thu, 10 August 23