AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ

ಸೋಮವಾರದಿಂದ (ಜುಲೈ 11) ಉದಯಪುರ ಸಿಟಿ ಹಾಗೂ ಗುರುವಾರದಿಂದ (ಜುಲೈ 14) ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ಉದಯಪುರ ಸಿಟಿ - ಮೈಸೂರು - ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ವಾಯವ್ಯ ರೈಲ್ವೆ ವಲಯವು ಮತ್ತೆ ಆರಂಭಿಸಲಿದೆ. ಈ ರೈಲುಗಳು ಕೆಳಗೆ ತಿಳಿಸಿದ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತವೆ

ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ
ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 09, 2022 | 7:48 PM

ಬರುವ ಸೋಮವಾರದಿಂದ (ಜುಲೈ 11) ಉದಯಪುರ ಸಿಟಿ ಹಾಗೂ ಗುರುವಾರದಿಂದ (ಜುಲೈ 14) ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ಉದಯಪುರ ಸಿಟಿ – ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 19667/19668) (Humsafar Weekly Express) ಸೇವೆಯನ್ನು ವಾಯವ್ಯ ರೈಲ್ವೆ ವಲಯವು ಮತ್ತೆ ಆರಂಭಿಸಲಿದೆ. ಈ ರೈಲುಗಳು ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತವೆ (South West Railway Hubli Division).

ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲುಗಳಲ್ಲಿ ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.

1. ಉದಯಪುರ ಸಿಟಿ – ಮೈಸೂರು ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19667) ಜುಲೈ 11 ರಿಂದ ಪ್ರತಿ ಸೋಮವಾರದಂದು ರಾತ್ರಿ 09:15 ಕ್ಕೆ ಉದಯಪುರ ಸಿಟಿ ನಿಲ್ದಾಣದಿಂದ ಹೊರಟು, ಪ್ರತಿ ಬುಧವಾರದಂದು ಸಂಜೆ 04.35 ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

2. ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19668) ಜುಲೈ 14 ರಿಂದ ಪ್ರತಿ ಗುರುವಾರರಂದು ಬೆಳಿಗ್ಗೆ 10:00 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು, ಪ್ರತಿ ಶನಿವಾರದಂದು ನಸುಕಿನಜಾವ 03:35 ಕ್ಕೆ ಉದಯಪುರ ಸಿಟಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು (19667) ಮಾರ್ಗ ಮಧ್ಯದಲ್ಲಿ ಚಿತ್ತೌಡಗಢ (11:05/11:15 PM), ಮಂದಸೌರ್ (01:10/01:12 AM), ರತ್ಲಾಮ್ (03:10/03:20 AM), ವಡೋದರಾ (07:35/07:45 AM), ಸೂರತ್ (09:37/09:42 AM), ವಸಯಿ ರೋಡ (12:25/12:30 PM), ಪುಣೆ (04:35/04:40 PM), ಮೀರಜ್ (11:40/11:45 PM), ಬೆಳಗಾವಿ (01:58/02:00 AM), ಎಸ್.ಎಸ್.ಎಸ್ ಹುಬ್ಬಳ್ಳಿ (04:55/05:05 AM), ದಾವಣಗೆರೆ (07:28/07:30 AM), ಕೆ.ಎಸ್.ಆರ್ ಬೆಂಗಳೂರು (01:30/01:35 PM) ಮತ್ತು ಮಂಡ್ಯ (03:00/03:02 PM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ಈ ರೈಲು (19668) ಮಾರ್ಗ ಮಧ್ಯದಲ್ಲಿ ಮಂಡ್ಯ (10:34/10:35 AM), ಕೆ.ಎಸ್.ಆರ್ ಬೆಂಗಳೂರು (12:10/12:20 PM), ದಾವಣಗೆರೆ (04:40/04:42 PM), ಎಸ್.ಎಸ್.ಎಸ್ ಹುಬ್ಬಳ್ಳಿ (08:00/08:10 PM), ಬೆಳಗಾವಿ (10:50/10:52 PM), ಮೀರಜ್ (02:30/02:35 AM), ಪುಣೆ (08:25/08:30 AM), ವಸಯಿ ರೋಡ (12:35/12:45 PM), ಸೂರತ್ (03:22/03:27 PM), ವಡೋದರಾ (05:05/05:15 PM), ರತ್ಲಾಮ್ (08:45/08:55 PM), ಮಂದಸೌರ್ (10:25/10:27 PM) ಮತ್ತು ಚಿತ್ತೌಡಗಢ (01:10/01:20 AM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಈ ಎರಡು ರೈಲುಗಳು, ಹದಿನಾರು- 3ನೇ ದರ್ಜೆಯ ಹವಾ ನಿಯಂತ್ರಿತ ಬೋಗಿಗಳು, ಒಂದು- ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿ, ಒಂದು- ಹವಾ ನಿಯಂತ್ರಿತ ಅಡುಗೆ ಬೋಗಿ (ಪ್ಯಾಂಟ್ರಿ ಕಾರ್) ಹಾಗೂ ಎರಡು-ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್/ ಜನರೇಟರ್ ಗಳು ಸೇರಿ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ