ವೈದ್ಯರ ನಡಿಗೆ ಹಳ್ಳಿ ಕಡೆಗೆ: ಕರ್ನಾಟಕ ಸರ್ಕಾರದ ಬಿಡುಗಡೆಗೊಳಿಸಿದ ಮಾರ್ಗಸೂಚಿಯ ವಿವರ ಇಲ್ಲಿದೆ

Doctors in Villages: ಗ್ರಾಮೀಣ ಭಾಗಗಳಲ್ಲಿ ಕೊವಿಡ್ ಸೋಂಕು ಹೆಚ್ಚುತ್ತಿದ್ದು, ತಕ್ಷಣವೇ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಅನಿವಾರ್ಯವಿದೆ ಎಂಬ ಬಗ್ಗೆ ‘ಗ್ರಾಮ ಗಂಡಾಂತರ’ ಎಂಬ ಹೆಸರಿನಲ್ಲಿ ಟಿವಿ9 ಅಭಿಯಾನ ನಡೆಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ವೈದ್ಯರ ನಡಿಗೆ ಹಳ್ಳಿ ಕಡೆಗೆ: ಕರ್ನಾಟಕ ಸರ್ಕಾರದ ಬಿಡುಗಡೆಗೊಳಿಸಿದ ಮಾರ್ಗಸೂಚಿಯ ವಿವರ ಇಲ್ಲಿದೆ
ಸಮುದಾಯ ಆರೋಗ್ಯ ಕೇಂದ್ರ

Updated on: May 23, 2021 | 8:21 PM

ಬೆಂಗಳೂರು: ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಕೊವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ, ಜಾಗೃತಿ ಮೂಡಿಸಲು ಯೋಜಿಸಲಾಗಿರುವ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ.

ಕೊವಿಡ್​ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕುರಿತು ಮಾರ್ಗಸೂಚಿ ವಿವರಿಸುತ್ತದೆ. ಸೋಂಕಿನ ಲಕ್ಷಣಗಳಿದ್ದಲ್ಲಿ ಸ್ಥಳದಲ್ಲಿಯೇ ಆರ್​ಎಟಿ ಪರೀಕ್ಷೆ ಮಾಡಲಾಗುತ್ತದೆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೊವಿಡ್ ಸೋಂಕಿತರಿಗೆ ಮೆಡಿಕಲ್ ಕಿಟ್​ ವಿತರಿಸಿ ಅಗತ್ಯ ಮಾಹಿತಿ ನೀಡುಲಾಗುತ್ತದೆ. ಸೋಂಕಿತರ ಸಂಪರ್ಕದಲ್ಲಿರುವವರನ್ನು ಪರೀಕ್ಷೆ ಮಾಡುವುದು. ಹೋಂ ಐಸೋಲೇಶನ್ ಆಗಬಲ್ಲ ವ್ಯವಸ್ಥೆ ಇದ್ದರೆ ಮನೆಯಲ್ಲಿಯೇ ಹೋಂ​ ಐಸೋಲೇಷನ್​​ಗೆ ಅವಕಾಶ ಮಾಡಿಕೊಡುವುದು. ಅಂತಹ ವ್ಯವಸ್ಥೆ ಇಲ್ಲದಿದ್ದರೆ ಕೊವಿಡ್​ ಕೇರ್ ಸೆಂಟರ್​​ನಲ್ಲಿ ಹೋಂ ಐಸೋಲೇಶನ್​ಗೆ ವ್ಯವಸ್ಥೆ ಮಾಡಲಾಗುತ್ತದೆ.

ಅಷ್ಟೇ ಅಲ್ಲದೇ, ಹೋಂ ಐಸೋಲೇಷನ್​​ನಲ್ಲಿರುವವರನ್ನು ಟೆಸ್ಟ್​ ಮಾಡಲಾಗುತ್ತದೆ. ತಪಾಸಣೆ ಮಾಡಿದ ವಿವರವನ್ನು ಆ್ಯಪ್​ನಲ್ಲಿ ನಮೂದಿಸಲಾಗುತ್ತದೆ. ​ಮೊಬೈಲ್​ ಕ್ಲಿನಿಕ್ ತಂಡ ದಿನದ ವರದಿಯನ್ನು ಆರೋಗ್ಯಾಧಿಕಾರಿಗಳಿಗೆ ಒಪ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸರ್ಕಾರ ತಿಳಿಸಿದೆ. ಗ್ರಾಮೀಣ ಭಾಗಗಳಲ್ಲಿ ಕೊವಿಡ್ ಸೋಂಕು ಹೆಚ್ಚುತ್ತಿದ್ದು, ತಕ್ಷಣವೇ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಅನಿವಾರ್ಯವಿದೆ ಎಂಬ ಬಗ್ಗೆ ‘ಗ್ರಾಮ ಗಂಡಾಂತರ’ ಎಂಬ ಹೆಸರಿನಲ್ಲಿ ಟಿವಿ9 ಅಭಿಯಾನ ನಡೆಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ‘ಅಲೋಪಥಿ ಬಗ್ಗೆ ನೀವಾಡಿದ ಮಾತುಗಳು ಸರಿಯಲ್ಲ..ಕೊವಿಡ್ ವಾರಿಯರ್ಸ್​ಗೆ ಅಗೌರವ ತೋರಿದ್ದೀರಿ’-ಬಾಬಾ ರಾಮ್​ದೇವ್​ಗೆ ಡಾ.ಹರ್ಷವರ್ಧನ್ ಪತ್ರ

ಕೊವಿಡ್ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚಿನ ಅಪಾಯ, ಭಾರತದಲ್ಲಿ ತಯಾರಿಸಿದ ಮೂಗಿಗೆ ಹಾಕುವ ಲಸಿಕೆ;ಗೇಮ್ ಚೇಂಜರ್; ಆಗುವ ಸಾಧ್ಯತೆ: ಸೌಮ್ಯ ಸ್ವಾಮಿನಾಥನ್

(Doctors walk towards Villages to test covid here is the Karnataka state government guidelines)