AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗಳೂರು: ದಿದ್ದಿಗಿ ಗ್ರಾಮ ಪಂಚಾಯತಿ ಹುದ್ದೆಗೆ ಲಕ್ಷ ಲಕ್ಷ ಲಂಚ… ಆಡಿಯೋ ವೈರಲ್​ ಆಯ್ತು

Diddigi gram panchayat bribe audio viral: ನೀರಗಂಟಿ ಹುದ್ದೆಗೆ 8 ರಿಂದ 10 ಲಕ್ಷ ಕೊಟ್ಟು ಎಂಎ, ಎಂಇಡಿ ಓದಿದವರೇ ಬರೋಕೆ ರೆಡಿ ಇದ್ದಾರೆ ಎಂದು ರಾಜರೋಷವಾಗಿ ಆರೋಪಿಗಳು ಲಂಚದ ಬೇಡಿಕೆ ಮಂಡಿಸುತ್ತಾರೆ. ಈ ಲಂಚದ ಮೊತ್ತ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕೊಡಬೇಕು. ನನಗೆ 20 ಸಾವಿರ ಅಷ್ಟೇ ಎಂದೂ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಲಂಚದ ವಿವರಣೆ ಕೊಟ್ಟಿದ್ದಾನೆ.

ಜಗಳೂರು: ದಿದ್ದಿಗಿ ಗ್ರಾಮ ಪಂಚಾಯತಿ ಹುದ್ದೆಗೆ ಲಕ್ಷ ಲಕ್ಷ ಲಂಚ... ಆಡಿಯೋ ವೈರಲ್​ ಆಯ್ತು
ಜಗಳೂರು: ದಿದ್ದಿಗಿ ಗ್ರಾಮ ಪಂಚಾಯತಿ ಹುದ್ದೆಗೆ ಲಕ್ಷ ಲಕ್ಷ ಲಂಚ... ಆಡಿಯೋ ವೈರಲ್​ ಆಯ್ತು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 26, 2021 | 12:39 PM

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ದಿದ್ದಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಭಾರ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಿಹೆಚ್ ಶ್ರೀನಿವಾಸ್, ಉಚ್ವಂಗಿಪುರದ ಸದಸ್ಯ ಬಾಲರಾಜ್ ಅವರುಗಳು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ. ನೀರಗಂಟೆ ಹುದ್ದೆಗೆ ಅಂಜಿನಪ್ಪ ಎನ್ನುವವರ ಬಳಿ 1 ಲಕ್ಷ 60 ಸಾವಿರ ಹಣ ನೀಡುವಂತೆ ಇವರುಗಳು ಬೇಡಿಕೆಯಿಟ್ಟಿದ್ದಾರೆ. ಇದು ಆಡಿಯೋ ರೂಪದಲ್ಲಿ ದಾಖಲಾಗಿದ್ದು, ನೀರಗಂಟಿ ಹುದ್ದೆಗೆ ಲಕ್ಷ ಲಕ್ಷ ಲಂಚದ ಬೇಡಿಕೆಯ ಆಡಿಯೋ ಕೇಳಿ ಜನ ಹುಬ್ಬೇರಿಸಿದ್ದಾರೆ.

ಲಕ್ಷಾಂತರ ರೂಪಾಯಿ ನೀಡಿದರೆ ಅದೇಶ ಪತ್ರ ಕೊಡಿಸುವುದಾಗಿ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಹೇಳಿರುವುದು ಆಡಿಯೋದಲ್ಲಿದೆ. ಅದಕ್ಕೆ ಎರಡು ವರ್ಷಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಈಗ ಲಕ್ಷಾಂತರ ರೂಪಾಯಿ ಹೇಗೆ ಜೋಡಿಸಲಿ. ಮನೆಯಲ್ಲಿ ಹೆಂಡತಿ ಮಕ್ಕಳು ಉಪವಾಸ ಇರ್ತಾರೆ. ಹಣ ಜೋಡಿಸಲು ಸಾಧ್ಯವಿಲ್ಲ ಎಂದು ಹುದ್ದೆಯ ಆಕಾಂಕ್ಷಿ ಅಂಜಿನಪ್ಪ ತನ್ನ ಅಳಲು ತೋಡಿಕೊಂಡಿದ್ದಾನೆ.

ನೀರಗಂಟಿ ಹುದ್ದೆಗೆ 8 ರಿಂದ 10 ಲಕ್ಷ ಕೊಟ್ಟು ಎಂಎ, ಎಂಇಡಿ ಓದಿದವರೇ ಬರೋಕೆ ರೆಡಿ ಇದ್ದಾರೆ ಎಂದು ರಾಜರೋಷವಾಗಿ ಆರೋಪಿಗಳು ಲಂಚದ ಬೇಡಿಕೆ ಮಂಡಿಸುತ್ತಾರೆ. ಈ ಲಂಚದ ಮೊತ್ತ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕೊಡಬೇಕು. ನನಗೆ 20 ಸಾವಿರ ಅಷ್ಟೇ ಎಂದೂ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಲಂಚದ ವಿವರಣೆ ಕೊಟ್ಟಿದ್ದಾನೆ. ನೀರಗಂಟಿ ಹುದ್ದೆಗೆ ಹೀಗೆ ಲಂಚದ ಡೀಲಿಂಗ್ ರಾಜರೋಷವಾಗಿ ನಡೆದಿರುವ ಪಿಡಿಒ ಡೀಲಿಂಗ್ ಅಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ.

(diddigi gram panchayat bribe audio goes viral in davangere district)

ಕೊವಿಡ್​ ಆತಂಕದ ಜೊತೆಗೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!

ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?