AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ

ಸೋಮವಾರದಿಂದ (ಜುಲೈ 11) ಉದಯಪುರ ಸಿಟಿ ಹಾಗೂ ಗುರುವಾರದಿಂದ (ಜುಲೈ 14) ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ಉದಯಪುರ ಸಿಟಿ - ಮೈಸೂರು - ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ವಾಯವ್ಯ ರೈಲ್ವೆ ವಲಯವು ಮತ್ತೆ ಆರಂಭಿಸಲಿದೆ. ಈ ರೈಲುಗಳು ಕೆಳಗೆ ತಿಳಿಸಿದ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತವೆ

ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ
ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ
TV9 Web
| Updated By: ಸಾಧು ಶ್ರೀನಾಥ್​|

Updated on: Jul 09, 2022 | 7:48 PM

Share

ಬರುವ ಸೋಮವಾರದಿಂದ (ಜುಲೈ 11) ಉದಯಪುರ ಸಿಟಿ ಹಾಗೂ ಗುರುವಾರದಿಂದ (ಜುಲೈ 14) ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ಉದಯಪುರ ಸಿಟಿ – ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 19667/19668) (Humsafar Weekly Express) ಸೇವೆಯನ್ನು ವಾಯವ್ಯ ರೈಲ್ವೆ ವಲಯವು ಮತ್ತೆ ಆರಂಭಿಸಲಿದೆ. ಈ ರೈಲುಗಳು ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತವೆ (South West Railway Hubli Division).

ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲುಗಳಲ್ಲಿ ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.

1. ಉದಯಪುರ ಸಿಟಿ – ಮೈಸೂರು ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19667) ಜುಲೈ 11 ರಿಂದ ಪ್ರತಿ ಸೋಮವಾರದಂದು ರಾತ್ರಿ 09:15 ಕ್ಕೆ ಉದಯಪುರ ಸಿಟಿ ನಿಲ್ದಾಣದಿಂದ ಹೊರಟು, ಪ್ರತಿ ಬುಧವಾರದಂದು ಸಂಜೆ 04.35 ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

2. ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19668) ಜುಲೈ 14 ರಿಂದ ಪ್ರತಿ ಗುರುವಾರರಂದು ಬೆಳಿಗ್ಗೆ 10:00 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು, ಪ್ರತಿ ಶನಿವಾರದಂದು ನಸುಕಿನಜಾವ 03:35 ಕ್ಕೆ ಉದಯಪುರ ಸಿಟಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು (19667) ಮಾರ್ಗ ಮಧ್ಯದಲ್ಲಿ ಚಿತ್ತೌಡಗಢ (11:05/11:15 PM), ಮಂದಸೌರ್ (01:10/01:12 AM), ರತ್ಲಾಮ್ (03:10/03:20 AM), ವಡೋದರಾ (07:35/07:45 AM), ಸೂರತ್ (09:37/09:42 AM), ವಸಯಿ ರೋಡ (12:25/12:30 PM), ಪುಣೆ (04:35/04:40 PM), ಮೀರಜ್ (11:40/11:45 PM), ಬೆಳಗಾವಿ (01:58/02:00 AM), ಎಸ್.ಎಸ್.ಎಸ್ ಹುಬ್ಬಳ್ಳಿ (04:55/05:05 AM), ದಾವಣಗೆರೆ (07:28/07:30 AM), ಕೆ.ಎಸ್.ಆರ್ ಬೆಂಗಳೂರು (01:30/01:35 PM) ಮತ್ತು ಮಂಡ್ಯ (03:00/03:02 PM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ಈ ರೈಲು (19668) ಮಾರ್ಗ ಮಧ್ಯದಲ್ಲಿ ಮಂಡ್ಯ (10:34/10:35 AM), ಕೆ.ಎಸ್.ಆರ್ ಬೆಂಗಳೂರು (12:10/12:20 PM), ದಾವಣಗೆರೆ (04:40/04:42 PM), ಎಸ್.ಎಸ್.ಎಸ್ ಹುಬ್ಬಳ್ಳಿ (08:00/08:10 PM), ಬೆಳಗಾವಿ (10:50/10:52 PM), ಮೀರಜ್ (02:30/02:35 AM), ಪುಣೆ (08:25/08:30 AM), ವಸಯಿ ರೋಡ (12:35/12:45 PM), ಸೂರತ್ (03:22/03:27 PM), ವಡೋದರಾ (05:05/05:15 PM), ರತ್ಲಾಮ್ (08:45/08:55 PM), ಮಂದಸೌರ್ (10:25/10:27 PM) ಮತ್ತು ಚಿತ್ತೌಡಗಢ (01:10/01:20 AM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಈ ಎರಡು ರೈಲುಗಳು, ಹದಿನಾರು- 3ನೇ ದರ್ಜೆಯ ಹವಾ ನಿಯಂತ್ರಿತ ಬೋಗಿಗಳು, ಒಂದು- ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿ, ಒಂದು- ಹವಾ ನಿಯಂತ್ರಿತ ಅಡುಗೆ ಬೋಗಿ (ಪ್ಯಾಂಟ್ರಿ ಕಾರ್) ಹಾಗೂ ಎರಡು-ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್/ ಜನರೇಟರ್ ಗಳು ಸೇರಿ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?