AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಮನೆ ಮಗಳಂತೆ ಸಾಕಿರುವ ಆಕಳಿಗೆ ಸೀಮಂತ; ರೈತ ಕುಟುಂಬದಿಂದ 7 ತಿಂಗಳ ಗರ್ಭಿಣಿ ಗೌರಿಗೆ ವಿಶೇಷ ಪೂಜೆ

ಶ್ರೀಕಾಂತ್ ಗುರಮ್ಮನವರ ಕುಟುಂಬಸ್ಥರು ಖುಷಿ ಖುಷಿಯಿಂದ ಮನೆಯ ಮಗಳಂತೆ ಆಕಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಮನೆ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಹೂವು ಮುಡಿಸಿ ಶೃಂಗಾರ ಮಾಡಿದ್ದಾರೆ. ಗರ್ಭಿಣಿ ಆಕಳಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದು, ಆರತಿ ಬೆಳಗಿ ಆರ್ಶೀವದಿಸಿದ್ದಾರೆ.

ಗದಗ: ಮನೆ ಮಗಳಂತೆ ಸಾಕಿರುವ ಆಕಳಿಗೆ ಸೀಮಂತ; ರೈತ ಕುಟುಂಬದಿಂದ 7 ತಿಂಗಳ ಗರ್ಭಿಣಿ ಗೌರಿಗೆ ವಿಶೇಷ ಪೂಜೆ
ಮನೆ ಮಗಳಂತೆ ಸಾಕಿದ್ದ ಆಕಳಿಗೆ ಸೀಮಂತ
TV9 Web
| Edited By: |

Updated on:Jul 03, 2021 | 12:40 PM

Share

ಗದಗ: ಪ್ರಾಣಿ-ಪಕ್ಷಿಗಳಿಗೆ ಮನೆ ಸದಸ್ಯ ಸ್ಥಾನ ನೀಡಿ ಪ್ರೀತಿಯಿಂದ ಸಾಕಿ ಸಲುಹಿದ ಅನೇಕ ಉದಾಹರಣೆಗಳಿವೆ. ವಿವಿಧ ಪ್ರಕಾರಗಳಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುವ ಪ್ರಾಣಿ ಪ್ರಿಯರೂ ಇದ್ದಾರೆ. ಆದರೆ ಗದಗದ ರೈತ ಕುಟುಂಬ ಒಂದು ಹೆಜ್ಜೆ ಮುಂದೆಯಿಟ್ಟಿದೆ. ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಮುದ್ದಿನಿಂದ ಸಾಕಿದ ಆಕಳು ಗೌರಿ ಮೊದಲ ಬಾರಿಗೆ ಗರ್ಭಧರಿಸಿದ್ದಾಳೆ. ಹೀಗಾಗಿ ಈ ಆಕಳಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಶ್ರೀಕಾಂತ್ ಗುರಮ್ಮನವರ ಕುಟುಂಬಸ್ಥರು ಖುಷಿ ಖುಷಿಯಿಂದ ಮನೆಯ ಮಗಳಂತೆ ಆಕಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಮನೆ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಹೂವು ಮುಡಿಸಿ ಶೃಂಗಾರ ಮಾಡಿದ್ದಾರೆ. ಗರ್ಭಿಣಿ ಆಕಳಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದು, ಆರತಿ ಬೆಳಗಿ ಆರ್ಶೀವದಿಸಿದ್ದಾರೆ.

ಅಪ್ಪ ಕೊಟ್ಟ ಉಡುಗೊರೆ 20 ವರ್ಷಗಳ ಹಿಂದೆ ಬಸಪ್ಪ ಗುರಮ್ಮನ್ನವರ ಮಗಳು ಲಕ್ಷ್ಮೀಗೆ ಆಕಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈ ಆಕಳ ಮೊಮ್ಮಗಳು ಈಗ ಗರ್ಭಿಣಿ ಆಕಳು. ಲಕ್ಷ್ಮೀ ಈಗ ಆರು ವರ್ಷದ ಹಿಂದೆ ಮತ್ತೆ ತನ್ನ ತವರು ಮನೆಗೆ ಈ ಮೊಮ್ಮಗಳು ಗೌರಿಯನ್ನು ವಾಪಸ್ ಉಡುಗೊರೆಯಾಗಿ ನೀಡಿದ್ದಾರೆ. ಮಗಳು ಪ್ರೀತಿಯಿಂದ ಕೊಟ್ಟ ಆಕಳು ಗೌರಿಯನ್ನು ತವರು ಮನೆಯವರು ಅಷ್ಟೇ ಪ್ರೀತಿಯಿಂದ ಸಾಕಿದ್ದಾರೆ.

ಈ ಗೌರಿ ಈಗ ಏಳು ತಿಂಗಳ ತುಂಬು ಗರ್ಭಿಣಿ. ‌ಹೀಗಾಗಿ ಇಡೀ ಕುಟುಂಬದ ಸದಸ್ಯರು ಮನೆಯ ಮೊಮ್ಮಗಳಂತೆ ಸಾಕಿದ ಗೌರಿಯ ಸೀಮಂತ ಕಾರ್ಯಕ್ರಮ ಖುಷಿ ಖುಷಿಯಿಂದ ಮಾಡಿದ್ದಾರೆ. ಸದ್ಯ ಮುದ್ದಿನ ಆಕಳಿನ ಕರುವಿಗೆ ರೈತ ಕುಟುಂಬ ಕಾತುರದಿಂದ ಕಾಯುತ್ತಿದೆ. ಈ‌ ರೈತ ಕುಟುಂಬ ಮಕ್ಕಳಂತೆಯೇ ಸಾಕಿದ ಆಕಳಿಗೆ ಗರ್ಭಿಣಿ ಸ್ತ್ರೀಯರಂತೆ ಸೀಮಂತ ಮಾಡಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಹ್ಯಾಂಡ್‌ಪಂಪ್‌ನಿಂದ ನಾಯಿಗೆ ನೀರು ಕುಡಿಯಲು ಸಹಾಯ ಮಾಡುವ ಪೊಲೀಸ್ ಅಧಿಕಾರಿಯ ಚಿತ್ರ ವೈರಲ್.!

ಪ್ರೀತಿಯ ಶ್ವಾನಕ್ಕೆ ಇಡೀ ಕುಟುಂಬ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ಸಂಭ್ರಮಿಸಿದೆ

Published On - 12:39 pm, Sat, 3 July 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?