AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಹಾವಳಿ ಮಧ್ಯೆಯೇ ರೈತರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ!

ಧಾರವಾಡ: ಜಿಲ್ಲೆಯ ರೈತರು ಕೊರೊನಾ ಹಾವಳಿ ಮಧ್ಯೆಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾಗಲೇ ಮಳೆಯೂ ಚೆನ್ನಾಗಿ ಆಗಿದೆ. ಹೀಗಾಗಿ ಬಿತ್ತನೆ ಕಾರ್ಯವನ್ನು ಕೆಲವು ಕಡೆಗಳಲ್ಲಿ ಮುಗಿಸಿಯಾಗಿದೆ. ಆದರೆ ಅದೇಕೋ ಏನೋ ಅವರ ನಸೀಬೇ ಸರಿ ಇಲ್ಲ ಅನ್ನಿಸುತ್ತಿದೆ. ಏಕೆಂದರೆ ಹರಸಾಹಸಪಟ್ಟು ಬಿತ್ತನೆ ಬೀಜ ಪಡೆದ ರೈತರು ಅದನ್ನು ಬಿತ್ತನೆ ಮಾಡಿದರೆ ಅದು ಮೊಳಕೆಯೊಡೆದು ಹೊರಗೆ ಬರುತ್ತಲೇ ಇಲ್ಲ. ಅದರಲ್ಲೂ ಸೊಯಾಬೀನ್ ಬೀಜಗಳಲ್ಲಿಯೇ ಅತಿ ಹೆಚ್ಚು ಸಮಸ್ಯೆಯಾಗಿದೆ. ಇದರಿಂದಾಗಿ ಧಾರವಾಡ ಜಿಲ್ಲೆಯ ರೈತರು ಕಂಗಾಲಾಗಿ ಹೋಗಿದ್ದಾರೆ. ಧಾರವಾಡ ತಾಲೂಕಿನ […]

ಕೊರೊನಾ ಹಾವಳಿ ಮಧ್ಯೆಯೇ ರೈತರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ!
ಸಾಧು ಶ್ರೀನಾಥ್​
| Updated By: |

Updated on:Jun 08, 2020 | 2:34 PM

Share

ಧಾರವಾಡ: ಜಿಲ್ಲೆಯ ರೈತರು ಕೊರೊನಾ ಹಾವಳಿ ಮಧ್ಯೆಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾಗಲೇ ಮಳೆಯೂ ಚೆನ್ನಾಗಿ ಆಗಿದೆ. ಹೀಗಾಗಿ ಬಿತ್ತನೆ ಕಾರ್ಯವನ್ನು ಕೆಲವು ಕಡೆಗಳಲ್ಲಿ ಮುಗಿಸಿಯಾಗಿದೆ. ಆದರೆ ಅದೇಕೋ ಏನೋ ಅವರ ನಸೀಬೇ ಸರಿ ಇಲ್ಲ ಅನ್ನಿಸುತ್ತಿದೆ. ಏಕೆಂದರೆ ಹರಸಾಹಸಪಟ್ಟು ಬಿತ್ತನೆ ಬೀಜ ಪಡೆದ ರೈತರು ಅದನ್ನು ಬಿತ್ತನೆ ಮಾಡಿದರೆ ಅದು ಮೊಳಕೆಯೊಡೆದು ಹೊರಗೆ ಬರುತ್ತಲೇ ಇಲ್ಲ. ಅದರಲ್ಲೂ ಸೊಯಾಬೀನ್ ಬೀಜಗಳಲ್ಲಿಯೇ ಅತಿ ಹೆಚ್ಚು ಸಮಸ್ಯೆಯಾಗಿದೆ. ಇದರಿಂದಾಗಿ ಧಾರವಾಡ ಜಿಲ್ಲೆಯ ರೈತರು ಕಂಗಾಲಾಗಿ ಹೋಗಿದ್ದಾರೆ.

ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ರೈತನ ಜಮೀನಿನಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿಯೇ ಬಿತ್ತನೆ ಬೀಜಗಳನ್ನು ತೆಗೆದುಕೊಂಡು ಬಂದಿದ್ದ ರೈತರು ಮಳೆಯಾಗುತ್ತಲೇ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿ ಎಷ್ಟೋ ದಿನ ಕಳೆದರೂ ಮೊಳಕೆ ಬಂದೇ ಇಲ್ಲ. ಜಿಲ್ಲೆಯಲ್ಲಿ ಸೊಯಾಬೀನ್ ಪ್ರಮುಖ ಬೆಳೆ. ಈಗಾಗಲೇ ಅನೇಕ ರೈತರು ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ ತೆಗೆದುಕೊಂಡು ಹೋಗಿದ್ದಾರೆ.

ಮೊದಲೇ ಇದೀಗ ಬಿತ್ತನೆ ಮಾಡುವ ಸಮಯ. ಹೀಗಾಗಿ ದಿನಗಟ್ಟನೇ ಕ್ಯೂನಲ್ಲಿ ನಿಂತು ಬಿತ್ತನೆ ಬೀಜ ತೆಗೆದುಕೊಳ್ಳೋದೇ ಒಂದು ಸಾಹಸ. ಅಂಥದ್ದರಲ್ಲಿ ಬೀಜ ಬಿತ್ತನೆ ಮಾಡಿ, ವಾರಗಳೇ ಕಳೆದರೂ ಮೊಳಕೆಯೇ ಕಾಣಿಸಿಕೊಂಡಿಲ್ಲ. ಇನ್ನು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿತರಣೆ ಮಾಡಲಾಗಿರೋ ಬೀಜಗಳೇ ಕಳಪೆಯಾಗಿವೆ ಅನ್ನುತ್ತಾರೆ ರೈತರು.

ಎಲ್ಲೆಲ್ಲಿ ಇವರು ವಿತರಿಸಿರೋ ಬೀಜಗಳನ್ನು ಬಿತ್ತಲಾಗಿದೆಯೋ ಅಲ್ಲೆಲ್ಲಾ ಇದೇ ಸಮಸ್ಯೆ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಈ ಬೀಜಗಳನ್ನು ತೆಗೆದುಕೊಂಡು ಹೋಗಿರೋ ಉಳಿದ ರೈತರು ಬಿತ್ತನೆ ಮಾಡಬೇಕೋ ಬೇಡವೋ ಅನ್ನೋದು ತಿಳಿಯದೇ ಸುಮ್ಮನೇ ಕೂಡುವಂತಾಗಿದೆ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೂ ಹೊಲಗಳಿಗೆ ಭೇಟಿ ನೀಡಿಲ್ಲ. ಮಳೆ ಚೆನ್ನಾಗಿ ಆಗುತ್ತಿರುವ ಸಂತೋಷದ ನಡುವೆಯೇ ಇಂಥದ್ದೊಂದು ಸಮಸ್ಯೆಯ ನಡುವೆ ರೈತರು ಕಂಗಾಲಾಗಿ ಹೋಗಿದ್ದಾರೆ.

Published On - 2:22 pm, Mon, 8 June 20