AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹೊಳೆ: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ..! ನೀವೂ ನೋಡಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾರಿನ ಮೇಲೆ ದಾಳಿ ಮಾಡಲು ಬಂದ ಕರಡಿಯೊಂದು ಪೋಸ್ ಕೊಟ್ಟುಹೋಗಿದೆ! ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ಬುಲೆವಾರ್ಡ್ ರಸ್ತೆಯಲ್ಲಿರುವ ಮುಖ್ಯ ನ್ಯಾಯಾಲಯಕ್ಕೆ ಒಂದು ಹಾವು ಎಂಟ್ರಿ ಕೊಟ್ಟಿದೆ.

ನಾಗರಹೊಳೆ: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ..! ನೀವೂ ನೋಡಿ
ನಾಗರಹೊಳೆ: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ..! ನೀವೂ ನೋಡಿ
TV9 Web
| Updated By: Digi Tech Desk|

Updated on:Jun 26, 2021 | 12:36 PM

Share

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾರಿನ ಮೇಲೆ ದಾಳಿ ಮಾಡಲು ಬಂದ ಕರಡಿಯೊಂದು ಪೋಸ್ ಕೊಟ್ಟುಹೋಗಿದೆ! ಸದರಿ ಕರಡಿ ಅದರ ಪಾಡಿಗೆ ಅದು ರಸ್ತೆ ದಾಟುತ್ತಿತ್ತು. ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಚಾಲಕ ದೃಶ್ಯವನ್ನು ಸೆರೆಹಿಡಿಯುತ್ತಿದ್ದ. ಆ ವೇಳೆ, ಕಾರಿನ ಶಬ್ದಕ್ಕೆ ಕೋಪಗೊಂಡ ಕರಡಿಯು ದಾಳಿ ಮಾಡಲು ‌ಮುಂದಾಗಿದೆ. ಕಾರಿನಲ್ಲಿದ್ದವರ ಜೋರು ಚೀರಾಟ ಕೇಳಿ, ದಾಳಿ ಮಾಡಲು ಬಂದ ಕರಡಿ ಎಲ್ಲರನ್ನೂ ಗುರಾಯಿಸಿ ನೋಡಿ ವಾಪಸ್ ತೆರಳಿದೆ. ಕರಡಿಯ ಆಟಾಟೋಪ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನ್ಯಾಯಾಲಯಕ್ಕೆ ಎಂಟ್ರಿ ಕೊಟ್ಟ ಹಾವು; ಸ್ನೇಕ್ ಶ್ಯಾಮ್​ರಿಂದ ರಕ್ಷಣೆ: ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ಬುಲೆವಾರ್ಡ್ ರಸ್ತೆಯಲ್ಲಿರುವ ಮುಖ್ಯ ನ್ಯಾಯಾಲಯಕ್ಕೆ ಒಂದು ಹಾವು ಎಂಟ್ರಿ ಕೊಟ್ಟಿದೆ. ಇದನ್ನ ಕಂಡು ಸಿಬ್ಬಂದಿ ಕೆಲ ಕ್ಷಣ ಆತಂಕಗೊಂಡಿದ್ದಾರೆ. ಮೊದಲು ಹಾವಿನ ಉಸಿರಾಟದ ಶಬ್ದ ಕೇಳಿ ಸಿಬ್ಬಂದಿ ಗಾಬರಿಗೊಂಡರು.

ಈ ಹಾವು ಕೊಠಡಿಯ ಬೀರುವಿನ ಪಕ್ಕ ಸಣ್ಣ ಖಾಲಿ ಬಾಕ್ಸ್ ನಲ್ಲಿ ಸೇರಿಕೊಂಡಿತ್ತು. ಇಕ್ಕಟ್ಟಿನ ಸ್ಥಳದಲ್ಲಿದ್ದ ಪೇಪರ್ ಬಾಕ್ಸ್ ಒಂದರಲ್ಲಿ ಸೇರಿಕೊಂಡಿಬಿಟ್ಟಿತ್ತು ಹಾವು. ಮೈಸೂರಿನ ಉರಗ ತಜ್ಞ ಸ್ನೇಕ್ ಶ್ಯಾಮ್ ಗೆ ಸಿಬ್ಬಂದಿ ಕರೆ ಮಾಡಲಾಗಿ, ಅವರು ತಕ್ಷಣ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದರು. ಅವಿತಿದ್ದ ಭಾರಿ ಗಾತ್ರದ ಹಾವನ್ನು ಸ್ನೇಕ್ ಶ್ಯಾಮ್ ಹಿಡಿದು ರಕ್ಷಿಸಿದರು.

mysuru snake shyam rescues snake in court hall 1

ನ್ಯಾಯಾಲಯಕ್ಕೆ ಎಂಟ್ರಿ ಕೊಟ್ಟ ಹಾವು; ಸ್ನೇಕ್ ಶ್ಯಾಮ್​ರಿಂದ ರಕ್ಷಣೆ

(bear found in Nagarhole National Park at mysuru mysuru snake shyam rescues snake in court hall)

Published On - 12:00 pm, Sat, 26 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ