AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ವೇಳೆ ಬೀದಿನಾಯಿಗಳಿಗೆ ಮಾಂಸದೂಟ ಹಾಕಿದ ಮೊತ್ತ 15 ಲಕ್ಷ ರೂ; ಹಸುಗಳಿಗೆ ಮೇವು ಪೂರೈಕೆ ಮೊತ್ತ 3 ಲಕ್ಷ ರೂ: ಬಿಬಿಎಂಪಿ

ಬಿಬಿಎಂಪಿ ನೀಡಿರುವ ಸಮರ್ಥನೆ ಪ್ರಕಾರ ಬೆಂಗಳೂರು ನಗರದಲ್ಲಿ 3 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿದ್ದು, ಅವುಗಳಿಗೆ ದಿನಕ್ಕೆ 250 ಗ್ರಾಂ ಬೇಯಿಸಿದ ಮಾಂಸದಂತೆ ಊಟ ಒದಗಿಸಲಾಗಿದೆಯಂತೆ. ಒಟ್ಟು ಮೂರು ಲಕ್ಷ ನಾಯಿಗಳಿಗೆ ಲಾಕ್​ಡೌನ್ ಅವಧಿಯಲ್ಲಿ ಆಹಾರ ನೀಡಿದ ಮೊತ್ತ 15 ಲಕ್ಷ ರೂಪಾಯಿ ಆಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.

ಲಾಕ್​ಡೌನ್​ ವೇಳೆ ಬೀದಿನಾಯಿಗಳಿಗೆ ಮಾಂಸದೂಟ ಹಾಕಿದ ಮೊತ್ತ 15 ಲಕ್ಷ ರೂ; ಹಸುಗಳಿಗೆ ಮೇವು ಪೂರೈಕೆ ಮೊತ್ತ 3 ಲಕ್ಷ ರೂ: ಬಿಬಿಎಂಪಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jun 16, 2021 | 7:34 AM

Share

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಹೇರಿದ ಲಾಕ್​ಡೌನ್ ಮನುಷ್ಯರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆಯೋ ಅಷ್ಟೇ ತೊಂದರೆಯನ್ನು ಮನುಷ್ಯರನ್ನು ಅವಲಂಬಿಸಿ ಬದುಕುವ ಮೂಕ ಪ್ರಾಣಿಗಳಿಗೂ ಉಂಟುಮಾಡಿದೆ. ಹೋಟೆಲ್, ಬೀದಿ ಬದಿ ಅಂಗಡಿಗಳು ಅಥವಾ ಕೆಲ ಮನೆಯವರು ನೀಡುತ್ತಿದ್ದ ಆಹಾರವನ್ನೇ ನಂಬಿಕೊಂಡು ಬದುಕಿದ್ದ ಬೀದಿನಾಯಿ, ಬೀದಿ ಹಸುಗಳು ಲಾಕ್​ಡೌನ್ ಸಂದರ್ಭದಲ್ಲಿ ಹಸಿವಿನಿಂದ ನರಳಾಡಿವೆ. ಇದನ್ನು ನೋಡಲಾಗದೇ ಕೆಲ ಸ್ವಯಂಸೇವಕರು ತಾವೇ ಮುಂದೆ ನಿಂತು ಅವುಗಳಿಗೆ ಆಹಾರ ಒದಗಿಸಿದ್ದಾರೆ ಕೂಡಾ. ಆದರೆ, ಈ ಬಾರಿಯ ಲಾಕ್​ಡೌನ್​ ಸಂದರ್ಭದಲ್ಲಿ ಬೀದಿ ಪ್ರಾಣಿಗಳ ಹಸಿವು ನೀಗಿಸಿದ ವೆಚ್ಚ ಎಂದು ಬಿಬಿಎಂಪಿ ಬಿಡುಗಡೆ ಮಾಡಿರುವ ಬಿಲ್​ ಎಲ್ಲರ ಹುಬ್ಬೇರುವಂತೆ ಮಾಡಿ ಅನುಮಾನಕ್ಕೂ ಕಾರಣವಾಗಿದೆ.

ಲಾಕ್​ಡೌನ್​ನಲ್ಲಿ ಬೆಂಗಳೂರಿನಲ್ಲಿರುವ ಬೀದಿನಾಯಿಗಳಿಗೆ ಮಾಂಸದೂಟ ಹಾಕಿದ ವೆಚ್ಚ ಎಂದು ಬಿಬಿಎಂಪಿ 15 ಲಕ್ಷ ರೂಪಾಯಿ ಬಿಲ್​ ಮಾಡಿದೆ. ಇತ್ತ ಅನಾಥ ಹಸುಗಳ ಹಸಿವು ನೀಗಿಸಿದ ವೆಚ್ಚ ಎಂದು 3 ಲಕ್ಷ ರೂಪಾಯಿ ಬಿಲ್​ ಮಾಡಿದೆ. ಸದ್ಯ ಈ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆಯೇ ಇಷ್ಟೊಂದು ಮೊತ್ತವನ್ನು ಬಿಬಿಎಂಪಿ ನಿಜವಾಗಿಯೂ ವ್ಯಯಿಸಿದೆಯಾ ಎನ್ನುವ ಅನುಮಾನ ಮೂಡಿದೆ.

ಆದರೆ, ಬಿಬಿಎಂಪಿ ನೀಡಿರುವ ಸಮರ್ಥನೆ ಪ್ರಕಾರ ಬೆಂಗಳೂರು ನಗರದಲ್ಲಿ 3 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿದ್ದು, ಅವುಗಳಿಗೆ ದಿನಕ್ಕೆ 250 ಗ್ರಾಂ ಬೇಯಿಸಿದ ಮಾಂಸದಂತೆ ಊಟ ಒದಗಿಸಲಾಗಿದೆಯಂತೆ. ಒಟ್ಟು ಮೂರು ಲಕ್ಷ ನಾಯಿಗಳಿಗೆ ಲಾಕ್​ಡೌನ್ ಅವಧಿಯಲ್ಲಿ ಆಹಾರ ನೀಡಿದ ಮೊತ್ತ 15 ಲಕ್ಷ ರೂಪಾಯಿ ಆಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.

ಅನಾಥ ಹಸುಗಳ ವಿಚಾರಕ್ಕೆ ಬಂದರೆ ಬಿಬಿಎಂಪಿ ಹೇಳಿರುವ ಪ್ರಕಾರ ಬೆಂಗಳೂರಿನಲ್ಲಿ ಒಟ್ಟು 800ಕ್ಕೂ ಹೆಚ್ಚು ಅನಾಥ ಹಸುಗಳಿದ್ದು, ಲಾಕ್​ಡೌನ್ ಸಂದರ್ಭದಲ್ಲಿ ಅವುಗಳಿಗೆ ಮೇವು ಒದಗಿಸಿದ ಮೊತ್ತ 3 ಲಕ್ಷ ರೂಪಾಯಿ ಆಗಿದೆ ಎನ್ನಲಾಗಿದೆ. ಅಲ್ಲದೇ ಈ ಕಾರ್ಯಕ್ಕೆ ಖಾಸಗಿ ಸಂಸ್ಥೆಗಳು ಕೂಡಾ ಕೈ ಜೋಡಿಸಿದ್ದು, ಕೆಲವೆಡೆ ಖಾಸಗಿಯವರ ಸಹಾಕರದೊಂದಿಗೆ ಹಸು ಹಾಗೂ ನಾಯಿಗಳಿಗೆ ಆಹಾರ ಒದಗಿಸಲಾಗಿದೆ ಎಂದು ತಿಳಿಸಲಾಗಿದೆ.

ಆದರೆ, ಈ ದೊಡ್ಡ ಮೊತ್ತವನ್ನು ನಿಜವಾಗಿಯೂ ಮೂಕ ಪ್ರಾಣಿಗಳ ಹಸಿವು ನೀಗಿಸಲೆಂದೇ ಖರ್ಚು ಮಾಡಲಾಗಿದೆಯಾ? ಇಲ್ಲವೇ ಅವುಗಳ ಹೊಟ್ಟೆ ತುಂಬಿಸುವ ಹೆಸರಲ್ಲಿ ಬೇರೆಡೆಗೆ ಹೋಗಿದೆಯಾ? ಎಂದು ಎದ್ದಿರುವ ಅನುಮಾನಕ್ಕೆ ಸ್ಪಷ್ಟ ಉತ್ತರ ನೀಡುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ.

ಇದನ್ನೂ ಓದಿ: ನಗರದಲ್ಲಿ 3 ಲಕ್ಷ ಬೀದಿನಾಯಿ, ಲಾಕ್​ಡೌನ್​ ವೇಳೆ ಊಟ ಸಿಗದೇ ಮನುಷ್ಯರ ಮೇಲೆ ದಾಳಿ, ವೃದ್ಧೆ ಸಾವು: ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಾ? 

30ಕ್ಕೂ ಹೆಚ್ಚು ಬೀದಿನಾಯಿಗಳನ್ನು ಅತ್ಯಾಚಾರ ಮಾಡಿದ್ದ 68ರ ವೃದ್ಧ ಅರೆಸ್ಟ್​; ‘ಅವು ಯಾವುದೇ ಪ್ರತಿರೋಧ ತೋರುತ್ತಿರಲಿಲ್ಲ’ ಎಂಬ ಸಮರ್ಥನೆ ಬೇರೆ !

Follow Us
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ