AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಜಿಲ್ಲಾಡಳಿತದಿಂದಲೇ ಕನ್ನಡದ ಕಗ್ಗೊಲೆ: ಚುನಾವಣಾ ಪಾಸ್​ನಲ್ಲಿ ಕನ್ನಡ ಪದಗಳ ತಪ್ಪು ಬಳಕೆ

ಧಾರವಾಡ ಜಿಲ್ಲಾಡಳಿತ ಹೀಗೆ ಕನ್ನಡವನ್ನು ಕಗ್ಗೊಲೆ ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. ಧಾರವಾಡದಲ್ಲಿ ನಡೆದಿದ್ದ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಅನೇಕ ತಪ್ಪುಗಳನ್ನು ಮಾಡಿತ್ತು. ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದ್ದ ಸಮ್ಮೇಳನದ ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಬ್ಯಾನರ್​ಗಳಲ್ಲಿಯೇ ಅನೇಕ ತಪ್ಪುಗಳಿತ್ತು.

ಧಾರವಾಡ ಜಿಲ್ಲಾಡಳಿತದಿಂದಲೇ ಕನ್ನಡದ ಕಗ್ಗೊಲೆ: ಚುನಾವಣಾ ಪಾಸ್​ನಲ್ಲಿ ಕನ್ನಡ ಪದಗಳ ತಪ್ಪು ಬಳಕೆ
ಧಾರವಾಡ ಜಿಲ್ಲಾಡಳಿತ ಕಚೇರಿಯ ಹೊರಾಂಗಣ ದೃಶ್ಯ
preethi shettigar
| Edited By: |

Updated on: Dec 22, 2020 | 4:30 PM

Share

ಧಾರವಾಡ: ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವೇ ಇರಬೇಕು ಎನ್ನುವ ನಿಯಮವಿದೆ. ಅಲ್ಲದೇ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎನ್ನುವ ನಿಯಮವೂ ಇದೆ. ಹೀಗಿರುವಾಗ ಕನ್ನಡ ಬಳಸುವ ಅನೇಕ ಕಡೆಗಳಲ್ಲಿ ಸಿಬ್ಬಂದಿ ತಪ್ಪು ಮಾಡುವುದು ಕಂಡು ಬರುತ್ತಿರುವುದು ಹೊಸದೇನಲ್ಲ. ಆದರೆ ಇದೀಗ ಧಾರವಾಡ ಜಿಲ್ಲಾಡಳಿತ ಸ್ವತಃ ತಾನೇ ಕನ್ನಡದ ಕಗ್ಗೊಲೆ ಮಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಗ್ರಾಮ ಪಂಚಾಯತಿ ಚುನಾವಣೆಗಾಗಿ ಪತ್ರಕರ್ತರಿಗೆ ನೀಡಲಾಗಿರುವ ಪಾಸ್​ಗಳು.

ಚುನಾವಣಾ ಪಾಸ್​​ನಲ್ಲಿ ಕನ್ನಡದ ತಪ್ಪು ಬಳಕೆ

ಮಾಧ್ಯಮದವರಿಗೆ ನೀಡಿದ ಪಾಸ್​ಗಳಲ್ಲಿ ಕನ್ನಡದ ಕಗ್ಗೊಲೆ: ಹೌದು ಪಾಸ್ ಮೇಲೆ ಬರೆದಿರುವ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಬದಲಿಗೆ ‘ಚುಣಾವಣಿಎಂದು ಮುದ್ರಿತವಾಗಿದೆ. ಇನ್ನು ಪಾಸ್​ನ ಹಿಂಬದಿಯಲ್ಲಿ ಮುದ್ರಿತವಾದ ಷರತ್ತುಗಳಲ್ಲಿ ಮತದಾನದ ದಿನ ಎನ್ನುವುದನ್ನು ಮೇಲಿಂದ ಮೇಲೆ ಎರಡು ಬಾರಿ ಮುದ್ರಿಸಲಾಗಿದೆ. ಈ ರೀತಿ ಮಾಡಲು ಕಾರಣವೇನು ಎನ್ನುವುದು ಮಾತ್ರ ಗೊತ್ತಾಗಿಲ್ಲ. ಇನ್ನು ಮತಗಟ್ಟೆಗಳಲ್ಲಿ ಎನ್ನುವ ಪದ ‘ಮತಟ್ಟೆಗಗಳಲ್ಲಿಎಂದು ಮುದ್ರಿತವಾಗಿದೆ

ಚುನಾವಣಾ ಪಾಸ್​​ನಲ್ಲಿ ಕನ್ನಡದ ತಪ್ಪು ಬಳಕೆ ಮಾಡಿರುವ ಚಿತ್ರಣ

ಇದಲ್ಲದೇ ಚಿತ್ರವನ್ನು ತೆಗೆಯಲು ಎಂಬ ಪದದ ಬದಲು ‘ತಗೆಯಲುಎಂದು ಮುದ್ರಿಸಿದ್ದಾರೆ. ಇನ್ನು ಪೂರ್ವಸಿದ್ಧತೆಎನ್ನುವ ಪದ ಪೂರ್ವಸಿದ್ದತೆಆಗಿದೆ. ‘ಛಾಯಾಚಿತ್ರಎನ್ನುವ ಪದ ಛಾಯಚಿತ್ರಆಗಿದೆ. ಹೀಗೆ ಒಂದೆರಡು ಪ್ಯಾರಾಗಳಲ್ಲಿಯೇ ಇಷ್ಟೊಂದು ತಪ್ಪುಗಳನ್ನು ಮಾಡಲಾಗಿದ್ದು, ಜಿಲ್ಲಾಡಳಿತದ ಈ ಕನ್ನಡ ಕಗ್ಗೊಲೆ ನೋಡಿ ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ

ಇದು ಮೊದಲೇನಲ್ಲ! ಧಾರವಾಡ ಜಿಲ್ಲಾಡಳಿತ ಹೀಗೆ ಕನ್ನಡವನ್ನು ಕಗ್ಗೊಲೆ ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. ಧಾರವಾಡದಲ್ಲಿ ನಡೆದಿದ್ದ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೇ ಅನೇಕ ತಪ್ಪುಗಳನ್ನು ಮಾಡಿತ್ತು. ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದ್ದ ಸಮ್ಮೇಳನದ ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಬ್ಯಾನರ್​ಗಳಲ್ಲಿಯೇ ಅನೇಕ ತಪ್ಪುಗಳಿತ್ತು.

ಕನ್ನಡ ಭಾಷೆಯ ಉಳಿವಿಗಾಗಿ ಮಾಡುತ್ತಿರುವ ಸಮ್ಮೇಳನದಲ್ಲಿಯೇ ಅನೇಕ ತಪ್ಪುಗಳನ್ನು ಮಾಡಿತ್ತು. ನಂತರದಲ್ಲಿ ಈ ಬಗ್ಗೆ ಟಿವಿ 9 ವರದಿ ಮಾಡಿದ ಹಿನ್ನೆಲೆಯಲ್ಲಿ ಅವುಗಳನ್ನು ಸರಿಪಡಿಸಲಾಗಿತ್ತು. ಇದೀಗ ಚುನಾವಣೆಯಂತಹ ಗಂಭೀರ ವಿಚಾರದಲ್ಲಿಯೂ ಜಿಲ್ಲಾಡಳಿತ ಇಂತಹ ತಪ್ಪುಗಳನ್ನು ಮಾಡಿರುವುದು ವಿಪರ್ಯಾಸ ಸಂಗತಿಯಾಗಿದೆ.

ಕನ್ನಡ ಭಾಷಾ ಬೆಳವಣಿಗೆಗೆ ಚಲನಶೀಲ ಪಾರಿಭಾಷಿಕ ಕೋಶ ನಡೆಸುವ ಪ್ರಾಧಿಕಾರ ಬೇಕು

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?