AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಯಲ್ ಎಸ್ಟೇಟ್ ಬಗ್ಗೆ ಡಿಕೆಶಿ ಸ್ವಾರಸ್ಯಕರ ಮಾತು, ಅದು ಇ.ಡಿಗೆ ನೀಡಿದ ಸಂದೇಶವಾ?

ಮೈಸೂರು: ಚಾಮುಂಡಿ ಕ್ರೀಡಾಂಗಣಕ್ಕೆ 2ಎಕರೆ ಜಾಗ ನಾನೇ ಫ್ರೀಯಾಗಿ ಕೊಟ್ಟಿದ್ದೇನೆ ಎಂದು ಮೈಸೂರಿನ ಅಳಿಯ, ಕಾಂಗ್ರೆಸ್​ ಶಾಸಕ ಡಿ.ಕೆ.ಶಿವಕುಮಾರ್ ಬೆಳಗ್ಗೆಯಷ್ಟೇ ಸಭೆಯೊದಂರಲ್ಲಿ ಹೇಳಿದ್ದರು. ಅದಾದ ಬಳಿಕ ಮತ್ತೊಂದು ಸುತ್ತು ಸಭೆ ಸೇರಿದ್ದ ಕಾಂಗ್ರೆಸ್​ ಮುಖಂಡರು ರಿಯಲ್ ಎಸ್ಟೇಟ್ ಬಗ್ಗೆ ಸ್ವಾರಸ್ಯಕರವಾಗಿ ವಿಚಾರ ಹಂಚಿಕೊಂಡಿದ್ದಾರೆ. ಮಾಜಿ ಸಚಿವ ಡಿಕೆಶಿ, ಸಾ.ರಾ.ಮಹೇಶ್, ಧ್ರುವನಾರಾಯಣ ನಡುವೆ ಈ ಮಾತುಕತೆ ನಡೆದಿದೆ. ಡಿಕೆಶಿ ಜೊತೆಗಿನ ಚರ್ಚೆ ವೇಳೆ ರಿಯಲ್ ಎಸ್ಟೇಟ್​ಗೆ ಈ ಹಿಂದೆ ಬೂಮ್ ಇತ್ತು ಎಂದು ಸಂಸದ ಧ್ರುವನಾರಾಯಣ ಹೇಳಿದರು. ಅದಕ್ಕೆ […]

ರಿಯಲ್ ಎಸ್ಟೇಟ್ ಬಗ್ಗೆ ಡಿಕೆಶಿ ಸ್ವಾರಸ್ಯಕರ ಮಾತು, ಅದು ಇ.ಡಿಗೆ ನೀಡಿದ ಸಂದೇಶವಾ?
ಸಾಧು ಶ್ರೀನಾಥ್​
|

Updated on:Nov 08, 2019 | 1:24 PM

Share

ಮೈಸೂರು: ಚಾಮುಂಡಿ ಕ್ರೀಡಾಂಗಣಕ್ಕೆ 2ಎಕರೆ ಜಾಗ ನಾನೇ ಫ್ರೀಯಾಗಿ ಕೊಟ್ಟಿದ್ದೇನೆ ಎಂದು ಮೈಸೂರಿನ ಅಳಿಯ, ಕಾಂಗ್ರೆಸ್​ ಶಾಸಕ ಡಿ.ಕೆ.ಶಿವಕುಮಾರ್ ಬೆಳಗ್ಗೆಯಷ್ಟೇ ಸಭೆಯೊದಂರಲ್ಲಿ ಹೇಳಿದ್ದರು. ಅದಾದ ಬಳಿಕ ಮತ್ತೊಂದು ಸುತ್ತು ಸಭೆ ಸೇರಿದ್ದ ಕಾಂಗ್ರೆಸ್​ ಮುಖಂಡರು ರಿಯಲ್ ಎಸ್ಟೇಟ್ ಬಗ್ಗೆ ಸ್ವಾರಸ್ಯಕರವಾಗಿ ವಿಚಾರ ಹಂಚಿಕೊಂಡಿದ್ದಾರೆ. ಮಾಜಿ ಸಚಿವ ಡಿಕೆಶಿ, ಸಾ.ರಾ.ಮಹೇಶ್, ಧ್ರುವನಾರಾಯಣ ನಡುವೆ ಈ ಮಾತುಕತೆ ನಡೆದಿದೆ.

ಡಿಕೆಶಿ ಜೊತೆಗಿನ ಚರ್ಚೆ ವೇಳೆ ರಿಯಲ್ ಎಸ್ಟೇಟ್​ಗೆ ಈ ಹಿಂದೆ ಬೂಮ್ ಇತ್ತು ಎಂದು ಸಂಸದ ಧ್ರುವನಾರಾಯಣ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಅದರಿಂದ ಸಾ.ರಾ.ಮಹೇಶ್, ರಾಮದಾಸ್ ಆರ್ಥಿಕವಾಗಿ ಸದೃಢರಾದ್ರು ಎಂದ್ರು.

1ಲಕ್ಷದ ಸೈಟ್ 4ಕೋಟಿ ರೂ ಆಗಿದೆ, ಏನಂತ ಅಫಿಡವಿಟ್ ಕೊಡ್ಲಿ!? ಇದೇ ವೇಳೆ ತಮ್ಮದೂ ಒಂದು ಅನುಭವವನ್ನು ಹಂಚಿಕೊಂಡ ಅವರು ಬಂಗಾರಪ್ಪ ನನಗೆ ಒಂದು ಲಕ್ಷಕ್ಕೆ ಒಂದು ಸೈಟ್ ಕೊಟ್ಟಿದ್ದರು. ಆ ಸೈಟ್ ಬೆಲೆ ಈಗ ನಾಲ್ಕು ಕೋಟಿ ರೂಪಾಯಿ ಆಗಿದೆ. ನಾನು ಅಫಿಡವಿಟ್ ಸಲ್ಲಿಸುವಾಗ 1 ಲಕ್ಷ ಅಂತ ಕೊಡಬೇಕಾ? ನಾಲ್ಕು ಕೋಟಿ ಕೊಡಬೇಕಾ ಗೊತ್ತಾಗುತ್ತಿಲ್ಲ ಎಂದು ಡಿಕೆಶಿ ಪೇಚಾಡಿದರು.

ಅಕ್ರಮ ಆಸ್ತಿ ಸಂಪಾದಿಸುವುದರಲ್ಲಿ ಡಿಕೆ ಶಿವಕುಮಾರ್ ಗಿನ್ನಿಸ್​ ದಾಖಲೆ ಮಾಡಿದ್ದಾರೆ ಎಂದು ಇ.ಡಿ. ಪರ ವಕೀಲ ನಟರಾಜ್​ ಅವರು ಇತ್ತೀಚೆಗೆ ದಿಲ್ಲಿ ಕೋರ್ಟ್​ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರ ಇಂದಿನ ಮಾತು ಇ.ಡಿ.ಗೆ ನೀಡಿದ ಬಹಿರಂಗ ಉತ್ತರದಂತೆ ಇತ್ತು ಎಂದು ಮೈಸೂರು ಜನ ಮಾತನಾಡಿದ್ದಾರೆ.

Published On - 1:21 pm, Fri, 8 November 19

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ