AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ನಡುವೆ ಕಾರವಾರದಲ್ಲಿ ಅಂಗವಿಕಲನಿಂದ ಸಮಾಜ ಸೇವೆ

ಅಂಗವಿಕಲರಾದ ಕಾರವಾರ ನಿವಾಸಿ ಜಗದೀಶ್ ಎಂಬುವವರು ಫ್ರಂಟ್ ಲೈನ್ ವಾರಿಯರ್ಸ್ ಪೊಲೀಸರಿಗೆ ನೀರು, ಜ್ಯೂಸ್ ಮತ್ತು ಬಿಸ್ಕತ್ತು ನೀಡುವ ಮೂಲಕ ತನ್ನ ಕೈಯಲ್ಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಗದೀಶ್ ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡಿದ್ದರು.

ಲಾಕ್​ಡೌನ್​ ನಡುವೆ ಕಾರವಾರದಲ್ಲಿ ಅಂಗವಿಕಲನಿಂದ ಸಮಾಜ ಸೇವೆ
ಪೊಲೀಸರಿಗೆ ನೀರು ಕೊಡುತ್ತಿರುವ ಜಗದೀಶ್
sandhya thejappa
|

Updated on: May 10, 2021 | 1:59 PM

Share

ಕಾರವಾರ: ಕೊರೊನಾ ಆರ್ಭಟ ಎಲ್ಲಿಗೆ ಬಂದು ತಲುಪುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಅನಿವಾರ್ಯವಾಗಿ ಇಂದಿನಿಂದ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಿದೆ. ಕಠಿಣ ನಿಯಮಗಳು ಜಾರಿಯಾಗಿದ್ದರು ರಾಜ್ಯದ ಹಲವು ಕಡೆ ಬೇಜಾವಬ್ದಾರಿಯಿಂದ ಬೇಕಾಬಿಟ್ಟಿಯಾಗಿ ಜನ ಓಡಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಅಂಗವಿಕಲರೊಬ್ಬರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ಅಂಗವಿಕಲರಾದ ಕಾರವಾರ ನಿವಾಸಿ ಜಗದೀಶ್ ಎಂಬುವವರು ಫ್ರಂಟ್ ಲೈನ್ ವಾರಿಯರ್ಸ್ ಪೊಲೀಸರಿಗೆ ನೀರು, ಜ್ಯೂಸ್ ಮತ್ತು ಬಿಸ್ಕತ್ತು ನೀಡುವ ಮೂಲಕ ತನ್ನ ಕೈಯಲ್ಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಗದೀಶ್ ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡಿದ್ದರು. ಆದರೂ, ಒಂದೇ ಕೈಯಲ್ಲಿ ಎಂ-80 ಚಲಾಯಿಸುತ್ತಾ ಇಡೀ ನಗರ ಸುತ್ತಾಡಿ ತನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.

ಬಿಸಿಲಿನಲ್ಲಿ ಇಡೀ ದಿನ ನಿಂತು ಬಸವಳಿಯೋ ಪೊಲೀಸರ ಹೊಟ್ಟೆಯನ್ನು ಜಗದೀಶ್ ತಣ್ಣಗಿರಿಸುತ್ತಿದ್ದಾರೆ. ಹೋಟೆಲ್​ನಲ್ಲಿ ಕೆಲಸ ಮಾಡುವ ಇವರು ಕಳೆದ ಲಾಕ್​ಡೌನ್​ ಸಂದರ್ಭದಲ್ಲೂ ಸೇವೆ ನೀಡಿದ್ದರು. ಈ ಬಾರಿ ಮತ್ತೆ ಲಾಕ್​ಡೌನ್​ ಸಂದರ್ಭ ನೀರು, ಜ್ಯೂಸ್, ಬಿಸ್ಕತ್ತು ನೀಡುತ್ತಿದ್ದಾರೆ.

ಇದನ್ನೂ ಓದಿ

ಸರ್ಕಾರದ ತುರ್ತು ಗಮನಕ್ಕೆ.. 4 ದಿನ ಹಿಂದೆಯೇ ಅಟೆಂಡೆನ್ಸ್​ ರಿಜಿಸ್ಟರ್‌ಗೆ ಸಹಿ ಹಾಕಿ, ನಿಗೂಢವಾಗಿ ನಾಪತ್ತೆಯಾದ ವೈದ್ಯ!

ಕೊರೊನಾಗೆ ಬಲಿಯಾಗಿದ್ದ ವೃದ್ಧ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ಮಾಡಿದ ವೈದ್ಯ

(Doing social service amidst a disabled lockdown at Karwar)