AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!

Treasure Hunt: ನಿಧಿ ತೆಗೆದುಕೊಡೋ ನೆಪದಲ್ಲಿ ಇಬ್ಬರೂ ಅನೇಕರ ಬಳಿ ಸಾಕಷ್ಟು ಹಣ ಪಡೆದಿರೋದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮನೆಯಲ್ಲಿ ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!
ನಿಧಿಯಿದೆ, ಪೂಜೆ ಮಾಡಿಸಬೇಕು ಎಂದು ಬಂದ ಖದೀಮರಿಗೆ ಧಾರವಾಡ ಪೊಲೀಸರು ಪಾಠ ಕಲಿಸಿದ್ದಾರೆ!
TV9 Web
| Edited By: |

Updated on: Jan 24, 2023 | 1:23 PM

Share

ಮೋಸ ಹೋಗುವವರು ಇರುವರೆಗೂ ಮೋಸ ಮಾಡುವವರೂ ಇದ್ದೇ ಇರುತ್ತಾರೆ. ಸದ್ಯ ಧಾರವಾಡದಲ್ಲಿ ಈ ಮಾತು ಪ್ರಚಲಿತಕ್ಕೆ ಬರುವಂತಾಗಿದೆ. ಏಕೆಂದರೆ ಸದ್ಯ ಜಿಲ್ಲೆಯಲ್ಲಿ ನಿಮ್ಮ ಮನೆಯಲ್ಲಿ ನಿಧಿ ಇದೆ ಹುಡುಕಿಕೊಡುತ್ತೇವೆ (Treasure Hunt) ಎಂದು ಯಾಮಾರಿಸುವ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಸಮಾಧಾನಕರ ಸಂಗತಿಯೆಂದರೆ ಆರಂಭದಲ್ಲಿಯೇ ಇಂಥ ಗ್ಯಾಂಗ್‌ಗೆ ಖಾಕಿ ಪಡೆ (Dharwad Police) ಶಾಕ್ ಕೊಟ್ಟಿದೆ. ಅದು ಹಣ, ಬಂಗಾರ ಏನೇ ಆಗಿರಲಿ ಏಕಾಏಕಿಯಾಗಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಸಿಕ್ಕು ಬಿಟ್ರೆ ಅದನ್ನು ದೊಡ್ಡ ನಿಧಿ ಅಂತಾನೇ ಹೇಳುತ್ತಾರೆ. ಅನಾದಿಕಾಲದಿಂದಲೂ ನಿಧಿ ಆಸೆಗೆ ಬಿದ್ದು ಅನೇಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದೂ ಇದೆ. ಆದರೂ ಇಂದಿಗೂ ಈ ನಿಧಿ ಆಸೆ ಜನರಲ್ಲಿ ಕಡಿಮೆಯಾಗಿಲ್ಲ. ಸದ್ಯ ಈ ನಿಧಿ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಗ್ಯಾಂಗ್​ ಒಂದು ಜನರನ್ನು ಯಾಮಾರಿಸುವುದಕ್ಕಾಗಿ ಧಾರವಾಡದ ಗ್ರಾಮೀಣ ಭಾಗದಲ್ಲಿ (Navalgund) ಎಂಟ್ರಿ ಕೊಟ್ಟಿದೆ. ಅವರ ಮುಖ್ಯ ಟಾರ್ಗೆಟ್ ಅಮಾಯಕರು, ಮಧ್ಯಮ ವರ್ಗದವರು. ಹಳ್ಳಿಗೆ ಬಂದು, ಹಳೆ ಮನೆಗಳಲ್ಲಿರುವ ಮಧ್ಯಮ ವರ್ಗದವರನ್ನು ಗುರುತಿಸಿ ನಿಮ್ಮ ಮನೆಯಲ್ಲಿ ನಿಧಿಯಿದೆ ತೆಗೆದುಕೊಡುತ್ತೇವೆ. ಅದಕ್ಕೆ ಕೆಲವೊಂದು ಪೂಜೆ ಮಾಡಿಸಬೇಕು ಅಂತಾ ಸಬೂಬು ಹೇಳಿ ಹಣ ದೋಚಿ ಪರಾರಿಯಾಗುತ್ತಿದ್ದಾರಂತೆ.

ಇತ್ತೀಚೆಗೆ ಜಿಲ್ಲೆಯ ನವಲಗುಂದ ತಾಲೂಕಿನ ಗ್ರಾಮಗಳಲ್ಲಿ ನಿಧಿ ಹುಡುಕಿಕೊಡುತ್ತೇವೆ ಅಂತಾ ಹೇಳಿಕೊಂಡು ಕೆಲವರು ಓಡಾಡಿದ್ದಾರೆ. ಇಬ್ಬರು ವ್ಯಕ್ತಿಗಳು ವಾಹನವೊಂದರಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಓಡಾಡಿ, ಜನರಿಗೆ ತೆಗೆದುಕೊಡುವುದಾಗಿ ಹೇಳುತ್ತಿದ್ದಾರೆ ಅನ್ನೋ ಮಾಹಿತಿ ಪೊಲೀಸರಿಗೆ ಬಂದಿದೆ. ಕೂಡಲೇ ಅಲರ್ಟ್ ಆದ ನವಲಗುಂದ ಠಾಣೆ ಪೊಲೀಸರು KA35/M 2731 ವಾಹನವನ್ನು ಹಿಡಿದಿದ್ದಾರೆ. ಅದರಲ್ಲಿರೋ ಬೈಲಹೊಂಗಲ ಮೂಲದ ನಾಗಯ್ಯ ಮತ್ತು ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಮಾರುತಿ ಬೆಳ್ಳಿಕಟ್ಟಿ ಅನ್ನೋರನ್ನು ಬಂಧಿಸಿದ್ದಾರೆ.

ಬಳಿಕ ಅವರಿಂದ ಎಲ್ಲ ಮಾಹಿತಿ ಪಡೆದಿದ್ದಾರೆ. ನಿಧಿ ತೆಗೆದುಕೊಡೋ ನೆಪದಲ್ಲಿ ಇಬ್ಬರೂ ಅನೇಕರ ಬಳಿ ಸಾಕಷ್ಟು ಹಣ ಪಡೆದಿರೋದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಜನ ಇಂಥವರನ್ನು ನಂಬದೇ, ನೇರವಾಗಿ ಪೊಲೀಸರಿಗೆ ಇಂಥವರ ವಿರುದ್ಧ ದೂರು ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ, ಮೋಸವನ್ನೇ ತಮ್ಮ ಉದ್ಯೋಗ ಮಾಡಿಕೊಂಡಿರೋ ಕೆಲವರು ಈಗ ಜನರ ಬಳಿ ನಿಧಿಯಾಸೆಯ ಗಾಳ/ದಾಳ ಹಾಕಲು ಬರುತ್ತಿದ್ದಾರೆ. ಜನರು ನಿಧಿಯಾಸೆಗಾಗಿ ಕೈಯಲ್ಲಿ ಇರೋದನ್ನು ಕಳೆದುಕೊಳ್ಳದೇ ಜಾಗೃತರಾದಲ್ಲಿ ಮಾತ್ರ ಇಂತಹ ಗ್ಯಾಂಗ್ ಆಟವನ್ನು ನಿಲ್ಲಿಸಬಹುದಾಗಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ