AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!

Treasure Hunt: ನಿಧಿ ತೆಗೆದುಕೊಡೋ ನೆಪದಲ್ಲಿ ಇಬ್ಬರೂ ಅನೇಕರ ಬಳಿ ಸಾಕಷ್ಟು ಹಣ ಪಡೆದಿರೋದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮನೆಯಲ್ಲಿ ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!
ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!
TV9 Web
| Edited By: ಸಾಧು ಶ್ರೀನಾಥ್​|

Updated on: Jan 24, 2023 | 1:23 PM

Share

ಮೋಸ ಹೋಗುವವರು ಇರುವರೆಗೂ ಮೋಸ ಮಾಡುವವರೂ ಇದ್ದೇ ಇರುತ್ತಾರೆ. ಸದ್ಯ ಧಾರವಾಡದಲ್ಲಿ ಈ ಮಾತು ಪ್ರಚಲಿತಕ್ಕೆ ಬರುವಂತಾಗಿದೆ. ಏಕೆಂದರೆ ಸದ್ಯ ಜಿಲ್ಲೆಯಲ್ಲಿ ನಿಮ್ಮ ಮನೆಯಲ್ಲಿ ನಿಧಿ ಇದೆ ಹುಡುಕಿಕೊಡುತ್ತೇವೆ (Treasure Hunt) ಎಂದು ಯಾಮಾರಿಸುವ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಸಮಾಧಾನಕರ ಸಂಗತಿಯೆಂದರೆ ಆರಂಭದಲ್ಲಿಯೇ ಇಂಥ ಗ್ಯಾಂಗ್‌ಗೆ ಖಾಕಿ ಪಡೆ (Dharwad Police) ಶಾಕ್ ಕೊಟ್ಟಿದೆ. ಅದು ಹಣ, ಬಂಗಾರ ಏನೇ ಆಗಿರಲಿ ಏಕಾಏಕಿಯಾಗಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಸಿಕ್ಕು ಬಿಟ್ರೆ ಅದನ್ನು ದೊಡ್ಡ ನಿಧಿ ಅಂತಾನೇ ಹೇಳುತ್ತಾರೆ. ಅನಾದಿಕಾಲದಿಂದಲೂ ನಿಧಿ ಆಸೆಗೆ ಬಿದ್ದು ಅನೇಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದೂ ಇದೆ. ಆದರೂ ಇಂದಿಗೂ ಈ ನಿಧಿ ಆಸೆ ಜನರಲ್ಲಿ ಕಡಿಮೆಯಾಗಿಲ್ಲ. ಸದ್ಯ ಈ ನಿಧಿ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಗ್ಯಾಂಗ್​ ಒಂದು ಜನರನ್ನು ಯಾಮಾರಿಸುವುದಕ್ಕಾಗಿ ಧಾರವಾಡದ ಗ್ರಾಮೀಣ ಭಾಗದಲ್ಲಿ (Navalgund) ಎಂಟ್ರಿ ಕೊಟ್ಟಿದೆ. ಅವರ ಮುಖ್ಯ ಟಾರ್ಗೆಟ್ ಅಮಾಯಕರು, ಮಧ್ಯಮ ವರ್ಗದವರು. ಹಳ್ಳಿಗೆ ಬಂದು, ಹಳೆ ಮನೆಗಳಲ್ಲಿರುವ ಮಧ್ಯಮ ವರ್ಗದವರನ್ನು ಗುರುತಿಸಿ ನಿಮ್ಮ ಮನೆಯಲ್ಲಿ ನಿಧಿಯಿದೆ ತೆಗೆದುಕೊಡುತ್ತೇವೆ. ಅದಕ್ಕೆ ಕೆಲವೊಂದು ಪೂಜೆ ಮಾಡಿಸಬೇಕು ಅಂತಾ ಸಬೂಬು ಹೇಳಿ ಹಣ ದೋಚಿ ಪರಾರಿಯಾಗುತ್ತಿದ್ದಾರಂತೆ.

ಇತ್ತೀಚೆಗೆ ಜಿಲ್ಲೆಯ ನವಲಗುಂದ ತಾಲೂಕಿನ ಗ್ರಾಮಗಳಲ್ಲಿ ನಿಧಿ ಹುಡುಕಿಕೊಡುತ್ತೇವೆ ಅಂತಾ ಹೇಳಿಕೊಂಡು ಕೆಲವರು ಓಡಾಡಿದ್ದಾರೆ. ಇಬ್ಬರು ವ್ಯಕ್ತಿಗಳು ವಾಹನವೊಂದರಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಓಡಾಡಿ, ಜನರಿಗೆ ತೆಗೆದುಕೊಡುವುದಾಗಿ ಹೇಳುತ್ತಿದ್ದಾರೆ ಅನ್ನೋ ಮಾಹಿತಿ ಪೊಲೀಸರಿಗೆ ಬಂದಿದೆ. ಕೂಡಲೇ ಅಲರ್ಟ್ ಆದ ನವಲಗುಂದ ಠಾಣೆ ಪೊಲೀಸರು KA35/M 2731 ವಾಹನವನ್ನು ಹಿಡಿದಿದ್ದಾರೆ. ಅದರಲ್ಲಿರೋ ಬೈಲಹೊಂಗಲ ಮೂಲದ ನಾಗಯ್ಯ ಮತ್ತು ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಮಾರುತಿ ಬೆಳ್ಳಿಕಟ್ಟಿ ಅನ್ನೋರನ್ನು ಬಂಧಿಸಿದ್ದಾರೆ.

ಬಳಿಕ ಅವರಿಂದ ಎಲ್ಲ ಮಾಹಿತಿ ಪಡೆದಿದ್ದಾರೆ. ನಿಧಿ ತೆಗೆದುಕೊಡೋ ನೆಪದಲ್ಲಿ ಇಬ್ಬರೂ ಅನೇಕರ ಬಳಿ ಸಾಕಷ್ಟು ಹಣ ಪಡೆದಿರೋದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಜನ ಇಂಥವರನ್ನು ನಂಬದೇ, ನೇರವಾಗಿ ಪೊಲೀಸರಿಗೆ ಇಂಥವರ ವಿರುದ್ಧ ದೂರು ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ, ಮೋಸವನ್ನೇ ತಮ್ಮ ಉದ್ಯೋಗ ಮಾಡಿಕೊಂಡಿರೋ ಕೆಲವರು ಈಗ ಜನರ ಬಳಿ ನಿಧಿಯಾಸೆಯ ಗಾಳ/ದಾಳ ಹಾಕಲು ಬರುತ್ತಿದ್ದಾರೆ. ಜನರು ನಿಧಿಯಾಸೆಗಾಗಿ ಕೈಯಲ್ಲಿ ಇರೋದನ್ನು ಕಳೆದುಕೊಳ್ಳದೇ ಜಾಗೃತರಾದಲ್ಲಿ ಮಾತ್ರ ಇಂತಹ ಗ್ಯಾಂಗ್ ಆಟವನ್ನು ನಿಲ್ಲಿಸಬಹುದಾಗಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು