AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ಜಿಲ್ಲೆಯಲ್ಲಿ ಶತಮಾನಗಳಿಂದ ಇದೆ ಈ ಬಲಿಷ್ಠ ಅರಮನೆ! ಆದ್ರೆ ಇಲ್ಲಿ ನೆಲೆಸಿದ್ದವರಿಗೆ ಸಂತಾನ ಕುಡಿಯೇ ಇಲ್ಲ

ನಿಜಾಮರ ಕಾಲದ ಈ ಮನೆ ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು, ಬೀದರ್ ಜಿಲ್ಲೆ ಹುಮ್ನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಇದ್ದು, ಸುಸಜ್ಜಿತವಾದ 27 ಕೋಣೆ ಹೊಂದಿದ್ದು, 3 ಶತಮಾನಗಳು ಉರಳಿದರು ಮನೆ ಮಾತ್ರ ಅಚ್ಚಳಿಯದೇ ಹಾಗೆ ಉಳಿದು ಬಿಟ್ಟಿದೆ.

ಗಡಿ ಜಿಲ್ಲೆಯಲ್ಲಿ ಶತಮಾನಗಳಿಂದ ಇದೆ ಈ ಬಲಿಷ್ಠ ಅರಮನೆ! ಆದ್ರೆ ಇಲ್ಲಿ ನೆಲೆಸಿದ್ದವರಿಗೆ ಸಂತಾನ ಕುಡಿಯೇ ಇಲ್ಲ
ನಿಜಾಮರ ಕಾಲದ ಬೃಹತ್ತಾಕಾರದ ಮನೆ
Follow us
preethi shettigar
| Updated By: ಸಾಧು ಶ್ರೀನಾಥ್​

Updated on:Dec 18, 2020 | 5:40 PM

ಬೀದರ್: ನಿಜಾಮರ ಕಾಲದಲ್ಲಿ ನಿರ್ಮಾಣವಾದ ಬೃಹತ್ತಾದ ಅರಮನೆಯದು. 2 ಎಕರೆ ಪ್ರದೇಶದಲ್ಲಿರುವ ಈ ಮನೆಯಲ್ಲಿ ವಿಶಾಲವಾದ 27 ಕೊಠಡಿಗಳಿವೆ. ಮುಂಬಾಗಿಲಿನ ಹೊಸ್ತಿಲಿನಿಂದ ಹಿಡಿದು ಹಿತ್ತಲ ಮನೆ ಬಾಗಿಲ ತನಕ ಅಲ್ಲಿ ಎಲ್ಲವೂ ಪರಿಪೂರ್ಣ. ಹಾಗಿದ್ರೆ ಇದ್ಯಾವ ಅರಮನೆ ಅಂತಿರಾ ನೀವೇ ನೋಡಿ..

ವಿಶಾಲವಾದ ಮನೆಯ ಒಳಾಂಗಣ

ಬೀದರ್ ಜಿಲ್ಲೆಯ ಪ್ರವಾಸಿ ಕೇಂದ್ರವಾದ ಈ ಬೃಹತ್ತಾದ ಮನೆ ಇಂದು ನಿನ್ನೆಯದಲ್ಲ. ಈ ಮನೆಯಲ್ಲಿ ಕನ್ನಡದ ಸುಮಾರು 4 ಸಿನಿಮಾಗಳು ಚಿತ್ರೀಕರಣವಾಗಿವೆ. ಬೀದರ್ ಕೋಟೆಗೆ ಬಂದು ಚಿತ್ರೀಕರಣ ಮಾಡುವವರೆಲ್ಲ ಈ ಮನೆಗೆ ಬಂದು ಹೋಗೋದು ಗ್ಯಾರೆಂಟಿ.

ಪುರಾತನ ಕಾಲದ ಪಾತ್ರೆಗಳು

ವಿಶಾಲವಾದ ಪ್ರಾಂಗಣ, ಗೋಡೆ ತುಂಬಾ ನವಾಬ ಕಾಲದ ಪೋಟೋಗಳು, ಮನೆಯ ತುಂಬಾ ಪುರಾತನ ಕಾಲದ ತಾಮ್ರದ ಪಾತ್ರೆಗಳು, ಗೋಡೆ ಮೇಲಿನ ಗಡಿಯಾರ, ನೆಲದ ಮೇಲಿನ ಮೇಜು, ಮೂಲೆಯಲ್ಲಿರುವ ಕಬಾರ್ಡ್, ಚೇರು ಇವೆಲ್ಲವೂ ಕೂಡ 100 ವರ್ಷದಷ್ಟು ಹಳೆಯ ಸಾಮಗ್ರಿಗಳು. ತುರಿಯೋ ಮಣೆಯಿಂದ ಹಿಡಿದು ನೀರು ತುಂಬಿಡುವ ಬಿಂದಿಗೆ ವರೆಗೆ ಎಲ್ಲವೂ ಪುರಾತನವಾದವು. ಈ ಮನೆಯನ್ನ ಹೊರಗಿನಿಂದ ನೋಡಿದ್ರೆ ಯಾವುದೋ ನಿಜಾಮನ ಕಾಲದ ಮನೆಯಾಗಿರಬೇಕು ಅಂದುಕೊಳ್ತಿವಿ.

ಈ ಮನೆಯಲ್ಲಿ ವಾಸವಿದ್ದ ಜನರ ಫೋಟೊ

ಹೌದು ಈ ಮನೆ ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು, ಬೀದರ್ ಜಿಲ್ಲೆ ಹುಮ್ನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಇದೆ. ಇದು ಸುಸಜ್ಜಿತವಾದ 27 ಕೋಣೆ ಹೊಂದಿದ್ದು, 3 ಶತಮಾನಗಳು ಉರುಳಿದರು ಮನೆ ಮಾತ್ರ ಅಚ್ಚಳಿಯದೇ ಹಾಗೆ ಉಳಿದು ಬಿಟ್ಟಿದೆ. ಈ ಮನೆಯ ಪ್ರತಿಯೊಂದು ವಸ್ತುವು ಕೂಡಾ ಗತಕಾಲದ ಇತಿಹಾಸವನ್ನ ನೆನಪಿಸುತ್ತಿದ್ದು ಹುಮನಾಬಾದ್ ತಾಲೂಕಿಗೆ ಈ ಮನೆ ಕಿರೀಟ ಪ್ರಾಯದಂತೆ ಗೋಚರಿಸುತ್ತಿದೆ.

ಅಂದಿನ ಕಾಲದ ಕಾಯಿ ತುರಿಯುವ ಮಣೆ

ಶತ ಶತಮಾನಗಳಿಂದಲೂ ಈ ಮನೆಯಲ್ಲಿ ಅದೆಷ್ಟೋ ಕುಟುಂಬಗಳ ವಂಶಸ್ಥರು ಬಾಳಿ ಬದುಕಿ ಹೋಗಿದ್ದಾರೆ. ಆದರೆ ಈ ಮನೆಯಲ್ಲಿ ವಾಸವಿದ್ದವರೆಲ್ಲರಿಗೂ ಗಂಡು ಸಂತಾನವೇ ಈವರೆಗೆ ಆಗಿಲ್ಲ ಎನ್ನುವುದು ವಿಪರ್ಯಾಸ. 10ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿದ್ದರೂ ಇಲ್ಲಿಯವರೆಗೂ ಕೂಡಾ ಗಂಡು ಮಕ್ಕಳು ಇವರಿಗೆ ಆಗಿಲ್ಲ. ಎಲ್ಲರೂ ಕೂಡಾ ದತ್ತು ಪುತ್ರರನ್ನ ಪಡೆದುಕೊಂಡು ತಮ್ಮ ವಂಶವನ್ನ ಬೆಳೆಸುತ್ತಿದ್ದಾರೆ.

ಅಂದಿನ ಅಪರೂಪದ ಪಾತ್ರೆಗಳು

ಗಡಿ ಜಿಲ್ಲೆಯಲ್ಲಿ ಸುಸಜ್ಜಿತವಾದ ಅರಮನೆ ಇರುವುದು ಆಶ್ಚರ್ಯಕರ ಇನ್ನು ಈ ಮನೆಯಲ್ಲಿ ಅನೇಕ ಚಿತ್ರಗಳು ಚಿತ್ರೀಕರಣವಾಗಿದ್ದು, ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಚಿತ್ರಗಳ ಚಿತ್ರೀಕರಣಕ್ಕೆ ಈ ಮನೆ ಹೇಳಿ ಮಾಡಿಸಿದಷ್ಟು ಸುಸಜ್ಜಿತವಾಗಿದೆ. ಜೊತೆಗೆ ಈ ಮನೆಯಲ್ಲಿ ಅರಮನೆಯಲ್ಲಿರಬೇಕಾದ ಎಲ್ಲಾ ವಸ್ತುಗಳು ಇವೆ. ಸುಮಾರು 2 ಎಕರೆ ಪ್ರದೇಶದಲ್ಲಿ ಕಟ್ಟಿರೋ ಈ ಮನೆಯನ್ನ ನೋಡಲೇಂದೇ ಜನ ದೂರದ ಊರಿನಿಂದ ಬರ್ತಾರೆ. ಆದ್ರೆ ವಿಪರ್ಯಾಸ ಅಂದ್ರೆ ಈ ಎಲ್ಲಾ ಸುಪ್ಪತ್ತಿಗೆಯನ್ನ ಅನುಭವಿಸುವುದಕ್ಕೆ ಈ ಮನೆಯಲ್ಲಿ ಗಂಡು ಸಂತಾನವೇ ಇಲ್ಲ.

ಸುಮಾರು 3 ತಲೆಮಾರುಗಳಿಂದ ಈ ಮನೆಯಲ್ಲಿ ಗಂಡು ಸಂತಾವೇ ಆಗಿಲ್ಲ. ಅದು ದೇವ ಶಾಪವೋ ಎನೋ ಗೊತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನತೆ. ಯಾವುದಕ್ಕೂ ಕೊರತೆ ಇಲ್ಲದಿರುವ ಈ ಮನೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಇದ್ದು, ವಿಶೇಷತೆಗಳಿಂದ ಕೂಡಿದೆ. ಬೀದರ್ ಜಿಲ್ಲೆಯಲ್ಲಿ ಹಲವಾರು ತಾಣಗಳಿದ್ದು, ಅವುಗಳಲ್ಲಿ ಈ ಮನೆ ಕೂಡ ವಿಶೇಷವೆನಿಸಿದೆ. ಗಡಿ ಜಿಲ್ಲೆಯಲ್ಲಿ ಈ ರೀತಿಯ ಒಂದು ಸುಸಜ್ಜಿತವಾದ ಅರಮನೆ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.

ನಿಜಾಮರ ಕಾಲದ ಮನೆಯ ಹೊರಾಂಗಣ ದೃಶ್ಯ

ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರ ವೀಕ್ಷಣೆಗೆ ಮುಕ್ತ, ಆದ್ರೆ ಇದನ್ನು ಬಿಟ್ಟು..

Published On - 5:39 pm, Fri, 18 December 20

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್