AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಮನೆ ಮಗಳಂತೆ ಸಾಕಿರುವ ಆಕಳಿಗೆ ಸೀಮಂತ; ರೈತ ಕುಟುಂಬದಿಂದ 7 ತಿಂಗಳ ಗರ್ಭಿಣಿ ಗೌರಿಗೆ ವಿಶೇಷ ಪೂಜೆ

ಶ್ರೀಕಾಂತ್ ಗುರಮ್ಮನವರ ಕುಟುಂಬಸ್ಥರು ಖುಷಿ ಖುಷಿಯಿಂದ ಮನೆಯ ಮಗಳಂತೆ ಆಕಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಮನೆ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಹೂವು ಮುಡಿಸಿ ಶೃಂಗಾರ ಮಾಡಿದ್ದಾರೆ. ಗರ್ಭಿಣಿ ಆಕಳಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದು, ಆರತಿ ಬೆಳಗಿ ಆರ್ಶೀವದಿಸಿದ್ದಾರೆ.

ಗದಗ: ಮನೆ ಮಗಳಂತೆ ಸಾಕಿರುವ ಆಕಳಿಗೆ ಸೀಮಂತ; ರೈತ ಕುಟುಂಬದಿಂದ 7 ತಿಂಗಳ ಗರ್ಭಿಣಿ ಗೌರಿಗೆ ವಿಶೇಷ ಪೂಜೆ
ಮನೆ ಮಗಳಂತೆ ಸಾಕಿದ್ದ ಆಕಳಿಗೆ ಸೀಮಂತ
TV9 Web
| Edited By: |

Updated on:Jul 03, 2021 | 12:40 PM

Share

ಗದಗ: ಪ್ರಾಣಿ-ಪಕ್ಷಿಗಳಿಗೆ ಮನೆ ಸದಸ್ಯ ಸ್ಥಾನ ನೀಡಿ ಪ್ರೀತಿಯಿಂದ ಸಾಕಿ ಸಲುಹಿದ ಅನೇಕ ಉದಾಹರಣೆಗಳಿವೆ. ವಿವಿಧ ಪ್ರಕಾರಗಳಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುವ ಪ್ರಾಣಿ ಪ್ರಿಯರೂ ಇದ್ದಾರೆ. ಆದರೆ ಗದಗದ ರೈತ ಕುಟುಂಬ ಒಂದು ಹೆಜ್ಜೆ ಮುಂದೆಯಿಟ್ಟಿದೆ. ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಮುದ್ದಿನಿಂದ ಸಾಕಿದ ಆಕಳು ಗೌರಿ ಮೊದಲ ಬಾರಿಗೆ ಗರ್ಭಧರಿಸಿದ್ದಾಳೆ. ಹೀಗಾಗಿ ಈ ಆಕಳಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಶ್ರೀಕಾಂತ್ ಗುರಮ್ಮನವರ ಕುಟುಂಬಸ್ಥರು ಖುಷಿ ಖುಷಿಯಿಂದ ಮನೆಯ ಮಗಳಂತೆ ಆಕಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಮನೆ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಹೂವು ಮುಡಿಸಿ ಶೃಂಗಾರ ಮಾಡಿದ್ದಾರೆ. ಗರ್ಭಿಣಿ ಆಕಳಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದು, ಆರತಿ ಬೆಳಗಿ ಆರ್ಶೀವದಿಸಿದ್ದಾರೆ.

ಅಪ್ಪ ಕೊಟ್ಟ ಉಡುಗೊರೆ 20 ವರ್ಷಗಳ ಹಿಂದೆ ಬಸಪ್ಪ ಗುರಮ್ಮನ್ನವರ ಮಗಳು ಲಕ್ಷ್ಮೀಗೆ ಆಕಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈ ಆಕಳ ಮೊಮ್ಮಗಳು ಈಗ ಗರ್ಭಿಣಿ ಆಕಳು. ಲಕ್ಷ್ಮೀ ಈಗ ಆರು ವರ್ಷದ ಹಿಂದೆ ಮತ್ತೆ ತನ್ನ ತವರು ಮನೆಗೆ ಈ ಮೊಮ್ಮಗಳು ಗೌರಿಯನ್ನು ವಾಪಸ್ ಉಡುಗೊರೆಯಾಗಿ ನೀಡಿದ್ದಾರೆ. ಮಗಳು ಪ್ರೀತಿಯಿಂದ ಕೊಟ್ಟ ಆಕಳು ಗೌರಿಯನ್ನು ತವರು ಮನೆಯವರು ಅಷ್ಟೇ ಪ್ರೀತಿಯಿಂದ ಸಾಕಿದ್ದಾರೆ.

ಈ ಗೌರಿ ಈಗ ಏಳು ತಿಂಗಳ ತುಂಬು ಗರ್ಭಿಣಿ. ‌ಹೀಗಾಗಿ ಇಡೀ ಕುಟುಂಬದ ಸದಸ್ಯರು ಮನೆಯ ಮೊಮ್ಮಗಳಂತೆ ಸಾಕಿದ ಗೌರಿಯ ಸೀಮಂತ ಕಾರ್ಯಕ್ರಮ ಖುಷಿ ಖುಷಿಯಿಂದ ಮಾಡಿದ್ದಾರೆ. ಸದ್ಯ ಮುದ್ದಿನ ಆಕಳಿನ ಕರುವಿಗೆ ರೈತ ಕುಟುಂಬ ಕಾತುರದಿಂದ ಕಾಯುತ್ತಿದೆ. ಈ‌ ರೈತ ಕುಟುಂಬ ಮಕ್ಕಳಂತೆಯೇ ಸಾಕಿದ ಆಕಳಿಗೆ ಗರ್ಭಿಣಿ ಸ್ತ್ರೀಯರಂತೆ ಸೀಮಂತ ಮಾಡಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಹ್ಯಾಂಡ್‌ಪಂಪ್‌ನಿಂದ ನಾಯಿಗೆ ನೀರು ಕುಡಿಯಲು ಸಹಾಯ ಮಾಡುವ ಪೊಲೀಸ್ ಅಧಿಕಾರಿಯ ಚಿತ್ರ ವೈರಲ್.!

ಪ್ರೀತಿಯ ಶ್ವಾನಕ್ಕೆ ಇಡೀ ಕುಟುಂಬ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ಸಂಭ್ರಮಿಸಿದೆ

Published On - 12:39 pm, Sat, 3 July 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್